ಗುರುವಾರ, ಜೂನ್ 15, 2017

Panchabootha

 ಪಂಚಭೂತಗಳು ಪ್ರಕೃತಿಯ ಮೂಲ ಧಾತುಗಳು .ಬ್ರಹ್ಮಾಂಡದ ಚರಾಚರಗಳು  ಪಂಚಭೂತಗಳಿಂದ ಆದದ್ದು .ಭೂಮಿ ಅಥವ ಪೃಥ್ವಿ ,ಜಲ ಅಥವ ನೀರು, ತೇಜಸ್ ಅಥವ ಬೆಂಕಿ,ಪವನ ಅಥವ ಗಾಳಿ, ಶೂನ್ಯ ಅಥವ ಆಕಾಶ  ಇವೆ ಆ ಐದು ಪಂಚ ಮಹಾಭೂತಗಳು . ಪಂಚಮಹಭೂತಗಳ ಸಿದ್ದಾಂತ  ಕೇವಲ ಭಾರತದಲ್ಲ  ಪುರಾತನ ಗ್ರೀಕ್, ಈಜಿಪ್ಟ್   ಮತ್ತಿತರ ರಾಷ್ಟ್ರಗಳ ತತ್ವಜ್ಞಾನಿಗಳು ಕೂಡ  ಇದರ ಬಗ್ಗೆ  ಪ್ರತಿಪಾದಿಸಿದ್ದಾರೆ .

ಪಂಚಭೂತಗಳು ವಿಷ್ಣುವಿನಿಂದ ಜನಿಸಿದವು  ಎಂದು ಪುರಾಣಗಳು ಹೇಳುತ್ತವೆ . ಹಿಂದೊಮ್ಮೆ , ವಿಷ್ಣು , ಶಿವನನ್ನು ಕುರಿತು  ತಪಸನ್ನು ಆಚರಿಸುತ್ತಿದ್ದ, ಶಿವನ ಆಶಿರ್ವಾದದಿಂದ ಅನೇಕ  ಪರ್ವತ ಶಿಕರ , ಜರಿ , ನದಿ ತೊರೆಗಳು , ವಿಷ್ಣುವಿನ ದೇಹದಿಂದ  ಜನ್ಮ ತಾಳಿದವು . ನಂತರೆ ವಿಷ್ಣುವಿನ ದೇಹದಿಂದ, ಮೂರು ಗುಣಗಳು , ಪಂಚಭೂತಗಳು, ಕೊನೆಯಲ್ಲಿ ಪಂಚ ಜ್ಞಾನೇಂದ್ರಿಯ ಗಳು ಪ್ರಕಟವಾದವು . ಆತ್ಮನಿಂದ  ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಬೆಂಕಿ, ಬೆಂಕಿಯಿಂದ ನೀರು ಮತ್ತು ಎಲ್ಲ ೪ ಧಾತುಗಳಿಂದ ಭೂಮಿಯಾ ಸೃಷ್ಟಿಯಾಯಿತು . ವೇದಾಂತ ಪುರಾಣಗಳ  ಪ್ರಕಾರ , ಮನಷ್ಯನ ಪಂಚೇಂದ್ರಿಯಗಳು ಪಂಚಭೂತಗಳಿಂದ ಆವಿಷ್ಕರವಾಯಿತು .  ಆಕಾಶದಿಂದ ಕಿವಿ , ವಾಯುವಿನಿಂದ  ಚರ್ಮ, ಅಗ್ನಿಯಿಂದ ಕಣ್ಣು, ನೀರಿನಿಂದ ನಾಲಿಗೆ ಮತ್ತು ಭೂಮಿಯಿಂದ ನಾಸಿಕ ಹೊರಹೊಮ್ಮಿತು

ಪುರಾಣಗಳು , ಉಪನಿಷತ್ತುಗಳ ಜೊತೆ , ಆಯುರ್ವೇದ ಕೂಡ ಪಂಚ ಭೂತಗಳ ಮಹತ್ವವನ್ನು ಹೇಳುತ್ತದೆ .ಇದರ ಪ್ರಕಾರ , ಮನುಷ್ಯನಮರಣಾನಂತರ ಅವನ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ. ಇದು ಪ್ರಕೃತಿಯ ಸಮತೋಲನದ ಗುಟ್ಟು . ಆಯುರ್ವೇದದ ಪ್ರಕಾರ  ಮನುಷ್ಯನ ಆರೋಗ್ಯ ಕೂಡ ಪಂಚಭೂತಗಳಿಂದ ನಿಯಂತ್ರಿಸಲ್ಪಡುತ್ತದೆ . ದೇಹದ ಯಾವುದೇ ರೀತಿಯ ಅಸ್ವಸ್ಥೆ ಗೆ , ಪಂಚಭೂತಗಳ ಅಸಮತೊಲನವೆ ಕಾರಣ. ಆಯುರ್ವೇದದಲ್ಲಿ ಹೇಳುವ ವಾತ ಪಿತ್ತ , ಕಫ ದೋಷಗಳು , ಪಂಚಭೂತಗಳ ಪ್ರಾತಿನಿದ್ಯ .ಇನ್ನು ಪ್ರಾಚಿನ ಹಸ್ತ  ಮುದ್ರ ಕೂಡ ಪಂಚಭೂತಗಳ ಸಿದ್ಧಾಂತದಿಂದ ಆದ  ಜ್ಞಾನ . ಹಸ್ತ ಮುದ್ರಿಕೆಯ ಪ್ರಕಾರ ಹೆಬ್ಬೆರಳು ಅಗ್ನಿಯನ್ನು , ತೋರುಬೆರಳು ವಾಯುವನ್ನು, ಮದ್ಯಬೆರಳು ಆಕಾಶವನ್ನು ,ಉಂಗುರ ಬೆರಳು ಪ್ರುಥ್ವಿಯನ್ನು ಮತ್ತು ಕಿರು ಬೆರಳು ನೀರನ್ನು ಪ್ರತಿನಿದುಸುತ್ತದೆ

ದಕ್ಷಿಣ ಭಾರತದಲ್ಲಿ , ಪಂಚಭೂತಸ್ಥಳಂ ಎಂದು ಕರೆಯಲ್ಪಡುವ ಶಿವನ  ೫ ಬೇರೆ ಬೇರೆ ದೇವಸ್ಥಾನಗಳಿವೆ . ಈ ೫ ದೇವಸ್ಥಾನಗಳು ಪಂಚಬೂತಗಳನ್ನು  ಪ್ರಥಿನಿದಿಸುತ್ತವೆ. ಕಂಚಿಪುರಂನ ಎಕಾಮ್ಬರೆಶ್ವರ ದೇವಸ್ಥಾನ , ತ್ರಿಚಿಯ ಜಂಬುಕೇಶ್ವರ, ತಿರುವನಮಲೈ ನ ಅರುಣಾಚಲೇಶ್ವರ, ಕಳಹಸ್ತಿಯ ಶ್ರೀ ಕಾಳಹಸ್ಥೆಶ್ವರ ಮತ್ತು ಚಿದಂಬರಂನ ತಿಳ್ಳಿನಟರಾಜ ದೇವಸ್ಥಾನ .

ನಮ್ಮ ದೇಹದಂತೆ ಮನ್ಸಸ್ಸು ಕೂಡ ಪಂಚಭೂತಗಳ ಅತಿ ಸೂಕ್ಧ್ಮ ರೂಪದಿಂದ  ಆದದ್ದು . ಹಾಗಾಗಿ ಯಾವ ಪಂಚಭೂತ ಪ್ರಧಾನವಾಗಿರತ್ತೊದೋ ,ಮನುಷ್ಯನು ಅದೇ ರೀತಿಯ ವಿವಿದ ಮನಸ್ಥಿತಿ ಮತ್ತು ಭಾವಪರವಶತೆ ಯನ್ನು ಅನುಭವಿಸುತ್ತಾನೆ . ಉಧಾಹರಣೆಗೆ ಹೇಳುವುದಾದರೆ , ಪ್ರುಥ್ವಿಯು  ಪ್ರಬಲವಾದಾಗ ಆರಾಮದ ಅಥವ ಅಸ್ವಸ್ಥೆಯ , ಮತ್ತು ಮನಸೀನ ಭಾರವಾದ ಸ್ತಿತಿ, ಅದೇ ರೀತಿ ವಿಹರಿಸುತ್ತಿರುವ, ತೇಲುತಿರುವ ಮನಸಲ್ಲಿ  ನೀರಿನ  ,ಮುಂದೆ ನಡೆಯುವ ಅಥವ  ಸನ್ನಿವೇಶಗಳಿಂದ ಓಡಿ ಹೋಗಬೇಕು ಎಂದೆನಿಸುವ ಸಮಯಗಳ್ಳಲ್ಲಿ ಗಾಳಿಯಾ  , ಸಾಧಿಸುವ ಛಲ ,ರೋಷ , ಬೆಂಕಿಯ , ಮತ್ತು ಪೂರ್ಣತೆಯ ,ಹಗುರತೆಯ  ನಮ್ಮನ್ನು  ಸುತ್ತುವರೆದಾಗ ಮನಸ್ಸು ಆಕಾಶದ ಅಧೀನದಲ್ಲಿರುತ್ತದೆ . ಪಂಚಬೂತಗಳು   ನೇರವಾಗಿ ನಮ್ಮ ಮನಸನ್ನು ನಿಯಂತ್ರಿಸುತ್ತವೆ ಹಾಗಾಗಿ ಜ್ಞಾನಿಗಳು , ಋಷಿಮುನಿಗಳು ಮೂಲವಸ್ತುಗಳ ನಿಗ್ರಹಕ್ಕೆ , ಹತೋಟಿಗೆ ಯೋಗ ಧ್ಯಾನ ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು . ಯೋಗದ ಅಂತಿಮ,ಕಟ್ಟ ಕಡೆಯ ಉದ್ದೇಶ ಬೂತಶುದ್ದಿ - ಅಂದರೆ ಪಂಚಭೂತಗಳನ್ನು ಚೊಕ್ಕಟಗೊಲಿಸುವ  ಕೆಲಸ .ಹಾಗಾಗಿ ಶಾಂತಿ , ಸಮ್ರುದ್ದಿ ಮತ್ತು ಚಿರಂತನವಾದ ನೆಮ್ಮದಿಯ ಜೀವನ ನಮ್ಮದಾಗಬೇಕಾದರೆ ಪಂಚಬೂತಗಳ ಪ್ರಾಮುಖ್ಯತೆ ಹಾಗು ಅದರ ಮಾರ್ಮಿಕ ಫಲ ಪರಿಣಾಮಗಳ ಬಗೆಗಿನ ತಿಳುವಿಕೆ ತುಂಬ ಮುಖ್ಯ .




ಶನಿವಾರ, ಜುಲೈ 25, 2015

Thriguna

 ಮನುಷ್ಯನ  ದೇಹ ಪಂಚಭೂತಗಳಿಂದಾದ್ದು . ಮನುಷ್ಯನ ಮನಸ್ಸು ಗುಣಗಳಿಂದ ನಿಯಂತ್ರಿಸಲ್ಪಡುತ್ತದೆ . ಮಾನವನ  ಶಕ್ತಿ ಮೂರು ಗುಣಗಳಲ್ಲಿ ಹಂಚಿಹೊಗಿವೆ .ತಮಸ್ಸು , ರಜಸ್ಸು ಮತ್ತು ಸಾತ್ವಿಕ ಎಂಬುದೇ ಈ ಮೂರು ಗುಣಧರ್ಮಗಳು .  ಹಿಂದೂ ಸಂಸ್ಕೃತಿಯ  ದೇವರುಗಳಾದ , ,ಬ್ರಹ್ಮ ,ವಿಷ್ಣು ,ಮಹೇಶ್ವರರು  ವಿಭಿನ್ನ ಗುಣಗಳ ಸ್ವರೂಪ . ಬ್ರಹ್ಮನು  ರಜೋ ಗುಣದ ವಿಷ್ಣು ಸಾತ್ವಿಕ ಗುಣದ ಮತ್ತು ಶಿವನು ಎಲ್ಲ ಗುಣಗಳ ಪ್ರತಿರೂಪ . ವ್ಯಕ್ತಿಯ ವ್ಯಕ್ತಿತ್ವದ ಮೇಲೆ  ಈ ಮೂರು ಗುಣಗಳು ಪ್ರಭಾವ ಬೀರುತ್ತವೆ . ತಮೋ ಗುಣ ಜಡತ್ವದ , ರಜೋ ಗುಣ ಶಕ್ತಿ, ತೀವ್ರತೆಯಾ ಹಾಗು ಸಾತ್ವಿಕ ಗುಣ ಬೆಳಕಿನ , ಪರಿಶುದ್ದತೆಯ ಸಂಕೇತ .ಭೂಮಿಯ ಮೇಲಿರುವ ಎಲ್ಲ ವಸ್ತುಗಳು ,ಜೀವಿಗಳನ್ನು ಈ ಮೂರು ಗುಣದ ಆದರದ ಮೇಲೆಯೂ ವಿಂಗಡಿಸಬಹುದು

ಅಂಧಕಾರ ಕತ್ತಲೆಯ ಪ್ರತಿರೂಪವಾದ ತಮಸ್ಸು ಮಾಯೆ,ಉದಾಸೀನತೆ , ವಿನಾಶ, ಸಾವು, ಜಡತ್ವ, ಆಲಸ್ಯವನ್ನು ಪ್ರೋತ್ಸಾಹಿಸುವ ಶಕ್ತಿ .  ಪ್ರಪಂಚದ ಸೃಷ್ಟಿಯಲ್ಲಿ ತಮಸ್ಸು ರಾಕ್ಷಸೀ ಗುಣ .  ರಾಕ್ಷಸರಲ್ಲಿ ಮನೆಮಾಡಿರುವ ಗುಣ . ತಮೋಗುಣ ಹೆಚ್ಚಾದಂತೆಲ್ಲ ಮನುಷ್ಯ ತನ್ನ ದಿನಗಳ ಹೆಚ್ಚಿನ ಸಮಯ ನಿದ್ದೆ ಯಲ್ಲಿ ಕಳೆಯುತ್ತಾನೆ , ಕೆಲಸದ ಮೇಲಿನ ಅವನ ಶ್ರದ್ದೆ ,  ಆಸಕ್ತಿ ಕಡಿಮೆ ಆಗುತ್ತದೆ . ಈ ರೀತಿಯ ಅನುಭುವ ಪ್ರತಿಯೊಬ್ಬರಿಗೆ ಕೆಲವೊಮ್ಮೆ , ಕೆಲವೊಂದು ದಿನ ಆಗಬಹುದು . ಆದರೆ ಈ ಆಲಸ್ಯ ಪ್ರತಿದಿನದ ಮಾತಾಗುವುದು  ಒಳ್ಳೆಯ ಲಕ್ಷಣವಲ್ಲ . ಹೆಚ್ಚಿನ ತಾಮಸಕ್ಕೆ ಶರಣಾದ ವ್ಯಕ್ತಿ , ತನ್ನ ಕೆಲಸಗಳನ್ನು ಪ್ರತಿ ದಿನ ಮುಂದೂಡುತ್ತಾ ಬರುತ್ತಾನೆ ಇದರಿಂದ ಅಪಜಯ ಅವನದಾಗುತ್ತದೆ , ಖಿನ್ನತೆಗೆ ಒಳಗಾಗುತ್ತಾನೆ , ತನ್ನನ್ನು ತಾನೆ ಹಳಿಯುತ್ತಾ ಆತ್ಮಹತ್ಯೆಗೆ ಶರಣಾಗುತ್ತಾನೆ .  ಅರಿವಿಗೆ ಬರದಂತೆಯೇ , ತಮೋಗುಣ ಅವನ ಸುಂದರ ಜೀವನವನ್ನು ಕಬಳಿಸುತ್ತದೆ . ಎಲ್ಲೆ ಮೀರಿದ ,ತಮೋ ಗುಣವನ್ನು ಯಾವುದೇ  ಆಯುಧದಿಂದ ದಂಡಿಸಲು ಸಾಧ್ಯವಿಲ್ಲ , ಇದರ ನಿಗ್ರಹಕ್ಕೆ ಇರುವ ಒಂದೇ ಮಾರ್ಗ ಸುಪ್ತವಾಗಿರುವ ಸಾತ್ವಿಕ ಗುಣವನ್ನು ಹೆಚ್ಚಿಸಿಕೊಳ್ಳುವುದು .

 ಇನ್ನು ಚುರುಕುತನದ ಪ್ರತೀಕವಾದ ರಜೋ ಗುಣ ಉಳಿದೆರಡು ಗುಣಗಳನ್ನು ಬೆಂಬಲಿಸುವನ್ತದ್ದು . ಅತಿ ಹೆಚ್ಚು  ಚುರುಕುತನ,ಉತ್ಸುಕತೆ ಮತ್ತು ಭಾವೋದ್ವೇಗ ರಜೋ ಗುಣದ ಮುಖ್ಯ ಲಕ್ಷಣಗಳು . ರಜೋ ಗುಣ ತಮಸ್ಸಿಗಿಂತ ಧನಾತಮ್ಕ  ಸಾತ್ವಿಕಕಿಂತ ಋಣಾತ್ಮಕ . ನಾವು ನೋಡಿರಬಹುದು ಕೆಲವು ವ್ಯಕ್ತಿಗಳು , ಒಂದು ಕ್ಷಣಕ್ಕಾದರೂ ಒಂದು ಕಡೆ ಸ್ಥಿರವಾಗಿ ನಿಲ್ಲಲಾರರು , ಅವರ  ಮನಸ್ಸು ಯಾವಾಗಲು , ನೂರಾರು ಯೋಚನೆ, ಯೋಜನೆ, ಆಲೋಚನೆಗಳ ಮಳೆಯಲ್ಲಿ ತೊಳಲಾಡುತಿರುತ್ತದೆ .ಇದು ಇನ್ನು ಮಿತಿಮೀರಿ  ಗೊಂದಲಕ್ಕೆ ಒಳಗಾಗುತ್ತಾರೆ . ಮನದೊಳಗಿನ ಗೊಂದಲಗಳು ,ಮುಂಗೊಪಿತನ ,ಆಕ್ರಮಣ ರೂಪತಾಳಿ, ಕ್ರೌರ್ಯಕ್ಕೆ ತಿರುಗತ್ತದೆ . ಜೀವನದಲ್ಲಿ ಎಲ್ಲವನ್ನು ಸಾಧಿಸುವ ಶಕ್ತಿ ಇವರುಗಳಿಗೆ ಇದ್ದರು ಮಿತಿಮೀರಿದ  ರಜೋ ಗುಣದ ಪ್ರಭಾವದಿಂದ ಜೀವನ ವ್ಯರ್ಥವಾಗುತ್ತದೆ .

 ಅಪರೂಪವಾದ ಗುಣ , ಸತ್ವ ಗುಣ.ಸತ್ವ ಗುಣದಿಂದ ಕೂಡಿದ ವಸ್ತು , ವ್ಯಕ್ತಿ ತನ್ನ ಬಾಹ್ಯ ಮತ್ತು ಅಂತರಿಕ ಜಗತ್ತನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾನೆ  . ಸಾತ್ವಿಕತೆಯನ್ನು ಮೈಗೂದಿಡಿಕೊಂಡ ವ್ಯಕ್ತಿ ತನ್ನ ಸುತ್ತಮುತ್ತಲಿನ, ಜನ , ಪರಿಸರವನ್ನು ಸದಾ, ಒಳ್ಳೆಯ ರೀತಿಯಲ್ಲಿ ಕಾಣುತ್ತಾನೆ .  ಹೂವು , ಹಣ್ಣು , ದೇವರಿಗೆ  ಸಮರ್ಪಿಸುವ ನೈವೇದ್ಯ ಎಲ್ಲ ಸಾತ್ವಿಕತೆಯ ರೂಪಗಳು  . ಒಂದು ಸುಂದರವಾದ , ಹೂವನ್ನು   ಕಂಡಾಗ ನಮ್ಮ  ಮನಸಿನಲ್ಲಿ ಉಂಟಾಗುಗುವ ಆಹ್ಲಾದತೆಯ ಅನುಭವವೇ ಸಾತ್ವಿಕ ಗುಣ. ಸಾತ್ವಿಕ ಮನಸ್ಸು ಸದಾ ಪ್ರಶಾಂತ , ಸ್ಥಿರ ,ಸುಖಪ್ರದ .ಸಾತ್ವಿಕ ವ್ಯಕ್ತಿಗಳು ಸದಾ ಪ್ರಪಂಚದ , ಒಳಿತಿಗಾಗಿ ಚಿಂತಿಸುವವರು , ಅದಕ್ಕಾಗಿ ದುಡಿಯವವರು, .  ಅವರ ಆಹಾರ,ಉಡುಗೆ ತೊಡುಗೆ ಮಾತು ಎಲ್ಲ ಹಿತ ಮಿತವಾದದ್ದು . ವಿಚಾರ ಮೆಲುಸ್ತರದ್ದು . ತುಳಸಿದಾಸರು, ತ್ಯಾಗರಾಜರು, ರಮಣ  ಮಹರ್ಷಿಗಳು, ಪರಮಹಂಸರು, ಸ್ವಾಮಿ ವಿವೇಕಾನಂದರು ಇವರೆಲ್ಲ ಸಾತ್ವಿಕ ಗುಣಕ್ಕೆ ಇನ್ನೊಂದು ಹೆಸರು . ಎಲ್ಲದರಲ್ಲೂ ಸುಂದರತೆಯನ್ನು,ಸತ್ಯತೆಯನ್ನು ಕಾಣುವ, ಕಿಚ್ಚು ದ್ವೇಷ ,ಅಸೂಯೆಗಳಿಂದ ವಿಚಲಿತರಾಗದವರೆ ಸಾತ್ವಿಕ ಪುರುಷರು .

ಮೂರು ಗುಣಗಳಲ್ಲಿ ಒಂದು ಗುಣವನ್ನು ಒಳ್ಳೆಯದು,ಇನ್ನೊಂದನ್ನು ಕೆಟ್ಟದ್ದು ಎಂದು ವಿಂಗಡಿಸಿ ಭೆರ್ಪಡಿಸಲು ಸಾಧ್ಯವಿಲ್ಲ . ತಮಸ್ಸು ಇಲದೆ ನಿದ್ರೆ ಇಲ್ಲ , ರಜಸ್ಸು ಇಲ್ಲದೆ ಚಟುವಟಿಕೆ ಇಲ್ಲ.ಸಾತ್ವಿಕ ಗುಣ ಮೆಲುಸ್ತರದ್ದು , ಅದನ್ನು ಹೆಚ್ಚಿಸಿ, ಉಳಿದೆರಡು  ಗುಣಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು .ಸಾತ್ವಿಕತೆ ಹೆಚ್ಚಿ,ತಮೋ ರಜೋ ಗುಣಗಳು ಸಮತೊಲನದಲ್ಲಿದ್ದಾಗ, ಮನಸ್ಸು ಪ್ರಫುಲ್ಲ, ಸ್ಥಿರ. ಆತ್ಮ ಆಹ್ಲಾದಮಯ ,ಜೀವನ ಸಾರ್ಥಕ .




ಗುರುವಾರ, ಜುಲೈ 23, 2015

yoga

ಜೂನ್ ೨೧, ೨೦೧೫ ರಂದು ಅಂತರಾಷ್ಟ್ರೀಯ ಯೋಗ ದಿನವನ್ನು  ಆಚರಿಸಲಾಯಿತು . ೧೯೨ ರಾಷ್ಟ್ರಗಳು ಯೋಗಾಸನದ ಅಭ್ಯಾಸದಲ್ಲಿ ಭಾಗವಿಸಿದ್ದವು . ೫೦೦೦ ವರ್ಷಗಳಷ್ಟು  ಹಿಂದೆ ಭಾರತದಲ್ಲಿ ಉಗಮವಾದ ಯೋಗದ ಏಕೈಕ ಗುರಿ ಆತ್ಮ ಮತ್ತು ಪರಮಾತ್ಮನ ಮಿಲನದ ಅನುಭವ . ಯೋಗ ಮನುಷ್ಯನ ಮಾನಸಿಕ ,ಭೌದ್ಧಿಕ ಮತ್ತು ಆದ್ಯಾತ್ಮಿಕ ಅಭ್ಯಾಸ .  ಜೂನ್ ೨೧ನ್ನೇ ಯೋಗ ದಿನವೆಂದು ಗುರಿತುಸುವುದರ ಹಿಂದೆ ಅನೇಕ ಕಾರಣಗಳಿವೆ  . ಭೂಮಿಯ ಉತ್ತರಾರ್ಧ ಗೋಳದ ಅತ್ಯಂತ ಧೀರ್ಘವಾದ ದಿನ,ದಕ್ಷಿಣಾಯಣ ಸಂಧಿ ಕಾಲ . ಜಗದ ಆದಿಗುರು, ಆದಿಯೋಗಿ ಶಿವನು ದಿನ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದನೆಮ್ಬುದು ಇನ್ನೊಂದು ನಂಬಿಕೆ 

ಯೋಗದ ಹುಟ್ಟು ಎಂದು , ಯಾರಿದರ ಕರ್ತ್ರು ಎಂಬುದರ ಬಗ್ಗೆ ಯಾವುದೇ ನಿಖರ ಮಹಿತಿಗಳಿಲ್ಲ . ಇತಿಹಾಸ ಕಾರರ ಪ್ರಕಾರ ಇದು ವೇದ ಕಾಲಕಿಂತಲೂ ಹಳೆಯದು .ಈಗ ಪ್ರಚಲಿತದಲ್ಲಿರುವ ಪತಂಜಲಿ ಯೋಗ ತೀರೇ ಇತ್ತೀಚಿನದು . ಇದು ೧ ನೆ ಶತಮಾನಕ್ಕೆ ಸೇರಿದ ಗ್ರಂಥ .  ಕೇವಲ  ನಮ್ಮ ದೇಶಕ್ಕೆ ಸೀಮಿತವಾಗಿದ್ದ ಯೋಗಬ್ಯಾಸವನ್ನು ವಿಶ್ವಕ್ಕೆ ಪರಿಚಯಿಸಿದ  ಮೊದಲ ಭಾರತಿಯ ಸ್ವಾಮಿ ವಿವೇಕಾನಂದರು  .ಇವರ ನಂತರ ಅನೇಕ ಆಧ್ಯಾತ್ಮಿಕ ಗುರುಗಳು , ಯೋಗಿಗಳು ಈ ಪರಂಪರೆಯನ್ನು  ಮುಂದುವರೆಸುತ್ತಿದ್ದಾರೆ . ೧೯  ನೆ ಶತಮಾನದಲ್ಲಿ ಕೇವಲ ದೈಹಿಕ ವ್ಯಾಯಾಮವಾಗಿ ವಿಶ್ವದೆಲ್ಲೆಡೆ ಪ್ರಸ್ಸಿದಿಯಾದ ಯೋಗ ಭಾರತದಲ್ಲಿ ಮಾತ್ರ ಕೇವಲ ವ್ಯಾಯಮವಲ್ಲ . ಅದು  ಧ್ಯಾನ ಮತ್ತು ಆಧ್ಯಾತ್ಮಿಕತೆಯ ಸತ್ಹ್ವಾಂಶ . 

ವೇದಗಳು ಹಳೆಯದಾಯಿತು ,ಉಪನಿಷತ್ತು ಮತ್ತು ಗ್ರಂಥಗಳ  ಬಳಕೆ ಕಡಿಮೆ ಆಯಿತು .  ಹೊಸ ನೀರು ಬಂದು ಹಳೆ ನೀರು ಕೊಚ್ಚಿ ಹೋಗುವಂತೆ ಕಾಲದೊಂದಿಗೆ ಭಾರತದಲ್ಲಿ ಹುಟ್ಟಿದ ಕಲೆ-ಸಂಸ್ಕೃತಿ ,ಆಚರ -ವಿಚಾರ , ಸಂಪ್ರದಾಯ , ಕಟ್ಟಲೆಗಳು ಮೂಲೆಗುಂಪಾದವು  ಪುರಾತನ ನಂಬಿಕೆಗಳನ್ನು ,  ಪ್ರಯೋಜನಕ್ಕೆ ಬಾರದ ವಿಷಗಳು ಎಂದು  ಮೂಗು ಮುರಿಯುವ ಯುವಜನ , ಯೋಗಬ್ಯಾಸವನ್ನು ಮಾತ್ರ ನಂಬುತ್ತಾರೆ,ಗೌರ್ರವಿಸುತ್ತರೆ , ಅನುಸರಿಸುತ್ತಾರೆ  . ಇಷ್ಟು ವರ್ಷ ಕಳೆದರು ಯೋಗ ಇಂದಿಗೂ ಪ್ರಸ್ತುತ 

ಆರೋಗ್ಯವೇ ಭಾಗ್ಯ . ಯೋಗ ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ  ಅವಶ್ಯಕ .  ಪ್ರತಿಯೊಬ್ಬ ಮನುಷ್ಯನಿಗೂ  ತನ್ನ ಜೀವನದ ಪ್ರತಿ ಘಟ್ಟದಲ್ಲೂ ಯೋಗ  ಸಹಾಯಕ್ಕೆ ಬರುತ್ತದೆ  ಯೋಗಭ್ಯಾಸದಲ್ಲಿ ತೊಡಗಿಸಿಕೊಂಡ ವ್ಯಕ್ತಿಗೆ  , ಶಿಸ್ತು  ಸಂಯಮ,ಆರೋಗ್ಯ,  ಸ್ಥಿರ ಮನಸ್ಸು , ಚುರುಕಾದ ಬುದ್ಧಿ ತಾನಾಗಿಯೇ ಬರುತ್ತದೆ . ಹೃದ್ರೋಗ,ಅಸ್ತಮಾ ಕ್ಯಾನ್ಸರ್ ಮುಂತಾದ ಖಾಯಿಲೆಗಳ ನಿಗ್ರಹಕ್ಕೆ ಯೋಗ ಪರಿಣಾಮಕಾರಿ . ಪ್ರಾಣಯಾಮ , ಧ್ಯಾನ ಮತ್ತು ಯೋಗದ ಅಭ್ಯಾಸದಿಂದ ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲಾಗುವ ಅಥ್ಯದ್ಭುಥ ಪರಿಣಾಮಗಳನ್ನು ವೈದ್ಯರು , ಮನೋವಿಜ್ಞಾನಿಗಳು ಕೂಡ ಪುಷ್ಟಿಕರಿಸುತ್ತಾರೆ. ವಿಧ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು , ಯುವಕರಲ್ಲಿ ಮಾನಸಿಕ ಸ್ಥಿರತೆಯನ್ನು , ವಯಸ್ಕರಲ್ಲಿ ಸಾಧಿಸುವ ಛಲ ಮತ್ತು ತಾಳ್ಮೆಯನ್ನು  ಹಾಗು ವೃದ್ದಾಪ್ಯದಲ್ಲಿ ಅತ್ಯಂತ ಅವಶ್ಯಕವಾದ ಮಾನಸಿಕ ನೆಮ್ಮದಿ ಮತ್ತು ಆರೋಗ್ಯವನ್ನು ಯೋಗ ನೀಡುತ್ತದೆ . 

ಇಷ್ಟೆಲ್ಲಾ  ಪ್ರಯೋಜನಕಾರಿಯಾದ ಯೋಗಾಭ್ಯಾಸ ಪ್ರತಿಯೊಬ್ಬರ ಜೀವನದಲ್ಲಿ ದಿನಚರಿಯಾಗಿ ಇರದಿರುವುದು ವಿಷಾದಕರ.ಕೇವಲ ಖಾಯಿಲೆ ಬಂದಾಗ, ಖಿನ್ನತೆ ಗೆ ಒಳಗಾದಾಗ , ಸ್ಥೂಳಕಾಯರಾದಾಗ , ವೈದ್ಯರ ಸಲಹೆಯಾ ಮೇರೆಗೆ ಯೋಗಾಸನದ ಕಡೆಗೆ ಮುಖ ಮಾಡುವವರು ಅದನ್ನು ದಿನಚರಿಯ ಭಾಗವಾಗಿ ಅಭ್ಯಸಿಸಬೇಕು , ಅನುಸರಿಸಬೇಕು . ಯೋಗದ   ಮಹತ್ವ ವನ್ನು  ಅರಿತ ಅದೆಷ್ಟೋ ಬಹುದೆಶಿಯ ಕಂಪನಿ ಗಳು ತಮ್ಮಲ್ಲಿ  ಕೆಲಸ ಮಾಡುವ ಉದ್ಯೋಗಿಗಳಿಗೆ , ಆಗಿನ್ದಾಗೆ ಯೋಗಾಭ್ಯಾಸದ ಕಾರ್ಯಾಗಾರಗಳನ್ನು ,ತರಗತಿಗಳನ್ನು ನಡೆಸುತ್ತದೆ. ಇದರ ಹಿಂದಿರುವ ಉತ್ತಮ , ಉದ್ದೇಶ ನೌಕರರ ದೈಹಿಕ,ಮಾನಸಿಕ ,ಆರೋಗ್ಯ ವೃದ್ದಿ ಅದರಿಂದ ಹೆಚ್ಚುವ ಕಾರ್ಯ ಕ್ಷಮತೆ .ಇದನ್ನು ನಮ್ಮ ಸರ್ಕಾರಿ ಕಛೇರಿಗಳಲ್ಲಿ , ಶಾಲಾ ಕಾಲೆಗುಗಳಲ್ಲಿ ರೂಡಿಸಿಕೊಳ್ಳಬೇಕು  .ಹಳ್ಳಿಯ ಜನ ಶ್ರಮಿಕರು ,  ಪಟ್ಟಣ ದ ಜನರ ಜೀವನ ಶೈಲಿಗೆ ಮಾತ್ರ ಯೋಗದ ಅವಶ್ಯಕತೆ ಇದೆ ಎಂದು ವಾದಿಸುವುದು ಅವೈಜಾನಿಕ . ಕೇವಲ ಕೆಲವು ವಯಸ್ಸಿನ , ಧರ್ಮದ, ಜಾತಿಯ, ಜನಾಂಗದ , ಪ್ರದೇಶದ ಜನರಿಗೆ ಮಾತ್ರ ಯೋಗದ ಅವಶ್ಯಕತೆ ಇದೆ ಎಂಬುದು ತಪ್ಪು ಕಲ್ಪನೆ .ಮಾನಸಿಕ ದೈಹಿಕ ಆರೋಗ್ಯ ಪ್ರತಿಯೊಬ್ಬರ ಹಕ್ಕು,ಅದನ್ನು ಕಾಪಾಡಿ ಕೊಳ್ಳುವುದು ನಮೆಲ್ಲರ ಕರ್ತವ್ಯ .  
ಯೋಗ ಕೇವಲ ಒಂದು ದಿನದ ಅಬ್ಯಾಸವಲ್ಲ , ಪ್ರತಿನಿತ್ಯ ಮಾಡುವುದೇ ಯೋಗಬ್ಯಾಸ . ಯೋಗ ನಮ್ಮ ಹಿರಿಯರು, ಯೋಗಿಗಳು ,ಚಿಂತಕರು, ತತ್ವಜ್ಞಾನಿಗಳ ನಮಗಾಗಿ ಬಿಟ್ಟು ಹೋಗಿರುವ ಪರಂಪರೆ. ಅದನ್ನು ನಮ್ಮ ದಿನನಿತ್ಯದ ಜೀವನದಲ್ಲಿ ರೂಡಿಸಿಕೊಳ್ಳುವುದರ ಬಗ್ಗೆ ಚಿಂತನೆ ನಡೆಸೋಣ . 

ಗುರುವಾರ, ಅಕ್ಟೋಬರ್ 3, 2013

Ammana habba

ಈ ವಾರಂತ್ಯ ಕುಶಾಲನಗರಕ್ಕೆ ಹೋಗಿ ಬರಬೇಕು ಎಂದು ಮೊದಲೇ ನಿರ್ದರಿಸಿದ್ದ ನಾನು, ಕಿರಣ್ ,ಆಫೀಸ್ ಗೆ ರಜೆ ಹಾಕಿ ಶುಕ್ರವಾರ ಬೆಳಗ್ಗೆ ೫ ಗಂಟೆಗೆ ಕಾರ್  ಸ್ಟಾರ್ಟ್ ಮಾಡಿಕೊಂಡು ಹೊರೆಟೆವು . ನಾನು ಎ ಸಲ ಊರಿಗೆ ಹೋಗಲು ಇನ್ನೊಂದು ಕಾರಣವು ಇತ್ತು - ಬನಶಂಕರಿ ಜಾತ್ರೆ ಅದಾಗಿತ್ತು (ಅಮ್ಮನ ಹಬ್ಬ ). ಸಣ್ಣವಳಿದ್ದಾಗ ಪ್ರತಿ ವರ್ಷ ನೋಡಿ ಆನಂದಿಸುತ್ತಿದ್ದ ಈ ಜಾತ್ರೆ ವೈಭವ ನಾನು ನೋಡ್ದೆ ಸುಮಾರು ೧೨ ವರ್ಷಗಳು ಕಳೆದಿರಬೇಕು. ಬೆಂಗಳೂರಿನಿಂದ ಕುಶಾಲನಗರದವರೆಗಿನ ೪ ಗಂಟೆ ಪ್ರಯಾಣ ಕಳೆಯಲು ನಾನು ಕಿರಣ್ ಗೆ  ಜಾತ್ರೆಯ ಮತ್ತು ಅದು ನಡೆಯುವ ಊರಿನ ಬಗ್ಗೆ ನನಗೆ ತಿಳಿದಷ್ತು ಹೇಳತೊಡಗಿದೆ .

ಕೊಡಗಿನ ಉತ್ತರಕ್ಕೆ ಇರುವ  ಒಂದು ಸಣ್ಣ ಹಳ್ಳಿ ಹೆಬ್ಬಾಲೆ . ನಾನು ಬೆಳೆದು  ಕಲಿತ ಊರು . ಈಗ ಅಲ್ಲಿ ನಾವು ವಾಸವಿಲ್ಲದೆ ೧೦-೧೫  ವರ್ಷಗಳು ಕಳೆದರು ಊರು ಎಂದಾಗ ಮೊದಲು ಮನಸ್ಸಿಗೆ  ಬರುವುದು ಇದೆ ಹಳ್ಳಿ . ಸುತ್ತಮುತ್ತಲ ಹಳ್ಳಿಗಳಿಗೆ ಹೋಲಿಸಿದರೆ ಅಂಚೆಕಚೇರಿ, ಪೋಲಿಸ್ ಸ್ಟೇಷನ್ ,  ಪ್ರೌಡ ಶಾಲೆ,  ಆಸ್ಪತ್ರೆ   ಹೀಗೆ ಇನ್ನು ಕೆಲವು ಮೂಲ ಸೌಲಭ್ಯಗಳು ಇದ್ದಿದ್ದು ಹೆಬ್ಬಾಲೆಯಲ್ಲಿ ಮಾತ್ರ. ಕೊಡಗು ಮತ್ತು  ಹಾಸನ ಜಿಲ್ಲೆಯ ಗಡಿಭಾಗವಾಗಿದ್ದ ಹೆಬ್ಬಾಲೆಯಲ್ಲಿ  ಇಲ್ಲವೆ ಇಲ್ಲ ಎನ್ನುವಷ್ಟು ಕಡಿಮೆ ಕೊಡವರು .  ಶಾಲೆಯ ಶಿಕ್ಷಕರಾಗಿಯೋ ಇಲ್ಲ ಆಸ್ಪತ್ರೆಯಾ ದಾದೀಯರಗಿಯೋ ಬಂದಾ ಒಂದೆರಡು ಕುಟುಂಬಗಳು ಇದ್ದವು. ಅಲ್ಲದೆ ಬೇರೆ ಬೇರೆ ಜಾತಿಯ , ಪಂಗಡಗಳ ನೂರಾರು ಕುಟುಂಬಗಳು ಇದ್ದವು . ಭಾರತದ ಇತರ ಎಲ್ಲ ಹಳ್ಳಿಯಂತೆ ಕೃಷಿ ಪ್ರಧಾನವಗಿತ್ತು . ಕಾವೇರಿ ನದಿ ಹಳ್ಳಿಯ ಪಕ್ಕದಲ್ಲೇ ಹರಿಯುತಿದ್ದಳಾದರು ಯಾರಿಗೂ ಕೈಗೆ ಸಿಗುತಿರಲಿಲ್ಲ . ಕಾರಣ , ಊರ ಹೊರಗಿನ ಹೊಲಗಳ ,ಮತ್ತು ಸಣ್ಣ ಕಾಡಿನ ಹಾದಿಯನ್ನು ದಾಟಿದ ಮೇಲೆ ಅದರ  ಹರಿವು ಕಾಣುತಿತ್ತು .ಆದರಿಂದ ಹಳ್ಳಿಯ ರೈತರು ಕೃಷಿಗೆ ನೀರಾವರಿಯನ್ನೇ ಅವಲಂಬಿಸಿದ್ದರು.

ಬನಶಂಕರಿ ಊರಿನ ಗ್ರಾಮ ದೇವತೆ . ಹೆಸರೇ ಹೇಳುವಂತೆ ಈ ದೇವರು ನೆಲೆಸಿದ್ದು ಬನ (ಸಣ್ಣ ಕಾಡು) ದಲ್ಲಿದ್ದ ಒಂದು ಸಣ್ಣ ಗುಡಿಯಲ್ಲಿ. ಅದೇ ನಮಗೆ ದೇವಸ್ತಾನ .ಕಾಡಿನ ಬಲ ಭಾಗದಲ್ಲಿ ಸಣ್ಣಗೆ ಹರಿಯುತಿದ್ದ ತೊರೆ , ಎಡ ಬಾಗದಲ್ಲಿ ದೊಡ್ಡ ಕಾಲುವೆಯ ಏರಿ . ಕಾಲುವೆಯ ಏರಿಯಾ ಮೇಲೆ  ಸ್ವಲ್ಪ ದೂರ ನಡೆದು ಹೋದರೆ ಹಳೆಕೋಟೆ ಎಂಬ ಇನ್ನೊಂದ್ ತೀರ ಸಣ್ಣ ಹಳ್ಳಿ .  ಇದೆ ಕಾಲುವೆ ಏರಿಯ ಇನ್ನೊಂದು ಬಾಗಕ್ಕೆ  ಸರಕಾರೀ ಶಾಲೆಯ ಆಟದ ಮೈದಾನ .  ಹಳೆಕೊಟೆಯ ಹಳ್ಳಿಯ ಮಕಳ್ಳೇಲ್ಲ ಹೆಬ್ಬಾಲೆಯ  ಶಾಲೆಗೇ ಬರುತಿದ್ದರು . ಅವರು ಬರುವಾಗ ಅ ಕಾಡಿನಲ್ಲಿ ಇದ್ದ ಹಲವರು , ನೆಲ್ಲಿಕಾಯಿ, ಮಾವು, ಸೀಬೆ ,ಹುಣಸೆ  ತಡಸಲ ಹಣ್ಣು , ಹೀಗೆ ಹಲವರು ಮತಿತ್ತರ ಹಣ್ಣು ಗಳ್ಳನ್ನು ಕಿತ್ತು ತರುತಿದ್ದರು .ಕೆಲವೊಮ್ಮೆ , ತಾವು ಬೂತ ದೆವ್ವ ಗಳನ್ನೂ ನೋಡಿದ , ಯಾರೋ ಹೆಂಗಸು ನಕ್ಕ , ಗೆಜ್ಜೆಯ ಶಬ್ದವಾದ  ಕತೆಗಳನ್ನು ತರುತಿದ್ದರು .  ಇದನೆಲ್ಲ ನಿಜವೆಂದು ನಂಬಿ ಹೆದರುತಿದ್ದ ನಾವು , ದೇವಸ್ತಾನವಿರಲಿ ಅದರ ಕಾಡಿನ ಬಳಿಯೂ ಹೋಗುತಿರಲಿಲ್ಲ. ಒಟ್ಟಿನಲ್ಲಿ ದೇವಸ್ತನವಗಿದ್ದರು , ದೆವ್ವಗ ಜಾಗವೆಮ್ಬಂತೆ ನಾವು ಹೆದರುತ್ತಿದೆವು . 

 ಪಾರ್ವತಿಯ ಇನ್ನೊದು ಅವತಾರವಾದ ಬನಶಂಕರಿಗೆ ವರುಷಕ್ಕೆ ಒಂದು ಬಾರಿ ಜಾತ್ರೆ ಉತ್ಸವ ಪೂಜೆ ಎಲ್ಲ . ಇನ್ನುಳಿದ ದಿನಗಳು ಬಾಗಿಲು ಮುಚ್ಚಿರುತಿತ್ತು . ಬನಶಂಕರಿಯಾ ಜಾತ್ರೆಯೆಂದರೆ ಹಳ್ಳಿಯವರಿಗೆಲ್ಲ  ದೊಡ್ಡ ಹಬ್ಬ . ನಾವು ಅದೇ ಹಳ್ಳಿಯವರಲ್ಲ ಎಂಬ ಕಾರಣಕ್ಕೆ ನನ್ನ ಅಮ್ಮ , ಹಬ್ಬವನ್ನು ಮೊದ್ಲು ಆಚಿರಿಸುತಿರಲಿಲ್ಲ .ಆದರೆ ನನ್ನ  ಅಜ್ಜಿ ಹಳಿಯಲ್ಲಿ , ಇರೋವರೆಗೂ ಅ ಗ್ರಾಮದ ದೇವತೆ ಹಬ್ಬ ವನ್ನು ಮಾಡಬೇಕು ಎಂದು ಅಮ್ಮನಿಗೆ ,ಹೇಳಿದ ಮೇಲೆ  ನಮ್ ಮನೆಯಲ್ಲೂ ಹಬ್ಬದ ಆಚರಣೆ ಶುರವಾಇಯ್ತು 

ಜಾತ್ರೆ ಹಬ್ಬ-ಹುಣ್ಣೀಮೆಗಳ ಆಚರಣೆ  ಸ್ಥಳದಿಂದ - ಸ್ಥಳಕ್ಕೆ ಭಿನ್ನವಾಗಿರುತ್ತದೆ . ಅದೇ ರೀತಿ ಬನಶಂಕರಿಯಾ ಜಾತ್ರೆ  ತನ್ನದೇ ರೀತಿಯಲ್ಲಿ ವಿಭಿನ್ನವಾಗಿತ್ತು .ತಿಥಿ , ನಕ್ಷತ್ರ ಇತ್ಯಾದಿಗಳು ನಂಗೆ ಗೊತಿಲ್ಲದಿದ್ದರು , ನವೆಂಬರ್ ಅತ್ವ ಡಿಸೆಂಬರ್ ಮಾಹೆಯ ಅಮಾವಸ್ಯೆಯ ದಿನ ಈ  ಹಬ್ಬ ನಡೆಯುತ್ತದ್ದೆ ಎಂದು ನಾನು ತಿಳಿದಿದ್ದೇನೆ . ಜಾತ್ರೆಯ ಒಂದು ತಿಂಗಳು ಮುಂಚೆಯೇ , ಕೆಲವು ಸಂಘಗಳು, ಇತರ ಊರಿನ ಹಿರಿಯರು , ಗ್ರಾಮ ಪಂಚಾಯಿತಿ ವತಿ ಇಂದ  ಮನೆಗೆ ಹೋಗಿ ಉತ್ಸವದ ಕರ್ಚಿಗೆ ಹಣ ಸಂಗ್ರಹಿಸುತ್ತಾರೆ . ಹಬ್ಬದ ಪ್ರಯುಕ್ತ , ಸುತ್ತ ಮುತ್ತಲಿನ ಶಾಲಾ ಮಕ್ಕಳಿಗೆ ವಿವಿದ ರೀತಿಯ , ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ದೆಗಳು ಒಂದು ವಾರ ಮುಂಚೆ  ಶುರುವಾಗುತಿದ್ದವು . ಎಲ್ಲ ಕರ್ಯಕ್ರಮ್ಗು ನಾನು ಓದುತಿದ್ದ ಪ್ರಾಥಮಿಕ ಶಾಲೆಯಲ್ಲೇ ,ಜರುಗುತಿದ್ದರಿಂದ  ನಮಗೆ ೧ ವಾರಗಳ ಕಾಲ ಪಾಟವೆ  ಇಲ್ಲ , ಬರಿ ಆಟ .ಹಬ್ಬದ ದಿನ ಮತ್ತು ಅದರ ಮಾರನೆ ದಿನ ಸುತ್ತ ಮುತ್ತಲಿನ ಎಲ್ಲ ಶಾಲಾ ಕಾಲೆಜುಗಳಿಗೆ ರಜೆ .ಮೊದಲೇ ಹೇಳಿದ ಹಾಗೆ ದೇವಸ್ತಾನ , ಸಣ್ಣ ಕಾಡಿನ ಮಧ್ಯೆ ಇತ್ತು . ಜಾತ್ರೆ ಎಂದ ಮೇಲೆ ಎಷ್ಟು ಜನ ಸೇರುತ್ತಾರೆ . ಎಷ್ಟು ಭಕ್ತಾದಿಗಳು ಬರುತ್ತಾರೆ . ಇವರೆಲ್ಲ ಬನದ  ದಾರಿ ನಡೆಯುವುದು ಸುಲಭವಾಗಲು "ಬನ ಶುಚಿಗೊಳಿಸುವ " ಕಾರ್ಯಕ್ರಮ ನಡೆಯುತ್ತಿತ್ತು. ಜಾತ್ರೆಯ ನಂತರ ಒಂದು ವರ್ಷಗಳ ಕಾಲ ದೇವಸ್ಥಾನದ ಬಳಿ ಯಾರು ಹೋಗುತ್ತಿರಲ್ಲಿಲ್ಲವದ್ದರಿಂದ ಅಲ್ಲಿ ಬೆಳೆಯುತ್ತಿದ್ದ ಗಿಡ ಮರ ಬಳ್ಳಿಗಳು ದೇವಸ್ತಾನ ಮತ್ತು ಹೋಗುವ ದಾರಿಯನ್ನು ಆಕ್ರಮಿಸಿಕೊಳ್ಳುತ್ತಿದ್ದವು .ಈ ಬೇಡದ ಗಿಡ ಬಳ್ಳಿ ಗಳ್ಳನ್ನು ಕಡಿದು ದಾರಿ ಸ್ವಚ್ಛ ಮಾಡುವುದೇ "ಬನ ಶುಚಿ" ಕೆಲಸ . ಈ ಕೆಲಸ ಜಾತ್ರೆ ಗೆ ಎರಡು ದಿನ ಮುಂಚೆ ಪ್ರತಿ ವರ್ಷ ನಡೆಯುತ್ತಿತ್ತು .ಈ ಶುಚಿಗೊಳಿಸುವ ಕೆಲಸದ ಜವಾಬ್ದಾರಿಶಾಲಾ ಮಕ್ಕಳದ್ದು . ಚಿಕ್ಕ್ಕ  ಚಿಕ್ಕ ಗಿಡ , ಮರ, ಪೊದೆ  ಬಳ್ಳಿಗಳನ್ನು ಕಡಿದು  ಮಣ್ಣು ಹಾಕಿ ನೆಲವನ್ನು ಸಮ ಮಾಡುವ ಕೆಲಸ  ಪ್ರಾಯಾಸದಾಗಿದ್ದರು ನಮಗೆ ತುಂಬಾ ಮೋಜು ಕೊಡುತ್ತಿತ್ತು . ಶಾಲೆಯ ಪಾಠಗಳಿನ್ದ ಬಿಡುಗಡೆ ಸಿಗುತಿತ್ತು  ಎಂಬ ಕಾರಣಕ್ಕೋ ಅಥವಾ ವರುಷ ಪೂರ್ತಿ ಭಯ ಪಡುತಿದ್ದ ಕಾಡಿಗೆ ಇಂದು  ಹೋಗುವಾ ಸಾಹಸ ಮಾದುತಿದ್ದೇವೆ ಎಂಬ ಕಾರಣಕ್ಕೋ ಗೊತ್ತಿಲ್ಲ .ನಮಗೆ ಕೆಲಸಗಳು ಸಹ  ನಮ್ಮ ವಯಸಿನ್ನ  ಹಾಗೆ ವಿಂಗಡಣೆ  ಆಗುತಿತ್ತು . ೭ ನೆ ತರಗತಿಯಾ ಮೆಲೆಇನ ದರ್ಜೆಯ ಗಂಡು ಮಕ್ಕಳಿಗೆ  , ದೊಡ್ಡ ಮರ ಗಿಡಗಳನ್ನು ಕಡಿಯುವ ಅವುಗಳನ್ನು ಒಟ್ಟು ಮಾಡುವ ಕೆಲಸ. ಸಣ್ಣ ಪ್ರಾಯದ ಪ್ರಾಥಮಿಕ ಶಾಲೆಯ  ಮಕ್ಕಳು , ಚಿಕ್ಕ್ಕ ಚಿಕ್ಕ ಗಿಡಗಳನ್ನು ಕಡಿದು  ನೆಲದ ಮೇಲೆ ಕುಳಿತು ಹುಲ್ಲು, ಕಳೆಗಳನ್ನು ಕಿತ್ತು ಮಣ್ಣು ಹದ ಮಾಡುತಿದ್ದರು . ಹೆಚ್ಚಿನ್ನ ಮಕ್ಕಳು ರೈತರ ಕುಟುಂಬದವರಾಗಿದ್ದರಿಂದ , ಎಲ್ಲರಿಗು ಕೈ ತೋಟ  , ಹೊಲ ಗದ್ದೆಗಲ್ಲಿ ಕೆಲಸ ಮಾಡಿ ಅಭ್ಯಾಸವಿದ್ದ ಕಾರಣ,ಒಂದೇ ದಿನದಲ್ಲಿ  ಮಕ್ಕಳೆಲ್ಲ  ಬನ  ಶುಚಿಗೊಳಿಸುವ ಕೆಲಸ ಮುಗಿಸುತ್ತಿದ್ದೆವು . ದಿನ ಮುಗಿಯುವುದರೊಳಗೆ . ಕಾಡಿನ ಪ್ರಾರಂಭದಿಂದ , ದೇವಸ್ಥಾನದ  ಬಾಗಿಲ ವರೆಗೂ ಸುಮಾರು  ೫ ಅಡಿ ಅಗಲದ ಕಾಲು ದಾರಿ  ಸಿದ್ದವಾಗುತಿತ್ತು . ಈ ದಾರಿಯು ಇನ್ನೇನು ದೇವಸ್ಥಾನವನ್ನು  ಮುಟ್ಟುವ ಮೊದಲು ಇನ್ನು ಸ್ವಲ್ಪ ಅಗಲವಾಗಿ , ಸುಮಾರು ೩೦ ಅಡಿ ವ್ಯಾಸದ  ವೃತ್ತಾಕಾರದ ಸ್ವರೂಪ ಪಡೆದು ಮತ್ತೆ ಸಣ್ಣ ದಾಗಿ ದೇವಸ್ತಾನ ಬಾಗಿಲು ಮುಟ್ಟುತಿತ್ತು . ನಾವೇ ಕಡಿದ , ಮರದ ದಿಮ್ಮಿಗಳ್ಳನ್ನು , ರೆಂಬೆ ಕೊಂಬೆ ಗಳೆನ್ನೆಲ್ಲ ಒಟ್ಟು ಗೂಡಿಸಿ ಸರಿಯಾದ ರೀತಿಯಲ್ಲಿ ಅವುಗಳನ್ನು , ಒಂದರ ಮೇಲೆ ಒಂದು ಜೋಡಿಸಿ , ವೃತ್ತಾಕಾರದ  ಹಸನು ಗೊಳಿಸಿದ ಜಾಗದಲ್ಲಿ ಕೆಂಡ ತುಳಿಯುವ (ಹಾಯುವ) ಕಾರ್ಯಕ್ಕೆ  ಸಿದ್ಧ ಮಾಡುತ್ತಿದೆವ್ವು ಈ ವೃತ್ತದ ಪರಿದಿಯ ಸುತ್ತ ಒಂದರಿಂದ ಒಂದಕ್ಕೆ ಸುಮಾರು ೩ ಅಡಿ ಅಂತರವಿರುವಂತೆ  ಗಳುಗಳನ್ನು ನೆಟ್ಟು ಸುತ್ತ ಹಗ್ಗ ಕಟ್ಟುತ್ತಿದ್ದೆವು .ಕುಸ್ತಿಯ  ಅಖಾಡ ದಂತೆ . ಕೆಂಡ ತುಳಿಯುವ ದೃಶ್ಯವನ್ನು ಜನರು ಈ ಪರಿದಿಯ ಹೊರಗೆ ಕುಳಿತು ವೀಕ್ಷಿಸಬೇಕು ಕಾಲುದಾರಿಯ ಎರಡು ಕಡೆ ಬಿದಿರನ ಬೊಂಬುಗಳನ್ನು ನೆಟ್ಟು ಹಗದಿಂದ ಬಿಗಿದು ಬೇಲಿಯ ರೀತಿ ಮಾಡುತ್ತಿದೆವು . ಹೀಗೆ ದೇವಸ್ತಾನದ ಆವರಣವನೆಲ್ಲ ಸ್ವಚ್ಛ ಗೊಳಿಸಿದ ನಮಗೆ ಏನೋ ಸಾದಿಸಿದ ಹಿಗ್ಗು . ಸಂಜೆಯ ವೇಳೆಗೆ ಊರಿನ ಹಿರಿಯರಿಂದ ಎಲ್ಲ ಮಕ್ಕಳಿಗೂ  ೫೦ ಪೈಸೆ ಯಾ ಎರಡು ಪೆಪ್ಪೆರ್ಮೆಂಟ್  ಸಿಗುತಿತ್ತು .

ಹಬ್ಬದ ದಿನ , ಈಡಿ ಹಳ್ಳಿಯನ್ನು ಮಾವಿನ ಸೊಪ್ಪು , ಬಣ್ಣದ ಕಾಗದ ಗಳಿಂದ  ಸಿನ್ಗರಿಸ್ತುತ್ತಿದ್ದರು . ಎಲ್ಲ ದೊಡ್ಡ , ಸಣ್ಣ ರಸ್ತೆಗಳು , ಸಣ್ಣ ಕೇರಿಗಳು,ಓಣಿಗಳ ಎಕ್ಕೆಲಗಳಲ್ಲಿ  ಸೀರಿಯಲ್ ದೀಪಗಳನ್ನು ಹಿಡಿದು ನಿಂತ ಕಂಬಗಳು ಸಾಲಾಗಿ ತಲೆ ಎತ್ತುತ್ತಿದ್ದವು  . ಊರಿನ ಸಂತೆ ನಡೆಯುತಿದ್ದ ಜಾಗವೇ ಜಾತ್ರೆ ಕಟ್ಟುವ  ಜಾಗ . ಜಾತ್ರೆ ಗೆ ಹೋಗುವುದೆಂದರೆ ನಮಗೆ ಕುಶಿಯೋ ಕುಶಿ . ಜಾತ್ರೆಯಲ್ಲಿ ಮಕ್ಕಳ ಆಟಿಕೆಗಳ , ಪಾತ್ರೆಗಳ, ಕರಿದ ತಿಂಡಿ ತಿನುಸುಗಳ, ಬಟ್ಟೆ ಹೀಗೆ ವಿವಿಧ ಅಂಗಡಿಗಳು  ಜೊತೆಗೆ ಮೋಜಿನ ಕೆಲವು ಆಟಗಳು ಇರುತಿದ್ದವು . ಅದೇ ಸಂತೆಯ ಮೈದಾನದ ಒಂದು ಭಾಗದಲ್ಲಿ , ಬಯಲಾಟದ ವೇಧಿಕೆ ಸಿದ್ಧವಗುತಿತ್ತು  . ಇಲ್ಲಿ ಹಬ್ಬವಾದ ನಂತರ ಒಂದು ವಾರಗಳ ಕಾಲ, ಯಕ್ಷಗಾನ , ನಾಟಕ , ಹರಿಕತೆ, ಆರ್ಕೆಸ್ಟ್ರ ಮುಂತಾದ ಕರ್ಯಕ್ರಮಗಳು  ನಡೆಯುತಿತ್ತು . ಆಗಲೇ ಟೀವಿ ,ಸಿನಿಮಾ ಹುಚ್ಚ್ಚು ಶುರುವಾಗಿದ್ದ ಕಾಲವದರಿಂದ , ಹರಿಕತೆ ನಾಟಕಗಳಿಗೆ ಸೇರುತಿದ್ದ ಜನ ಕಡಿಮೆಯೇ . 

ಎಲ್ಲ ಊರಿನಂತೆ  , ಹೆಬ್ಬಾಲೆಯಲ್ಲೂ  , ಬಸ್ಸು ಬಂದು ಇಳಿಯುತಿದ್ದ ಜಾಗದಲ್ಲಿ , ಕೆಲವು ಅಂಗಡಿ ಮುಂಗಟ್ಟುಗಳು , ಹೋಟೆಲ್ಗಳು ಇರುತಿದ್ದವು . ಊರಿನ ಮನೆಗಳು ಸಿಗಬೇಕೆಂದರೆ ಸ್ವಲ್ಪ ದೂರ ಊರ ಒಳಗೆ ನಡೆದು ಹೋಗ್ಬೇಕು .ಬಸ್ಸು ನಿಲ್ದಾಣದ , ಬಲಕ್ಕೆ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರ ನಡೆದು ಹೋದರೆ ಮೊದಲು ಸಿಗುತಿದ್ದದ್ದು  ಗ್ರಾಮ ಪಂಚಯಿತಿ ಕಚೇರಿ  ನಂತರ ವಾಸದ ಮನೆಗಳು ಸಿಗುತಿದ್ದವು , ಇನ್ನು ನಿಲ್ದಾಣದ ಎಡಕ್ಕೆ , ಸರ್ಕಾರೀ ಶಾಲೆ ,ಅದರ ಪಕ್ಕದಲ್ಲೇ ಸ್ವಲ್ಪ ದೂರ ಪಶು ವೈದ್ಯಾಲಯ , ಮತ್ತೆ ಕೆಲವನ್ನು ಮನೆಗಳು .ನಿಲ್ದಾಣದಿಂದ ಹೊರಟ ಬಸ್ಸು ಮುಂದೆ ಹೋಗುವ ದಾರಿಯಲ್ಲೇ ಸುಮಾರು ಅರ್ಧ ಕಿಲೋಮೀಟರು ದೂರದಲ್ಲೇ  ನಮ್ ಮನೆ .  ಅದು ಬರಿ ಶಿಕ್ಷಕರು ನೆಲೆಸಲು  , ಸರ್ಕಾರ ನಿರ್ಮಿಸಿದ್ದ  ವಸತಿ  ಗೃಹಗಳು ಇದ್ದ ಜಾಗ .ನಮ್ಮ ಮನೆಯ ಅಕ್ಕ ಪಕ್ಕ ಇದ್ದವರೆಲ್ಲ, ಆ ಊರಿನವರಾಗಿರದೆ ಬೇರೆ ಕಡೆ ಇಂದ ವರ್ಗಾವಣೆ ಆಗಿ ಬಂದವರೇ ಜಾಸ್ತಿ . ಆದರಿಂದ ಅಲ್ಲಿ ಸ್ವಲ್ಪ ಹಬ್ಬದ ವಾತಾವರಣ ಕಡಿಮೆ .ಶಿಕ್ಷಕರ ಬಡಾವಣೆಯಲ್ಲಿದ್ದ ನಮಗೆಲ್ಲ , ಹಬ್ಬದ ನಿಜವಾದ ವೈಭವ , ಆಚರಣೆ  ನೋಡಬೇಕಾದ್ರೆ ಊರ ಒಳಗೆ ಹೋಗಬೇಕಿತ್ತು .ಬೇರೆ ಎಲ್ಲ ಜಾತ್ರೆಗಳನ್ತೆ  ಬನಶನಕ್ರಿ  ಜಾತ್ರೆ ಹಗಲಿನ ವೇಳೆ ನಡೆಯುತಿರಲಿಲ್ಲ  ಜಾತ್ರೆ ತೇರು ನಡೆಯುತಿದಿದ್ದು ರಾತ್ರಿ ವೇಳೆ . ಊರಿನವರ ಎಲ್ಲ ಮೆನೆಗಳು ನೆಂಟರು,ಬಂಧು -ಬಾಂದವರಿಂದ ತುಂಬಿ ಹೋಗಿರುತಿತ್ತು . ಎಲ್ಲ ಮನೆಗಳುಲ್ಲು ಒಂದೇ ಸಾಮಾನ್ಯ ಊಟ ತಿಂಡಿ ತಿನಿಸುಗಳು , ವಡೆ, ಕಜ್ಜಾಯ ಪಾಯಸ. ಹೆಂಗಸಿರಿಗೆ ಅಡುಗೆ ಮನೆ ಬಿಡಲು ಪುರುಸೊತ್ತೇ ಇಲ್ಲ .ಮಕ್ಕಳಿಗೆ ತಮ್ಮ ದೂರದ ಊರಿನ ಅಪರೂಪಕ್ಕೆ ಬರುವ ನೆಂಟರಿಷ್ಟರ ಮಕ್ಕಳೊಂದಿಗೆ ಆಟವಾಡುವುದು , ಅವರಿವರ ಮನೆಗೆ ಹೋಗಿ  ಕಜ್ಜಾಯ ವಡೆ ತಿನ್ನುವುದು ,ಅಲಂಕೃತ ಗೊಂಡ ಬೀದಿಗಳಲ್ಲಿ ತಿರುಗುವುದು , ಜಾತ್ರಯಲ್ಲಿ ಅಡ್ಡಡುವುದು ,ಗಿರಗಿತ್ತಲೇ ,ಉಯ್ಯಾಲೆ ಮುಂತದ ಆಟಗಳಿಗೆ ೨ ರೂಪಾಯಿ , ೫ ರೂಪಾಯಿ ಕೊಟ್ಟು ಆಡುವುದು ಇದೆ ಕೆಲಸ . ಹಗಲೆಲ್ಲ ಕೇವಲ ಮನೆಯಲ್ಲೇ ಇದ್ದ ಹಬ್ಬದ ವಾತಾವರಣ ಸಂಜೆಯ ವೇಳೆಗೆ ರಸ್ತೆಗೆ ಧುಮುಕುತ್ತದ್ದೆ . ಮಿಕ್ಕ ದಿನಗಳ್ಳಲ್ಲಿ ಹಗಲೇ ಅಪರೂಪಕ್ಕೆ ಆಗೊಮ್ಮೆ ಈಗೊಮ್ಮೆ ಓಡಾಡುವ  ಬಸ್ಸು, ಜೀಪು , ಸಣ್ಣ ವ್ಯಾನ್ ಗಳು ಅ ಎರಡು ದಿನ ರಾತ್ರಿ ಹಗಲು ಲೆಕ್ಕಿಸದೆ ಪಕ್ಕದ ಹಳ್ಳಿಗಳಿಗೆ ಹೋಗುವ ಅಲ್ಲಿಂದ ಬರುವ ಜನರನ್ನು  ಸಾಗಿಸುತ್ತದೆ   

ಸುಮಾರು ರಾತ್ರಿ ೧೧ ಗಂಟೆಯ ವೇಳೆಗೆ ಊರಿನ ಮಧ್ಯದಲ್ಲಿ ಇರುವು  ಭೈರವ ದೇವಸ್ತಾನದಿಂದ ಬನಶಂಕರಿಯ ಉತ್ಸವ ಮೂರ್ಯಿಯ ಮೆರವಣಿಗೆ ಚಾಲೆಯಗುತ್ತದೆ . ತೇರು ತಮ್ಮ ಬೀದಿಗೆ ಬರುವ ಮೊದಲು ಅಲ್ಲಿನ ನಿವಾಸಿಗಳು ,ರಸ್ತೆಗಳಿಗೆ  ನೀರು ಹಾಕಿ ರಂಗೋಲಿ ಇಟ್ಟು  , ಕೈಯಲ್ಲಿ ಹೂವು ,ಹಣ್ಣು,ತೆಂಗಿನಕಾಯಿ ತಟ್ಟೆ ಹಿಡಿದು ದೇವರನ್ನು ಸ್ವಾಗತಿಸಲು ಸಿದ್ದವಾಗುತ್ತಾರೆ  . ಉತ್ಸವ್ದ  ಮುಂದೆ  ಮಂಗಳ ವಾದ್ಯಗಳ ಜೊತೆ, ಪಟಾಕಿ ಸದ್ದು ಸೇರಿ ಎಲ್ಲರಲ್ಲೂ ಉತ್ಸಾಹವನ್ನು ಮೂಡಿಸುತಿದ್ದವು. ಜಾತ್ರೆಯ ಇನ್ನೊಂದು ವಿಶೀಷ "ಕೆಂಡ ತುಳಿಯುವುದು" . ಕೆಂಡ ತುಳಿಯುವುದು ದೇವರಿಗೆ ಸಲ್ಲಿಸುತ್ತಿದ್ದ ಹರಕೆ. ಹೀಗೆ ಹರಸಿಕೊಂಡವರಲ್ಲಿ ಗಂಡಸರು, ಹೆಂಗಸರು ಮತ್ತು ಮಕ್ಕಳು ಸಹ ಇರುತ್ತಿದ್ದರು . ಇವರೆಲ್ಲ ದಿನವೆಲ್ಲ ಉಪವಾಸವಿದ್ದು , ತೇರು ಹೊರಡುವು ವೇಳೆಗೆ ಭೈರವ ದೇವಸ್ತಾನದ ಹತ್ತಿರ ಬಂದು ಸೇರುತ್ತಿದ್ದರು. ಹರಕೆ ಹೊತ್ತವರು ಭೈರವ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ , ಹಣ್ಣು ಹೂವು ಮತ್ತಿತರ ಪೂಜಾ ಸಾಮಗ್ರಿಗಳು ಇರುತ್ತಿದ್ದ ಬುಟ್ತಿಯನ್ನು ತಲೆಯ ಮೇಲೆ ಹೊತ್ತು ಬರಿಗಾಲಲ್ಲಿ ಬಿಳಿಯ ಒದ್ದೆ ಬಟ್ಟೆಯ ಮೇಲೆ ನಡೆಯುತ್ತಾ ತೇರನ್ನು ಹಿಮ್ಬಲಿಸುತ್ತಿದ್ದರು. ಹೀಗೆ ಹೊರಟ ಮೆರವಣಿಗೆ ಊರಿನ ಎಲ್ಲ ಪ್ರಮುಖ ಬೀದಿಗಳಲ್ಲಿ ಚಲಿಸಿ  ಕೊನೆಗೆ ಬನಶಂಕರಿ ದೇವಸ್ತಾನಕ್ಕೆ ಬಂದು ತಲುಪುತ್ತದ್ದೆ  ಉತ್ಸವ ಬನಶಂಕರಿ ದೇವಸ್ತಾನ ತಲುಪುವ ವೇಳೆಗೆ ಸುಮಾರು ರಾತ್ರಿ ೨ -೩  ಗಂಟೆ ಆಗಿರುತಿತ್ತು .ಅಷ್ಟರಲ್ಲಿ ಒಂದು ವರ್ಷದಿಂದ ,ಮುಚಿರುತ್ತಿದ್ದ  ದೇವಸ್ಥಾನದ  ಬಾಗಿಲು ತೆಗೆದು , ಒಳಗಿನ ದೇವಿಗೆ , ಪೂಜೆ ಅಭಿಷೇಕ ಅಲಂಕರಗಲ್ಲೆಲ್ಲ ನಡೆಯುತಿರುತ್ತದೆ .ಇಲ್ಲಿ ಆಚರಿಸುತ್ತಿದ್ದ ಇನ್ನೊಂದು ಕೂತುಹಲ ಪದ್ದತ್ತಿ ಎಂದರೆ . ಪೂಜಾರಿಯನ್ನು ಹೊರತು ಪಡಿಸಿ ಜಾತ್ರೆ ರಾತ್ರಿ  ಕೇವಲ ಹೆಂಗಸರಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶ. ಗರ್ಭಗುಡಿ ಎಂಬ ಪ್ರತ್ಯೇಕತೆ ಇಲ್ಲದ್ದ , ನಮ್ಮ ದೇಹವನ್ನು ಸ್ವಲ್ಪ ಬ್ಬಗ್ಗಿಸೆಯೇ ಒಳಗೆ ಹೋಗಬೇಕಾದ ಒಂದು ಸಣ್ಣ ಗುಡಿಯಗಿದ್ದ , ಅದರೊಳಗೆ ಜಾತ್ರೆಯ ರಾತ್ರಿ ಹೋಗಿ ದೇವಿಯ ದರ್ಶನ ಮಾಡಿಕೊಂಡು ಪೂಜೆ ಮಾಡಿಸುವುದೇ ಹರಸಾಹಸ,ನೂಕು ನುಗ್ಗಲ್ಲು

ದೇವರ ಉತ್ಸವ ಬನಶಂಕರಿ ದೇವಸ್ತಾನ ತಲುಪುವ ವರೆಗೂ , ಯಾರಿಗೂ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಆದರೆ ವರ್ಷಕ್ಕೆ ಒಂದೇ ಬಾರಿ ತೆರೆಯುತೀದ ದೇವಸ್ಥಾನದ ಮುಂದೆ ಜನ ಸಾಲು ಗಟ್ಟಿ ೪-೫ ಗಂಟೆಗಳ ಕಾಲ ಕಾಯೂತಿದ್ದರು . ಊರಿನ ಬೀದಿಗಳಲ್ಲಿ ತೇರು ನಡೆಯುತ್ತಿರುವ ವೇಳೆ , ಬನಶಂಕರಿ ದೇವಸ್ಥಾನದ ಮುಂಬಾಗದಲ್ಲಿ ಕೆಂಡ ಸಿದ್ಧಪಡಿಸುವ ಕಾರ್ಯ ಶುರುವಾಗುತ್ತಿತ್ತು .ಈ  ಕೆಂಡ ತುಳಿಯುವ ಕಾರ್ಯ ಕರ್ಮ ನೋಡಲು ಹಳ್ಳಿಯ ಜನ , ಚಾಪೆ , ದಿಮ್ಪ್ಬು , ಜಮಖಾನ ಮುಂತಾದ , ಸಾಮಗ್ರಿಗಳೊಂದಿಗೆ ಬೆಂಕಿ ಹಾಕುವ ಸುತ್ತ ಜನ ಜಮ್ಮಯಿಸುತ್ತಾರೆ . ರಾತ್ರಿ ಸುಮಾರು ೧೦ ಗಂಟೆಗೆ ಬೆಕಿ ಹಾಕಲು ಶುರು ಮಾಡಿದರೆ ಬೆಳಿಗಿನ ಜಾವ ೪ ಗಂಟೆಯ ವೇಳೆಗೆ ಎಲ್ಲ ಉರಿದು ಕೆಂಡ ಸಿದ್ದವಗುತ್ತದ್ದೆ .  ಮೊದಲೇ ಅಣಿ ಮಾಡಿ ಸುಮಾರು ೧೦ ಅಡಿ ಅಗಲ ಎತ್ತರದವರೆಗೂ ಜೋಡಿಸಿದ್ದ ಮರದ ದಿಮ್ಮಿಗಳಿಗೆ ಬೆಂಕಿ ,ಕೊಟ್ಟು ಅದನ್ನು ಕೆಂಡ ಮಾಡುವ ಕೆಲಸ ಸುಲಭದಲ್ಲ .ಕೆಂಡ ಮಾಡುವ ಎ ಧೀರ್ಗ ಕಾಲದ ಕೆಲಸಕ್ಕೆಂದೇ ಊರಿಂದ ೩-೪ ಜನ ಗಟ್ಟಿಯಾಗಿರುವ ಗಂಡಸರು ನಿಲ್ಲುತ್ತಾರೆ.ಬಿಸಿ  ನೀರಿನ ಹಂಡೆಗೆ  ಬೆಂಕಿ ಮಾಡುವಷ್ಟು ಅನುಭವ ಇದ್ದಾರೆ ಸಾಲದು , ಚುಮು ಚುಮು ಚಳಿಯಲ್ಲಿ ಬೆಂಕಿ ಆರದಂತೆ ನ, ಮರದ ದಿಮ್ಮಿಗಳು ಪೂರ್ತಿಯಾಗಿಉರಿಯುವಂತೆ  ನೋಡಿಕೊಳ್ಳಬೇಕು  ಒಂದರ ಮೇಲೊಂದು ಜೋಡಿಸಿಟ್ಟ ಮರದ ದಿಮ್ಮಿಗಳು ಬೆಂಕಿ ಹೆಚ್ಚದನತೆ , ಕೆಳಗೆ ಉರುಳುತ್ತವೆ . ಅವುಗಳನ್ನು ಮತ್ತೆ ಎಳೆದು ತಂದು ಒಟ್ಟು ಮಾಡ್ಬೇಕು .ಹತ್ತಿರ ಸುಳಿದರೆ ಎಲ್ಲಿ ನಮ್ಮನೆ ಬೆಂಕಿ ಆವರಿಸುವುದೋ ಎನ್ನುವಷ್ಟು  ಧಗೆ,ಶಾಖ . ಕೆಂಡ ಹಾಯುವುದನ್ನು ನೋಡಲು ಬರುವ ಜನ ಚಳಿಯಿಂದ  ರಕ್ಷಣೆಗೆ ಬೆಚ್ಚ್ಚಗೆ ಬಟ್ಟೆ ತೊಟ್ಟು ಬಂದರೆ , ಬೆಂಕಿ ಮಾಡುವರು ಬೆಂಕಿಯ ಮುಂದೆ ಬೆಂದು ಅವರ ಮಯಿಂದ ಬೆವರು ಇಳಿಯುತಿರುತ್ತದೆ - ಡಿಸೆಂಬರ್ ಮಾಸದ  ಕೊಡಗಿನ ರಾತ್ರಿ ಚಳಿಯಲ್ಲೂ  ಬೆವರಿಳಿಸುವ ಭಯಂಕರ ಬೆಂಕಿ. ಬೆಂಕಿಯಾ ಜ್ವಾಲೆ ಹೆಚ್ಚದಂತೆ ಅ ಚಳಿಯಲ್ಲೂ ಸುತ್ತಲಿನ  ಮಣ್ಣಿನ ನೆಲ ಕಾಲು ಇಡಲಾಗದಷ್ಟು ಬಿಸಿಯಾಗುತ್ತದೆ  ಅದಕಾಗಿಯೇ ಆಗಿಂದಾಗೆ ಸುತ್ತಣ ನೆಲೆದ ಮೇಲೆ ಬಿನ್ದಿಗೆಗಟ್ಟಲೆ ನೀರು ತಂದು ಸುರಿಯುತ್ತಾರೆ . ಒಂದೊಂದೇ ಮರದ ದಿಮ್ಮಿಗಳು ,ಸಣ್ಣ ರೆಂಬೆ ,ಕೊಂಬೆಗಳನ್ನೂ ಕಬಳಿಸುತ್ತಾ ಬೆಂಕಿ , ಪ್ರಜ್ವಲಿಸುತ್ತದೆ. ಸರಿಸುಮಾರು ೪ ಗಂಟೆ ಬೆಳಗಿನ ಜಾವಕ್ಕೆ ೧೦ ಅಡಿ ಉದ್ದ ,೩ ಅಡಿ ಎತ್ತರದ ಕೆಂಡ ಹಾಸಿಗೆ ಸಿದ್ದವಗುತ್ತದ್ದೆ .

ಎಲ್ಲ ಮುಖ್ಯ ಬೀದಿಗಳಲ್ಲಿ ,ಚಲಿಸಿದ  ತೇರು ದೇವಸ್ತಾನಕ್ಕೆ ಬರುವ ವೇಳೆಗೆ ಆಗಲೇ ಗಂಟೆ ೨ ಆಗಿರುತ್ತದೆ . ನಂತರ , ಉತ್ಸವ ಮೂರ್ತಿಗೆ ಪೂಜೆ ಆಗಿ,ಆರತಿ ಎಲ್ಲ ಮುಗಿಯುವ ವೇಳೆಗೆ ೪ ಗಂಟೆ ಆಗುತಿತ್ತು . ಉತ್ಸವ ಮೂರ್ತ್ಯಿಯ ಪೂಜೆ ಆದ ಮೇಲೆ ಎಲ್ಲ ಎಲ್ಲರು ಕಾತುರದಿಂದ ಕಾಯುವ ಕೆಂಡ ಹಾಯುವ ಕಾರ್ಯಕ್ರಮ .ನಾನು ಗಮನಿಸಿದ ಇನ್ನೊಂದ ವಿಶೇಷ ಪದ್ದತ್ತಿ  ಮೊದಲು ಅಲ್ಲಿನ ಪೂಜಾರಿ ಕೆಂಡ ಹಾಯಬೇಕು !!! ನಂತರ ಹರಸಿಕೊಂಡ ಭಕ್ತರು - ಮೊದಲು ಗಂಡಸರು ಮತ್ತು ಗಂಡು ಮಕ್ಕಳು ನಂತರ ಹೆಂಗಸರು ಮತ್ತು ಹೆಣ್ಣು ಮಕ್ಕಳ ಸರದಿ .ಕೆಲವರು ಕೆಂಡದ ಮೇಲೆ ಸಮಾಧಾನವಾಗಿ ಭಕ್ತಿಇಂದ ನಡೆದರೆ, ಇನ್ನು ಕೆಲವರು ಮುಗಿದರೆ ಸಾಕು ಎಂದು ಓಟ .ಹೀಗೆ  ಓದುವವರನ್ನು ನೋಡಿ  ಜನ ಕೇಕೇ ಹಾಕಿ ನಗುತ್ತಾರೆ . ಇನ್ನು ಕೆಲವರು  , ಹರಕೆ ಹೊತಿದ್ದರು , ಅದಕ್ಕಾಗಿ ಬೆಳ್ಳಗ್ಗೆ ಇಂದ ಉಪವಾಸ ಇದ್ದರು , ಕೆಂಡ ನೋಡಿ ಭಯ ಪಟ್ಟು ಸಾಧ್ಯವಿಲ್ಲವೆಂದು ಹಿಂದೆ ಸರಿಯುತಾರೆ ಯಾರಿಗೂ ಬಲವಂತವಿಲ್ಲ .ಹೀಗೆ ಕೆಂಡ ಹಾಯುವ ಕೆಲವರಿಗೆ ಯಾವುದೇ ರೀತಿಯ ನೋವಾಗಲೀ ಗಾಯವಾಗಲಿ ಆಗುವುದಿಲ್ಲ . ಇನ್ನು ಕೆಲವರಿಗೆ  ಸಣ್ಣ ಪುಟ್ಟ ಸುಟ್ಟ ಗಾಯಗಳು ,ಬೊಬ್ಬೆಗಳು ಆಗುತ್ತವೆ - ಅಂತವರು ವ್ರತವನ್ನು ನಿಷ್ಠೆ ಇಂದ ಪಾಲಿಸಿಲ್ಲ ಎಂಬುದು ಇಲ್ಲಿಯವರ ನಂಬಿಕೆ . ನಿಜವಾದ ಇದರ ಹಿಂದಿರುವ ವೈಜ್ಞಾನಿಕ ರಹಸ್ಯ ನಂಗಂತೂ ತಿಳಿದಿಲ್ಲ. 

ಒಟ್ಟಿನಲ್ಲಿ , ಎಲ್ಲ ಹರಕೆಗಳ ಪೂಜೆ ಮುಗಿದ ಮೇಲೆ  ಸಾಲಲ್ಲಿ ಕಾಯುತ್ತ ನಿಂತಿದ್ದ ಭಕ್ತಾದಿಗಳಿಗೆ ದೇವಸ್ತಾನದ ಒಳಗೆ ಪ್ರವೇಶ ಸುಮಾರು ಬೆಳಿಗ್ಗೆ ೬ ಗಂಟೆಯ ವೇಳೆಗೆ ಎಲ್ಲ ಪೂಜೆಗಳು ಮುಗಿದು , ಜನ ಸ್ವಲ್ಪ ಕಡಿಮೆಯಗುತಾರೆ . ಹಿಂದಿನ ರಾತ್ರಿ ತೆರದ ದೇವಸ್ತಾನ ಮರುದಿನ ಪೂರ್ತಿ ತೆರೆದೇ ಇರುತ್ತದ್ದೆ . ಎರಡನೇ ದಿನ ಪೂರ್ತಿ ಪೂಜೆ ಪುನಸ್ಕಾರಗಳು.ಸಂಜೆಯ ವೇಳೆಗೆ ಮತ್ತೊಮ್ಮೆ ಪೂಜೆ ಸಲ್ಲಿಸಿ ಬಾಗಿಲು ಹಾಕಿದರೆ ಮುಗಿಯಿತು ಇನ್ನು ಒಂದು ವರ್ಷ ಕಾಯಬೇಕು.

ನನ್ನ ಮಾತು ಕಥೆ ಮುಗಿಯುವ ವೇಳೆಗೆ ಕುಶಲ್ನಗರಕ್ಕೆ ಸ್ವಾಗತ ಎನ್ನುವ ಬೋರ್ಡ್ ನನ್ನ ಕಣ್ಣಿಗೆ ಬಿತು . ಅರೆ!! ಸಮಯ ಹೋಗಿದ್ದೆ ತಿಳಿಯಲಿಲ್ಲ ಎಂದು ತಕ್ಷಣ ನನ್ನ  ಮೊಬೈಲ್ ತೆಗೆದುಕೊಂಡು ಇನ್ನು ೫ ನಿಮಿಷದಲ್ಲಿ ನಾವು ಮನೆಯಲ್ಲಿ ಇರುತ್ತೇವೆ  ಎಂದು ಅಮ್ಮನಿಗೆ ಹೇಳಿದೆ . ಮನೆಗೆ ಹೋದ ಮೇಲೆ ಮೊದಲು ಇಬ್ಬರು  ಬಿಸಿ ಬಿಸಿ ಕಾಫೀ ಹೀರಿದೇವು . ನಂತರ ನಾನು ಸ್ನಾನ ಮುಗಿಸಿ ಅಮ್ಮ ಕೊಟ್ಟ ಬಿಸಿ ಬಿಸಿ ಮೆಂತ್ಯ ದೋಸೆ ತಿನ್ತುತ್ತ ಅಡುಗೆ ಮನೆ ಕಟ್ಟೆ ಮೇಲೆ ಕುಳಿತೆ .ಅಷ್ಟರಲ್ಲಿ ಅಪ್ಪನ ಕಾರನ್ನು ಗ್ಯಾರೇಜು ಇಂದ  ಹೊರಗೆ ತೆಗೆದು , ನಮ್ಮ ಕಾರನ್ನು  ಒರೆಸಿ ಅದನ್ನು ಗ್ಯಾರೇಜು ಅಲ್ಲಿ ನಿಲ್ಲಿಸಿ ಕಿರಣ್ ಸ್ನಾನ ಮಾಡಲು ಹೋದರು.

ಮೊದಲೇ ಪ್ಲಾನ್ ಮಾಡಿದಂತೆ , ನಾನು ,ಅಪ್ಪ, ಅಮ್ಮ ,ಕಿರಣ್ , ನಾಲ್ವರು ಮಧ್ಯನ್ನದ ಊಟ ಮುಗಿಸಿ ,ಅಪ್ಪ ನ ಕೆಂಪು ನ್ಯಾನೋ ಕಾರ್ ಹತ್ತಿ ಹೆಬ್ಬಾಲೆಗೆ ಹೊರೆಟೆವು. ಕುಶಾಲನಗರ ದಿಂದ ೧೫ ಕಿ.ಮೀ ಗಳ ದಾರಿ .ಹಳ್ಳಿಯ ದೇವಸ್ತಾನವಾದ್ದರಿಂದ , ಅಲ್ಲಿ ಪ್ರತ್ತ್ಯೇಕ ಪಾರ್ಕಿಂಗ್ ವ್ಯವಸ್ತೆ ಇರುವುದಿಲ ಪಟ್ಟಣದಂತೆ .ಆದ್ದರಿಂದ ನಾವು ಕಾರ್ ಅನ್ನು ದೇವಸ್ತನದಿಂದ ಸುಮಾರು ಅರ್ಧ ಕಿ. ಮೀ  ದೂರ ಪರಿಚಯದವರ ಮನೆಯಲ್ಲಿ ನಿಲ್ಲಿಸಿ ಹೋದೆವು. ನಡೆದುಕೊಂಡು ದೇವಸ್ತಾನ ತಲುಪಿದ ಮೇಲೆ ನಂಗೆ ಕಂಡ ಮೊದಲ ಆಶ್ಚರ್ಯ ಅಲ್ಲಿ ನಾನು ನೋಡಿದ್ದ ಸಣ್ಣ ಗುಡಿ ಇರಲಿಲ್ಲ. ಬದಲಾಗಿ ದೊಡ್ಡದು ಎಂದು ಹೇಳಬಹುದಾದ ದೇವಸ್ತಾನ. ಬನಶಂಕರಿಯ ಸಣ್ಣ ಗುಡಿ ಎಲ್ಲ ರೀತಿಯ ಬದಲಾವಣೆ ಪಡೆದಿತ್ತು.ಗರ್ಭಗುಡಿ ಇಲ್ಲದ ದೇವಸ್ತಾನಕ್ಕೆ ಈಗ ಗರ್ಭಗುಡಿ ನಿರ್ಮಾಣವಾಗಿದೆ .!!  ದೇವಸ್ತಾನದ ಸುತ್ತ ಮೊದಲಿನಷ್ಟೂ ದಟ್ಟ್ಟಕಾಡು ಇರಲಿಲ್ಲ. ಮೊದಲು ಕೇವಲ ಬಂಶಕರಿ ಇದ್ದ ಜಾಗದಲ್ಲಿ ಈಗ ಪುಟ್ಟ ಗಣಪತಿ ಮತ್ತು ನವಗ್ರಹ ದೇವಸ್ತನಗಳು ತಲೆ ಎತ್ತಿವೆ !! ದೇವಸ್ತಾನದ ಗೋಪುರಗಳನ್ನು ಸರಿಯಾಗಿ ಗಮನಿಸಿದರೆ  ನುರಿತ ಶಿಲ್ಪಿಗಳು ಕೆಲಸವಲ್ಲ ಎಂದು ಸಲೀಸಾಗಿ ಗೊತ್ತಾಗುತ್ತದೆ. ಭಾಹ್ಯವಾಗಿ ಏನೇ ಬದಲಾವಣೆಗಲಿದ್ದರು , ದೇವರು ಅದೇ ಎಂದು ನಾನು ಹೊಸದಾಗಿ ನಿರ್ಮಾಣ ಗೊಂಡಿದ್ದ ಗರ್ಭಗುಡಿಯ ಒಳಗೆ ಬಗ್ಗಿ ನೋಡಿದೆ . ಇನ್ನೊಂದು ಆಶ್ಚರ್ಯ - ಮೊದಲು ಅಲ್ಲಿ ಇದ್ದದ್ದು ಮೂರು ಲಿಂಗಾಕಾರದ ಕಲ್ಲುಗಳು ಅದೇ ದೇವರು, ಅದಕ್ಕೆ ಹಬ್ಬದ ದಿನ ಸೀರೆ ಉಡಿಸಿ ಸಿನ್ಗರಿಸುತ್ತಿದ್ದರು . ಈಗ ಅಲ್ಲಿ ೪ ಕೈಗಳ ದೇವಿಯ ಮೂರ್ತಿ ಇದೆ . ಆ ಮೂಲ ದೇವರು ಎಲ್ಲಿ ಎಂದು ನಾನು ಅಲ್ಲಿಯ ಪುರೋಹಿತರನ್ನು ಕೇಳಿದಕ್ಕೆ ,  ಅದು ಅಲ್ಲೇ ವಿಗ್ರಹದ ಹಿಂದೇ ಇದೆ . ಈಗ ಪೂಜೆ ಎಲ್ಲ ಈ  ಪ್ರತಿಷ್ಟಪನೆ ಗೊಂಡಿರುವ ದೇವಿಯ ವಿಗ್ರಹಕ್ಕೆ ಎಂದರು !! ನಂಗೆ ಒಂದು ಅರ್ತವಾಗದೆ ಸುಮ್ಮನಾದೆ. ಇನ್ನು ಒಂದು ನಂಗೆ ಅಚ್ಚರಿ ಮೂಡಿಸಿದ ಸಂಗತಿ - ಮೊದಲು ವರ್ಷದಲ್ಲಿ ಒಂದೇ ಬಾರಿ ಬಾಗಿಲು ತೆರೆಯುತಿದ್ದ ಪದ್ಧತಿ ಈಗ ಇಲ್ಲವಾಗಿದೆ . ಬೇರೆ ಎಲ್ಲ ದೇವಸ್ಥನಗಳಂತೆ ಪ್ರತಿ ದಿನ ಇಲ್ಲಿ ಈಗ ಪೂಜೆ ನಡೆಯುತ್ತದೆ .

ದೇವರ ಪೂಜೆ ಮುಗಿಸಿ , ಜಾತ್ರೆಯಲ್ಲಿ ಒಂದು ಬಾರಿ ಅಡ್ಡಾಡಿ ಮತ್ತೆ ಕಾರ್ ನಿಲ್ಲಿಸಿದ್ದ ಜಾಗಕ್ಕೆ ಬಂದೆವು . ವಾಪಸು ಮನೆಗೆ ಹಿಂದಿರುಗುವಾಗ ಕಿರಣ್ ಕೆಂಡ ಹಾಯುವ ದೃಶ್ಯ ನೋಡಬೇಕು ಎಂಬ ಆಸೆಯನ್ನು ಹೇಳಿದರು.ಹತ್ತು ಗಂಟೆಗೆಎಲ್ಲ ಜನ ಸೇರುತ್ತಾರೆ, ಮುಂದಿನ ಸಾಲಲ್ಲಿ ಕೂತರೆ ಮಾತ್ರ , ಕೆಂಡ ತುಳಿಯುವ ದೃಶ್ಯ ಕಾಣುತ್ತದೆ ಎಂದು ನಾನು ಕಿರಣ್ ರಾತ್ರಿಯ ಊಟ ಬೇಗ ಮುಗಿಸಿ ಇಬ್ಬರೇ ಕಾರ್ ತೆಗೆದುಕೊಂಡು ಮತ್ತೆ ಹೆಬ್ಬಾಲೆಗೆ ಹೋದೆವು . ಸುಮಾರು ೧೦.೩೦ ರ ವೇಳೆಗೆ ದೇವಸ್ಥಾನ ತಲುಪಿದೆವು . ಅಲ್ಲಿ ಮೊದಲಿನಂತೆ ಅಷ್ಟು ಜನ ಇರಲಿಲ್ಲ . ೨ ಗಂಟೆಯ ವೇಳೆಗೆ ಉತ್ಸವ ಮೂರ್ತಿ ಬಂಡ ಮೇಲೆ ಜನ ಸೇರಲು ಶುರುವಾದರು. ಎಲ್ಲ ಪೂಜೆಗಳು ಮುಗಿದ ಮೇಲೆ  ಎಂದಿನಂತೆ ಕೆಂಡ ತುಳಿಯುವ ಕಾರ್ಯಕ್ರಮ . ಮೊದಲ ಬಾರಿಗೆ ಇದನ್ನು ನೋಡುತ್ತಿದ್ದ ಕಿರಣ್ ಗೆ ಕುತೂಹಲ, ಇದಕ್ಕೆ ಮೊದಲು ಅನೇಕ ಬಾರಿ ಇನ್ನು ನೂಕುನುಗ್ಗಲ್ಲಲ್ಲಿ ಇದನ್ನು ನೋಡಿ ಕುಶಿ ಅನುಭವಿಸಿದ್ದ  ನಾನು ಎ ಬಾರಿ ಫೋಟೋ ಮತ್ತು ವೀಡಿಯೊ ತೆಗೆಯುವುದರಲ್ಲಿ ಮಗ್ನಳಾಗಿದ್ದೆ .

ಕೊನೆಯ ಹೆಂಗಸು ಕೆಂಡ ಹಾಯುವುದನ್ನು ನೋಡಿ , ನಾನು ಕಿರಣ್ ಮನೆಗೆ ಹೊರಡೋಣವೆಂದು ಕಾರಿನ ಕಡೆಗೆ ನಡೆದುಕೊಂಡು ಹೋಗುವಾಗ ಬೆಳಿಗ್ಗೆಇಂದ ಸುಮ್ಮನಿದ್ದ ಕಿರಣ್ , ನೀನು ಹೇಳಿದ ಸಣ್ಣ ಗುಡಿ , ಸಣ್ಣ ಕಾಡು(ಬನ) , ಕಾಲಿಡಲು ಜಾಗವಿಲ್ಲದಸ್ತು  ಜನ ಎಲ್ಲ ಸುಳ್ಳು ಕೇವಲ ಕೆಂಡ ತುಳಿಯುವುದೊನ್ದೆ  ಸತ್ಯ ಎಂದು ಗೇಲಿ ಮಾಡಿ ನಕ್ಕರು. ಸುಮಾರು ೧೨ ವರ್ಷಗಳ ಹಿಂದೆ ನಾನು ನೋಡಿದ್ದ  ಆಚರ, ವಿಚಾರ,ಪದತ್ತಿ ,ದೇವಸ್ತಾನ , ಊರ ಹಬ್ಬ ,ಅಮ್ಮನ ಹಬ್ಬ , ಬಂಶಕರಿ ಜಾತ್ರೆ ಈಗ ಸಂಪೂರ್ಣವಾಗಿ ಬದಲಾಗಿರುವುದು ನೋಡಿ -    ಬದಲಾವಣೆಯೊಂದೇ ಶಾಶ್ವತ ಎಂದುಕೊಂಡು ಕಾರು ಹತ್ತಿದೆ . ಆದರೆ ಈ ಬದಲಾವಣೆ ದೇವರಿಗೂ(ದೇವರ ಕಾರ್ಯಕ್ಕೂ)ಬೇಕೆ ?

ಇತ್ತೀಚಿಗೆ ತೆಗೆದ ದೇವಸ್ಥಾನದ ಕೆಲವು ಚಿತ್ರಗಳು








ಭಾನುವಾರ, ಮೇ 26, 2013

Kannada Bhakthi Chitrageethegalu

೧. ಗಣಪತಿಯೇ ಬುದ್ಧಿದಾತನೆ , ಸಿದ್ಧಿನಾತನೆ
ಸಲಹು ಗಣೇಶ ನೆ ವಿದ್ಯಾಧಿಪನೆ 

ನೀ ನಮ್ಮ ಗೆಲುವಾಗಿ ಬಾ ಗಜಮುಖ ನೆ || ೨॥ 
ಗುರುಕುಲಕೆ ವರವಾಗಿ ಗುರಿತೋರೋ ಗುರುವಾಗಿ 
ಪೋರೆನೀನು ಎಂದೆಂದೂ ಕರುಣಾಳು ಬಾ ಬಂಧು 

ಬಾಳಲ್ಲಿ ಒಂದಾಗಿ ಬಾ  ನಮ್ಮ ಜೊತೆಯಾಗಿ 
ಕ್ಷಣವು ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ ॥  ೨ ॥ 
ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ  ॥ ೧ ॥ 

ನಿಧಿಯಾಗಿ , ವಿಧಿಯಾಗಿ ಸುಧೆ ತುಂಬು ಒಲವಾಗಿ  
ಹಿರಿಯಾದ ಸಿರೀ ನೀನು ಈ ಬಾಳ ಸವಿಜೇನು || ೨ ॥ 
ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ  ॥ ೨ ॥ 

೨. ಪೂಜಿಸಲೆಂದೆ ಹೂಗಳ ತಂದೆ ದರುಶನ ಕೋರಿ
ನಾ ನಿಂದೆ ,ತೆರೆಯೋ ಬಾಗಿಲನು ರಾಮ

ಮೋಡದ ಮೇಲೆ ಚಿನ್ನದ ನೀರು ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರಥಿ ಉಷೆ ತಂದಿಹಳು , ತಾಮಸವೆಕಿನ್ನು ಸ್ವಾಮಿ
ತೆರೆಯೋ ಬಾಗಿಲನು, ರಾಮ ॥ ೧॥

ಒಲಿದರು ಚೆನ್ನ ಮುನಿದರು ಚೆನ್ನ , ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳದರು ಚೆನ್ನ ಸ್ವೀಕರಿಸು ನನ್ನ ಸ್ವಾಮೀ
ತೆರೆಯೋ ಬಾಗಿಲನು, ರಾಮ ॥ ೨ ॥
http://yourlisten.com/channel/content/16981944/Poojisalande

೩. ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ನೀನೊಲಿದ ಮನೆ ಮನೆಮನೆಯು ಲಕ್ಹ್ಮೀ ನಿವಾಸ ॥

ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲ
ಅಲಮೇಲು ಮಂಗ ಮನ್ನೋಲಾಸ ಲೋಲ ॥ ೧ ॥

ಪಂಕಜ ಲೋಚನ ಪತಿತೋದ್ಧಾರ ಸಂಕಟ ಹರಣ  ಸುಧಾರಸ ಧಾರಾ
ಶಂಕ ಚಕ್ರಧರ ಶ್ರೀಕರ ಸುಂದರ ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರಾ
ಶಿರಸಾ ನಮಾಮಿ ಮನಸಾ ಸ್ಮರಾಮಿ ॥ ೨ ॥
http://yourlisten.com/channel/content/16980711/Tirupati_Girivasa


೪. ಕಮಲದ ಮೊಗದೊಳೆ ಕಮಲದ  ಕಣ್ಣೋಳೆ
ಕಮಲವ ಕೈಯಲ್ಲಿ  ಹಿಡಿದೋಳೆ ,
ಕಮಲನಾಭಾನ ಹೃದಯಿ ಕಮಲದಲಿ ನಿಂತ್ಹೋಳೆ ,
ಕಮಲಿ ನೀ ಕರ ಮುಗಿವೆ ಬಾಮ್ಮ
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ  ॥

ಕಾವೇರಿ ನೀರ ಅಭಿಷೆಕಕಾಗಿ ನಿನಗಾಗಿ ನಾ ತಂದೆನಮ್ಮ
ಕಂಪನ್ನು ಚೆಲ್ಲೊ ಸುಮರಾಶಿ ಇಂದ ಹೂ ಮಾಲೆ ಕಟ್ಟಿರುವೆನಮ್ಮ
ಬಂಗಾರ ಕಾಲ್ಗೆಜ್ಜೆ ನಾದ ನಮ್ಮ ಮನೆಯೇಲ್ಲವ ತುಂಬುವಂತೆ
ನಲಿಯುತ ಕುಣಿಯುತ , ಒಲಿದು ಬಾ  ನಮ್ಮ ಮನೆಗೆ ಬಾ ॥ ೧ ॥

ಶ್ರೀದೇವಿ ಬಾಮ್ಮ ಧನಲಕ್ಸ್ಮಿ ಬಾಮ್ಮ ಮನೆಯನ್ನು ಬೆಳಕಾಗಿ ಮಾಡು
ದಯೆ ತೋರಿ ಬಂದು ಮನದಲ್ಲಿ ನಿಂತು ಸಂತೋಷ ಸೌಭಾಗ್ಯ ನೀಡು
ಸ್ಥಿರವಾಗಿ ಬಂದಿಲ್ಲಿ ನೆಲೆಸು ತಾಯೆ ವರಮಹಲಕ್ಸ್ಮಿಯೆ ಹರಸು
ಕರವನ್ನು  ಮುಗಿಯುವೆ ಆರತಿ ಈಗ ಬೆಳಗುವೆ || ೨ ॥



೩. ಭಾರತ ಭೂಶಿರ  ಮಂದಿರ ಸುಂದರಿ , ಭುವನ ಮನೋಹರಿ , ಕನ್ಯಾಕುಮಾರಿ ॥

ಸಾಮಗಾನ ಪ್ರಿಯ ಸಾಂಬ ರೂಪಿಣಿ , ಪಾಲಗಡಲ ಸ್ವರ ಪಂಚಮ ಧಾರಿಣಿ  ೨
ಸಾಕಾರ ಷಡ್ಜ್ಯದ ಶರಧಿ ತರಂಗಿಣಿ ,ಸಾಗರ ಸಂಗಮ ಸರಸ ವಿಹಾರಿಣಿ ॥ ೧ ॥

ಶಿವ ತಾಂಡವದ ಢಮರು ನಿನಾದ ,ನಾದ ಬ್ರಹ್ಮ ನ ಓಂಕಾರ ನಾದ ,
ನಾದದೆ  ಲೀನ ಆಗಮ ವೇದ, ನಾದ ವೇದ ಶಿವೆ , ನಿನ್ನ ವಿನೋದ  ॥ ೨ ॥

ಸಂಗೀತ ಸುಧೆಯ ಚೈತನ್ಯ ಧಾರೆ , ಕಣ ಕಣ ನೀನೆ ಕರುಣ ಪೂರೇ
ನವ ಭಾವ ನವ ಜೀವ ನೀ ತುಂಬಿ ,ಬಾರೆ  ನವ ರಸ ವಾಹಿನಿ ನೀ ದಯೆ ತೊರೆ ॥ ೩ ॥




೮.  ಮಹಾಲಕ್ಷ್ಮಿ ಮನೆಗೆ ಬಾರಮ್ಮ ,ನಮ್ಮ ಪ್ರೆಮದಿಂದೊಮ್ಮೆ ನೋಡಮ್ಮ
  ಶುಕ್ರವಾರವೂ ಪೂಜಾ ಸಮಯವೂ  , ನೀ  ಬರದೆ  ಸುಖ ಶಾಂತಿ ಕಾಣೆವು

ನಿನ್ನ ಕಂಗಳ ಚಂದ್ರಿಕೆಯಲ್ಲಿ ನಲಿಯುವ ಭಾಗ್ಯವ ನೀ ಕೊಡಲರೆಯ
ನಿನ್ನ ಕಾಲ್ಗಳ,ಗೆಜ್ಜೆಯ ನಾದಕೆ ಕುಣಿಯುವ ಯೋಗವ ನೀ ತರಲಾರೆಯ
ಈ ಮನೆಯಲ್ಲಿ ಶಾಶ್ವತವಾಗಿ ನೆಲೆಸಿ ನಮ್ಮನ್ನು ಹರಸಮ್ಮ ॥ ೧ ॥

ನಿನ್ನ ಸ್ಮರಣೆಯೇ ಮನಕಾನ್ದವು , ನಿನ್ನ ಕರುಣೆಯೇ ಬಾಳಿನ ದೀಪವು
ನೀನಿರುವಾ ಮನೆ ಭೂ ವೈಕುಂಟವು , ನೀನೋಲಿದಾಗಲೇ ಸಿರಿ ಸೌಭಾಗ್ಯವು
ನಮ್ಬಿಹೆ ನಿನ್ನೆ ಕರವನ್ನು ಹಿಡಿದು ,ಅಮ್ಮ ನನ್ನ ನಡೆಸಮ್ಮಾ ॥ ೨ ॥




ಬುಧವಾರ, ಮೇ 1, 2013

Kannada Bhavageethe

೧. ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದನ್ಥೆ
ರಚನೆ: ಎಂ .ಎನ್ ವ್ಯಾಸರಾವ್

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದನ್ಥೆ 
ನನ್ನೆದೆಯ ಕಡಲೇಕೆ ಬೀಗುತಿಹುದು 
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ 
ಗರಿ ಕೆದರಿ ಕನಸುಗಳು ಕಾಡುತಿಹವು ॥ಪ॥ 

ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು 
ನಿನ್ನ ಹುಣ್ಣಿಮೆ ನಗೆಯು ಛೆಡಿಸಿಹುದು 
ಬಳಿಗೆ ಬಾರದೆ ನಿಂತೆ , ಹೃದಯ ತುಂಬಿದೆ ಚಿಂತೆ 
ಜೀವ ನಿನ್ನಾಸರೆಗೆ ಕಾಯುತಿಹುದು ॥ ॥ 

ನಾನೊಂದು ದಡದಲ್ಲಿ ನೀನೊಂದು ದಡದಲ್ಲಿ 
ನಡುವೆ ಮೈಚಾಚಿರುವಿ ವಿರಹದಳಲು 
ಯಾವ ದೋಣಿಯು ತೇಲಿ ಎಂದು ಬರುವುದೋ ಕಾಣೆ 
ನೀನಿರುವ ಬಳಿಯಲ್ಲಿ ನನ್ನ ಬಿಡಲು || || 

http://yourlisten.com/channel/content/16978026/Ninna_Kangala

೨. ಲೋಕದ ಕಣ್ಣಿಗೆ ರಾಧೆಯು ಕೂಡ
    ರಚನೆ : ಹೆಚ್ .ಯೆಸ್ .  ವೆಂಕಟೇಶ್ ಮೂರ್ತಿ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು  
ನನಗು ಆಕೆ ಕೃಷ್ಣ ನ ತೋರುವ ಪ್ರೀತಿಯು ನೀಡಿದ ಕಣ್ಣು ॥ಪ॥ 

ತಿಂಗಳ ರಾತ್ರಿ ತೊರೆಯ ಸಮೀಪ ,
ಉರಿದರೆ ಯಾವುದೋ ದೀಪ ,
ಯಾರೋ ಮೋಹನ ಯಾವ ರಾಧೆಗೋ 
ಪಡುಥಿರುವನು ಪರಿತಾಪ  ೧ 

ನಾನು ನನ್ನದು ನನ್ನವರೆನ್ನುವ 
ಹಲವು ತೊಡಕುಗಳ ಮೀರಿ ,
ಧಾವಿಸಿ ಸೇರಲು ಬ್ರ್ಹುನ್ದಾವನವ  
ರಾಧೇ ತೊರವಳು ದಾರಿ  ೨ 

ಮಹಾ ಪ್ರವಾಹ ಮಹಾ ಪ್ರವಾಹ , 
ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ 
ತೊರೆದರು ತನ್ನ ತೊರೆಯದು ಪ್ರಿಯನ 
ರಾಧೆಯ ಪ್ರೀತಿಯ ರೀತಿ ,  ೩ 


೩.   ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ
     ರಚನೆ : ಎನ್ .ಎಸ್  ಲಕ್ಷ್ಮಿನಾರಾಯಣ  ಭಟ್ಟ

ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ    
ನಾ ತಾಳಲಾರೆ ಈ ವಿರಹ ಕೃಷ್ಣ 

ಕಮಲವಿಲ್ಲದ ಕೆರೆ ನನ್ನ ಬಾಳು 
ಚಂದ್ರನಿಲ್ಲದ ರಾತ್ರಿ ಬೀಳು 
ನೀ ಸಿಗದೇ ಉರಿ ಉರಿ ಕಳೆದೆ ಇರುಳ 
ಮಾತಿಲ್ಲ ಬಿಗಿಧಿದೆ ದುಃಖ ಕೊರಳ  ೧ 

ಅನ್ನ ಸೇರದು ನಿದ್ದೆ ಬಂದುದೆಂದು 
ಕೂಡಿವೆ ಒಂದೇ ಸಮ ಕೃಷ್ಣ ಎಂದು 
ಯಾರು ಅರಿಯರು ಹೇಳು ನನ್ನ ನೋವ 
ತಲ್ಲಣಿಸಿ ಕೂಗುತಿದೆ ದಾಸಿ ಜೀವ ೨ 

ಒಳಗಿರುವ ಗಿರಿಧರನೇ ಹೊರಗೆ ಬಾರೋ 
ಕಣ್ಣೆದುರು ನಿಂತು ಆ ರೂಪ ತೋರೊ 
ಜನುಮ ಜನುಮದ ರಾಗ ನನ್ನ ಪ್ರೀತಿ 
ನಿನ್ನೊಳಗೆ ಹರಿವುದೇ ಅದರ ರೀತಿ  ೩
http://yourlisten.com/channel/content/16979558/nee_sigade 

೩. ನಾನ ಇನಿಯನ ನೆಲೆಯ ಬಲ್ಲೆಯೇನೆ
ರಚನೆ ಎನ್ .ಎಸ್  ಲಕ್ಷ್ಮಿನಾರಾಯಣ  ಭಟ್ಟ

ನಾನ ಇನಿಯನ ನೆಲೆಯ ಬಲ್ಲೆಯೇನೆ   
ಹೇಗೆ ತಿಳಿಯಲಿ ಅದನು ಹೇಳೇ ನೀನೆ ॥ಪ॥ 

ಇರುವೆ ಸರಿಯುವ ಸದ್ಧು, ಮೊಗ್ಗು ಬಿರಿಯುವ ಸದ್ದು 
ಮಂಜು ಇಳಿಯುವ ಸದ್ಧು ಕೇಳಬಲ್ಲ 
ನನ್ನ ಮೊರೆಯನು ಏಕೆ  ಕೆಳಲೊಲ್ಲ  ॥೧ ॥ 

ಗಿರಿಯ ಎತ್ತಲು ಬಲ್ಲ , ಶರಧಿ ಬತ್ತಿಸಬಲ್ಲ 
ಗಾಳಿ ಉಸಿರನೆ ಕಟ್ಟಿ ನಿಲಿಸಬಲ್ಲ 
ನನ್ನ ಸೇರೆಯನು ಏಕೆ ಬಿಡಿಸಲೊಲ್ಲ  |೨ 

ನೀರು ಮುಗಿಲಾದವನು ,ಮುಗಿಲು ಮಳೆಯಾದವನು 
ಮಳೆ ಬಿದ್ದು , ತೆನೆ ಎದ್ದು ತೂಗುವವನು 
ನನ್ನೀ ಅಳಲನು ಏಕೆ ತಿಳಿಯದವನು  । ೩ 
http://yourlisten.com/channel/content/16979556/Nanna_Iniyana

೪. ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ರಚನೆ  ಎಸ್.ವಿ  ಪರಮೇಶ್ವರ ಭಟ್ಟ್

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ನಲ್ಲ ನೀ , ಬಂದಂದು ಕಣ್ಣಾರೆ  ಕಂಡನ್ದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ   ॥ಪ ॥

ಕರಿ ಗೆಜ್ಜೆ ಕುಣಿಸುತ್ತ ಕಣ್ಣೀರ ಮಿಡಿಯುತ್ತ
ಇರುಳಾಕೆ ಬಂದಳು ದೀಪ ಹಚ್ಚ
ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ ದೀಪ ಹಚ್ಹ  ॥ ೧ ॥

ಹಳೆ ಬಾಳು ಸತ್ತಿತ್ತು ಕೊಳೆ ಸುಟ್ಟಿತ್ತು
ಹೊಸ ಬಾಳು ಹುಟ್ಟಿತ್ತು ದೀಪ ಹಚ್ಚ
ಪ್ರೀತಿಯ ರತಿ ಗೆ ನೀ ಬೆಳಕಿನ ಆರತಿ
ಬೆಳಗಿ ಕಂದಾರತಿ ದೀಪ ಹಚ್ಚ ||೨ ॥

ವಿಶ್ವ ಮೋಹಿತ ಚರಣ ವಿವಿಧ ವಿಶ್ವಾಭರಣ
ಆನಂದದ ಕಿರಣ ದೀಪ ಹಚ್ಚ
ನೀನೆಂಬ ಜ್ಯೋತಿಯಲಿ ನಾನೆಂಬ ಪಥಂಗ
ಸೋತ ಹುಲಿ ಏಳಲಿ ದೀಪ ಹಚ್ಹ
ನನ್ನ ಅಂತರಂಗದಿ  ನಂದದೆ ನಿನ್  ದೀಪ
ನನ್ನ ದೀಪವಾಗಿರಲಿ ದೀಪ ಹಚ್ಹ ॥ ೩ ॥


೫. ಮುಂಗಾರಿನ ಅಭಿಷೇಕಕೆ ಮೆದುವಾಯಿತು ನೆಲವು
ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ॥ಪ॥

ಬಾಯಾರಿದ ಬಯಕೆಗಳಲಿ ಥಳ ಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ ಪ್ರೀತಿಯಂಥ ಹಸಿರು ॥೧ ॥

ಮೈಮನಗಳ ಕೊಂಬೆಯಲಿ ಹೊಮ್ಮುವ ಧನಿ ಇಂಪು
ನಾಳೆಗೆ ನನಸಾಗುವ ಕನಸಿನ ಹೂವರಳುವ ಕಂಪು ||೨ ॥

ಭರವಸೆಗಳ ಹೊಲಗಳಲಿ ನೇಗಿಲ ಗೆರೆ  ಕವನ
ಶ್ರಾವಣ ದಲಿ ತೆನೆದೂಗುವ ಜೀವೋತ್ಸವ ಗಾನ ॥ ೩ ॥


೬. ಏನೇ ಬರಲಿ ಎಂಥೆ ಇರಲಿ
ರಚನೆ : ಮಾಸ್ತಿ ವೆಂಕಟೇಶ

ಏನೇ ಬರಲಿ ಎಂಥೆ ಇರಲಿ
ಅನುದಿನ ಯಾವ ಅಸುಖ ಸುಖ ತರಲಿ
ಬಾಳ ಗೊಂದಲದ ಕರ್ಕಶದೆದೆಯಲಿ
ಕೆಳುತಿರಲಿ ಹರಿ ನಿನ್ನ ಮುರಳಿ ॥ಪ॥

ನೋವಲೇಪದಲಿ ಬದುಕಿನ ಹಣ್ಣು
ಬಾಯೊಳಗಿರಲು ಎಂಥದೋ ಮಣ್ಣು
ದೃಷ್ಟಿ ಕೆಟ್ಟು ಕತ್ತಲ ನಿಟ್ಟಿಸಿ ನಿಲ್ಲೇ
ಕಾಣಲಲ್ಲಿ ದೊರೆ ನಿನ್ನ ಕಣ್ಣು ॥ ೧ ॥

ಮೆತ್ತನ ಹಾಸಿಗೆ ಮುಳ್ಳಿನೊಳಾಗಿ
ಭೇನೆಯ ಖನೆ ಆತ್ಮವನೆ ತಾಗಿ
ಇನ್ನು ಏನು ಗತಿ ಎನ್ನುವ ವೇಳೆ
ಕೈ ಹಿಡಿದಿರು ಕರುಣೆ ನೀನಾಗಿ || ೨ ॥

೭. ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ
ರಚನೆ: ಬಿ ಆರ್ .ಲಕ್ಷ್ಮಣ್ ರಾವ್

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ
ಸಿಕ್ಕ ಮೀನು ಮಿಡುಕಾಡುತಿರುವೆ ನಾನು
ಕಡಿಯೋಲಲ್ಲೇ ನೀನ್ ಕರುಳ ಬಳ್ಳಿ
ಒಲವೂಡುತಿರುವ ತಾಯೆ ಬಿಡದ ಭುವಿಯ ಮಾಯೆ  ॥ಪ॥

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ
ಎಷ್ಟು ದಿನ ದೂಡು ಹೊರಗೆ ನನ್ನ
ಓಟ ಕಲಿವೆ ಒಳನೋಟ ಕಲಿವೆ
ನಾ ಕಲಿವೆ ಊರ್ಧ್ವಗಮನ , ಓ ಅಗಾಧ ಗಗನ ।। ೧ ॥

ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ
ಇಂಧನ ತೀರಲು ಬಂದೆ ಬರುವೆನು
ಮತ್ತೆ ನಿನ್ನ ತೊಡೆ ಗೆ , ಮೂರ್ತ ಪ್ರೇಮದೆಡೆಗೆ ॥ ೨॥
http://yourlisten.com/channel/content/16979548/AmmaNinna


೮. ಆಗು ಗೆಳೆಯ ಆಗು ನೀನು ಭರವಸೆಯ ಪ್ರವಾಧಿ
ರಚನೆ: ಬಿ ಆರ್ .ಲಕ್ಷ್ಮಣ್ ರಾವ್

ಆಗು ಗೆಳೆಯ ಆಗು ನೀನು ಭರವಸೆಯ ಪ್ರವಾಧಿ
ಹತಾಶೆಯಲ್ಲೆನಿದೆ ಬರಿ ಶೂನ್ಯ ಬರಿ ಬೂದಿ

ಕೊಚ್ಚಿದಷ್ಟು  ಹೆಚ್ಚಿ ಬರುವ ಸೃಷ್ಟಿ  ಶೀಲ ಪ್ರಕೃತಿ
ಉಬ್ಬೆಯಲ್ಲೂ ಹುಳಿ ನೀಗಿದ ಸಿಹಿ ಹಣ್ಣಿನ ಪ್ರೀತಿ
ಅದುಮಿದಸ್ಟು  ಚಿಮ್ಮಿ ಬರುವ ಚೈತನ್ಯ ದ ಚಿಲುಮೆ
ಇಂದು ನಮ್ಮ ಯತ್ನ ಗಳಿಗೆ ಇದೆ ತಕ್ಕ ಪ್ರತಿಮೆ ॥ ೧॥

ಜೋಪಡಿಯಲು ಜೋಗುಳ ಅಂಗಳದಲಿ ಹೂ ಹಸೆ
ಕೊಳೆಗೆರೆಯ ಕೊಚ್ಚೆಯಲ್ಲೂ ಮಗು ಗುಲಾಬಿ ನಗೆ
ಚಿನ್ದಿಯಲ್ಲೂ ಹಿಗ್ಗೋ ಹರೆಯ ನೂರು ಕನಸು  ಕವಿತೆ
ಹಟ್ಟಿಯಲ್ಲು  ಹುಟ್ಟು ಹಬ್ಬ ಮುಮ್ಬೇಳಗಿನ ಹಣತೆ  || ೨ ॥

 ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೆ ಇಟ್ಟಿಗೆ
ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊತ್ತಿಗೆ
ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ
ಇಲ್ಲದಿರಲು ನಿನ್ನ ಎ ಹತಾಶೆ ಕೂಡ ಸ್ವಾರ್ಥ ॥೩ ॥
http://yourlisten.com/channel/content/16979547/Bhavageethe


೯.ಯಾವ ರಾಗಾಕೋ ಏಕೋ ನನ್ನೆದೆ ವೀಣೆ ಮಿಡಿಯುತ ನರಳಿದೆ
ರಚನೆ : ಜೆ . ಎಸ್  . ಶಿವರುದ್ರಪ್ಪ

ಯಾವ ರಾಗಾಕೋ ಏಕೋ ನನ್ನೆದೆ ವೀಣೆ ಮಿಡಿಯುತ ನರಳಿದೆ
ಬಯಸುತಿರುವ ರಾಗ ಹೊಮ್ಮದೇ ಬೇರೆ ನಾದಗಳೆದಿದ್ದೆ ॥ಪ॥

ಉದಯ ಅಸ್ಥದ ಎದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಳ  ಭೇಗೆಗೆ ತಣಿಲ  ತಂಪಿಗೆ ಧುಮುಕಿ ಶೋಧಿಸಿ ಬಳಲಿತು
ಬೀಸುತಿಹ ಬಿರುಗಾಳಿ   ಅಬ್ಭರದೆದೆಗೆ  ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಇಡಿಯೇ ಬಯಸುತ ಸೋತಿತು ॥ ೧ ॥

ಮುಗಿಲ ತಾರೆಯ ರಜತ ನಂದನದೊಳಗೆ ಧನಿಯನು ಹುಡುಕಿತು
ಸರ್ವ ಋತುಗಳ ಕೋಶ  ಕೋಶ ಕೆ ನುಗ್ಗಿ ತೃಪ್ತಿಯ ಅರಸಿತು
ಏನೇ ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ ಎದೆಯ ತುಂಬಿದೆ , ಮೂಕವಾಗಿದೆ ಹೃದಯವು  || ೨॥
http://yourlisten.com/channel/content/16979560/yaava_raaga

೧೦ . ನಿನ್ನದೇ ನೆಲೆ ನಿನ್ನದೇ ಜಲ ನಿನ್ನದೇ ಆಕಾಶ
ರಚನೆ : ಜಿ .ಎಸ್ . ಶಿವರುದ್ರಪ್ಪ

ನಿನ್ನದೇ ನೆಲೆ ನಿನ್ನದೇ ಜಲ ನಿನ್ನದೇ ಆಕಾಶ
ಕಿಂಚಿತ್ತು ಅನುಮನಾಕೆ ಇಲ್ಲವೋ ಅವಕಾಶ

ಈ ನದಿಗಳು ಶತಮಾನವು ಬೆಳೆದ ಕನಸು ನಿನ್ನದೇ
ಈ ಜನತೆಯು ಬೆವರು ಸುರಿಸಿ ದುಡಿದ ನನಸು ನಿನ್ನದೇ ॥ ೧ ॥

ಗಡಿಯುದ್ಧಕ್ಕು ಸಿಡಿ ಗುಂಡಿಗೆ ಒಡ್ಡಿದ ಎದೆ ನಿನ್ನದೇ
ಹಿಮಾಲಯದ ಶಾಂತಿಯಲ್ಲಿ ಎತ್ತಿದ ತಲೆ ನಿನ್ನದೇ  || ೨ ॥

ನೂರಾಸೆಯ ಹೆಗಲೇರಿಸಿ ನಡೆದ ದಾರಿ ನಿನ್ನದೇ
ಬರುವ ದಿನದ ಭರವಸೆಗಳ ಬೆಳೆವ ಹೊಣೆಯು ನಿನ್ನದೇ ॥ ೩ ॥
http://yourlisten.com/channel/content/16983499/Ninnade_Nela


೧೧. ಇದಾವ ರಾಗ ಮತ್ತೆ ಇದಾವ ರಾಗ
ರಚನೆ : ಜಿ .ಎಸ್ . ಶಿವರುದ್ರಪ್ಪ

ಇದಾವ ರಾಗ ಮತ್ತೆ ಇದಾವ ರಾಗ
ಎದೆಯಾಳದಿನ್ದೆದ್ದು ನಭ ನೀಲಿಗೆರುತಿದೆ  ॥ಪ॥

ಯುಗ ಯುಗಾನ್ಥರದೆದೆಯ ನೋವುಗಳ ಕೆರಳಿಸಿದೆ
ಜನುಮಗಳ ಕಣ್ಣೀರ ಕೊಳಗಳನು ಕದಡುತಿದೆ
ಮುರಿದ ಶತ ಬಯಕೆಗಳ ಮೇಲೆತ್ತಿ ತೂರುತಿದೆ
ಬಗೆಯ ಬಾನ್ ಬಯಲಿನಲ್ಲಿ ಮೋಡಗಳ ಕವಿಸುತಿದೆ ॥ ೧ ॥

ಹಚ್ಚ ಹಸುರೆದೆಯಿಂದ ಬಿಸಿಯುಸಿರ ಹೊಮ್ಮಿಸಿದೆ
ಜೀವನದ ತಂತಿಗಳ ಝುಮ್ಮೆಂದು ನಡುಗಿಸಿದೆ
ಸುಪ್ತ ಜ್ವಾಲಾಮುಖಿಯತಟ್ಟಿ ಎಚ್ಚರಿಸುತಿದೆ
ಹಣೆಯ ಬರಹವನೋರಸಿ ಬೆರೆದು ಬರೆಯುತಿದೆ ॥ ೨ ॥
http://yourlisten.com/channel/content/16979550/Idu_yaava_Raaga

೧೨ . ಕರುಣಾಳು ಬಾ ಬೆಳಕೆ
ರಚನೆ : ಬಿ . ಎಂ ಶ್ರೀಕಂಠಯ್ಯ

ಕರುಣಾಳು ಬಾ ಬೆಳಕೆ ,ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನನ್ನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ,
ಕೈ ಹಿಡಿದು ನಡೆಸೆನನ್ನು ॥ ಪ ॥

ಹೇಳಿ ನನ್ನಡಿ ಇಡಿಸು ಬಲು ದೂರ ನೋಟವನು
ಕೆಳನೊಡನೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನನ್ನು॥ ೧ ॥

ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯೂ ಕೈ ಹಿಡಿದು ನಡೆಸದಿಹೆಯ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು,
ಇರುಳನ್ನು ನೂಕದಿಹೆಯ
ಬೆಳಗಾಗ ಹೊಳೆದೆಯೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ  ॥ ೨ ॥
http://yourlisten.com/channel/content/16983483/KarunaaLU


೧೩ . ಎದೆಯು ಮರಳಿ ತೊಳಲುತಿದೆ , ದೊರೆಯದುದುನೆ ಹುಡುಕುತಿದೆ
ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ  ತನ್ನ  ಕುಡಿಯನು॥ ಪ॥

ಸಿಗಲಾರದ ಆಸರಕೆ ಕಾದ ಕಾವ ಬೇಸರಕೆ ,
ಮಿಡುಕಿ ದುಡುಕಲೆಳಸುತಿದೆ ತನ್ನ ಗಡಿಯನು ॥ ೧ ॥

ಅದಕು ಇದಕು ಅಂಗಲಾಚಿ ತನ್ನೊಲವಿಗೆ ತಾನೆ  ನಾಚಿ,
ದಡವ ಮುಟ್ಟಿ ಮುಟ್ಟದೊಲು , ಹಿಂದೆಗೆಯುವ ವೀಚಿ ವೀಚಿ ,
ಮುರುಟುತಲಿವೆ ಮನದಲಿ  ॥ ೨ ॥

ನೀರದಗಳ ದೂರ ತೀರ ಕರೆಯುತಲಿದೆ ಎದೆಯ ನೀರ
ಮೀರುತಲಿದೆ ಹೃದಯ ಬಾರಾ ತಾಳಲೆಂತು ನಾ
ಯಾವ ಬಲವು ಯಾವ ಒಲವು , ಕಾಯಬೇಕು ಅದರ ಹೊಳವು
ಕಾಣದೆ ದಳ್ಳಿಸಲು  ಮನುವು, ಬಾಳಲೆಂತು ನಾ ॥ ೩ ॥
http://yourlisten.com/channel/content/16983484/Edeyu_Marali



೧೪ . ನೀನು ಮುಗಿಲು , ನಾನು ನೆಲ , ನಿನ್ನ ಒಲವೆ ನನ್ನ ಬಲ
ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ  ॥ ಪ ॥

ನಾನು ಎಳೆವೆ, ನೀನು ಮಣಿವೆ ,ನಾನು ಕರೆವೆ ನೀನು ಸುರಿವೆ ,
ನಮ್ಮಿಬರ ಒಲುಮೆ ನಲುಮೆ ಜಗಕಾಇತು ಹುಣ್ಣಿಮೆ
ನಾ ಅಚಲದ ತುಟಿ ಎತ್ತುವೆ ನೀ ಮಳೆಯೊಳು ಮುತ್ತನಿಡುವೆ
ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ  ॥ ೧ ॥

ಸೂರ್ಯ ಚಂದ್ರ ಚಿಕ್ಕೆಗಣ್ಣ ತೆರೆದು ನೀನು ಸುರಿವ ಬಣ್ಣ
ಹಸಿರಾಯಿತು , ಹೂವಾಯಿತು ಚೆಲುವಾಯಿತು ಈ ನೆಲ
ನೀನು ಗಂಡು ನಾನು ಹೆಣ್ಣು , ನೀನು ರೆಪ್ಪೆ ನಾನು ಕಣ್ಣು ,
ನಮ್ಮಿಬರ ಮಿಲನದಿಂದ ಸುಫಲವಾಯಿತು ಜೀವನ ॥ ೨ ॥
http://yourlisten.com/channel/content/16983494/neenu_Mugilu


೧೫ . ನೀನಿಲ್ಲದೆ ನನಗೇನಿದೆ ಮನಸೆಲ್ಲ ನಿನ್ನಲೇ ನೆಲೆಯಾಗಿದೆ ,
ಕನಸೆಲ್ಲ ಕಣ್ಣಲ್ಲೇ ಸೆಲೆಯಾಗಿದೆ ॥ ಪ ॥

ನಿನಗಾಗಿ ಕಾದು ಕಾದು  ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು
ಎದೆಯಾಸೆ ಏನು ಎಂದು ನೀನ್ ಕಾಣದಾದೆ
ನಿಶೆಯೊಂದೆ ನನ್ನಲ್ಲಿ ನೀನ್ ತುಂಬಿದೆ,
ಬೆಳಕೊಂದೆ ನಿನ್ನಿಂದ ನಾ ಬಯಸಿದೆ  ॥ ೧ ॥

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ ,
ಒಣಗಿರುವ ಎದೆ ನೆಲದಲ್ಲಿ ಭರವಸೆಯ ಜೀವ ಹರಿಸಿ ,
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ  ॥ ೨ ॥

೧೬ . ತಪ್ಪಿ ಹೋಯಿತಲ್ಲೇ ಚುಕ್ಕಿ , ಬೆಳಕಿನ ಜಾಡು
ಇನ್ನಿಲ್ಲವಾಯಿತೆ ಆ  ಹಕ್ಕಿ ಹಾಡು ,
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ ,
ಮುರಿದು ಹೋಯಿತೆ ಈಗ ಅ ಪುಟ್ಟ ಗೂಡು  ॥ ಪ ॥

ಹನಿ ಹನಿಯಾಗಿ ತೆನೆದು ತೂಗಿದ ಪ್ರೀತಿ
ಹರಿದು ಚೂರಯಿತೆ ಎದೆಯ ಒಲವಿನ ಬೀಡು
ರೆಕ್ಕೆ ಬಡಿದೊತ್ತಿ ಎತ್ತಿಕೊಳ್ಳುವ ಹಕ್ಕಿ ,
ಹಾಡಿನ ಜಾಡು ಹಿಡಿಯುತ್ತ ನನ್ನ ಪಾಡು  ॥ ೧ ॥

ಎಲ್ಲಿ ಹೋಯಿತು ವಲಸೆ ಗೂಡು ತೊರೆದ ಹಕ್ಕಿ
ಸೇರಿ ಹೋಯಿತೆ ನೀನಿ ಮುಗಿಲ ಮರೆಯ ನಾಡು
ಹಾಡ ನೆನಪಿಗೆ ಹಿಂಡಿ ತೆವಳುತಿದೆ ಜೀವ
ಮುಂದೆ ಬಯಲು , ಹಿಂದೆ ಬಿದ್ದಿತು ಕಾಡು ಮೇಡು ॥ ೩ ॥
http://yourlisten.com/channel/content/16986918/TappiHoyitalle


೧೭ . ಅಮ್ಮ ಹಚ್ಚಿದೊಂದು ಹಣತೆ
ರಚನೆ : ಏಮ್. ಆರ್ . ಕಮಲಾ

ಅಮ್ಮ ಹಚ್ಚಿದೊಂದು ಹಣತೆ , ಇನ್ನು ಬೆಳಗಿದೆ
ಮನಕೆ ಮಬ್ಬು ಕವಿಯಾದಂತೆ ಸದಾ ಕಾದಿದೆ  ॥ ಪ ॥

ಕಪ್ಪು ಕಡಲಿನಲ್ಲಿ ದೋಣಿ ದಿಕ್ಕು ತಪ್ಪಲು
ದೊರದಲ್ಲಿ ತೀರವಿದೆ ಎಂದು ತೋರಲು ॥ ೧ ॥

ಕೃತಕ ದೀಪ ಕತ್ತಲಲ್ಲಿ ಕಳೆದು ಹೋಗದಂತೆ
ಸೂರ್ಯ ಚಂದ್ರ ತಾರೆಯಾಗಿ ಹೊಳೆದು ಬಾಳುವಂತೆ  ॥ ೨ ॥

ಅಂತರಂಗದಲ್ಲಿ ನೂರು ಕಗತ್ತಲ ಕೋಣೆ ,
ನಾದ ಬೆಳಕ ತುಂಬಲು ಮಿಡಿದ ಹಾಗೆ ವೀಣೆ  ॥ ೩ ॥
http://yourlisten.com/channel/content/16983487/Amma_Hacchidondu

೧೮ . ಬಾವದೊಂದು ವೀಣೆ ದೋಣಿ
ರಚನೆ : ಏಮ್. ಆರ್ . ಕಮಲಾ

ಬಾವದೊಂದು ವೀಣೆ ದೋಣಿ ಮುರಿದು ಬಿದ್ದಿತ್ತು
ತಂತುಗಳು ಸಡಿಲಾಗಿ ಕಳಚಿ ಕೊಂಡಿತು ॥ ಪ ॥

ಅಣ್ಣ ಅಕ್ಕ ತಮ್ಮನೆಂದು ಹಿಗ್ಗಿ ಕುಣಿಯುತ
ಒಂದೇ ದೋಣಿಯಲಿ ಪಯಣ  ಬೆಳೆಸಿರುವಾಗ ,
ಎದೆಯ ಹೊಳೆಗೆ ಯಾವ ಕೊಳೆಯು ಕೂಡಿಕೊಂಡಿತು
ಹಾಲ ಕಡಲಿನ್ನಲಿ ಹುಳಿಯ ಬಿಂದು ಸೇರಿತು ॥ ೧ ॥

ಅಮೃತಕ್ಕು ಮೊದಲು ಉದಿಸಿತೆ ಹಾಲಾಹಲ ,
ಅದನೆ ಹಂಚಿ ಕುಡಿಯಲು ಕಾದಡಿದೆವು ,
ಅವರವರ ಕನಸನರಸಿ ಅವರೆ  ದ್ವೀಪವಾದರು
ನಡುವೆ ಹರಿದ ದೋಣಿಯನ್ನೇ ತೊರೆದು ಬಿಟ್ಟರು ॥ ೨ ॥
http://yourlisten.com/channel/content/16983489/Bhavadondu_veene



೧೯ . ಉಡುಗಣವೇಷ್ಟಿತ ಚಂದ್ರ ಸುಶೋಭಿತ ದಿವ್ಯಾಂಬರ ಸಂಚಾರಿ ,
ಕಣ್ಣ ನೀರಿನಲಿ, ಮಣ್ಣ ಧೂಳಿನಲಿ ಹೊರಳುತ್ತಿರುವರ ಸಹಚಾರಿ  ॥ ಪ ॥

ಕೋಟಿ ಸೂರ್ಯಕರ , ತೇಜ ಪುಂಜ ಥರ ,
ವಿದ್ಯುತ್ರಾರ್ಜಿಥ ರಥಗಾಮಿ ,
ಉಳುತಿಹ ರೈತನ ನೇಗಿಲ ಸಾಲಿನ
ಮಣ್ಣಿನ ರೇಖಾ ಪಥಗಾಮಿ ॥ ೧ ॥

ಬಾಂದಳ ಚುಂಬಿತ ಶುಭ್ರ  ಹಿಮಾವೃತ
ತುಂಗ ಶೃಂಗದಲಿ ಗೃಹ ವಾಸಿ
ದೀನಾನತರ ದುಃಖಿ ದರಿದ್ರ
ಮುರುಕು ಗುಡಿಸಿಲಲಿ ಉಪವಾಸಿ ॥  ೨ ॥
http://yourlisten.com/channel/content/16983490/Udugana



೨೦ . ಯಾರ ಹಾಡ ಕೊರಳಾಗಿ , ಒಳ ದನಿಯ ಮರೆತೇನೋ
ಯಾರ ವೀಣೆ ಬೆರಳಾಗಿ ಅಪಸ್ವರವ ಮಿಡಿದೇನೋ ॥ ಪ ॥

ಯಾವ ವೇಷ ತೊಟ್ಟು ನಾನು , ರಂಗದಲ್ಲಿ ಕುಣಿದೇನೋ
ಯಾವ ಗೆಜ್ಜೆ ನಾದಕಾಗಿ ಪಾದವನ್ನೇ ತೆತ್ತೇನೋ ॥ ೧ ॥

ಯಾವ ಜೀವ ಬೆಳಗಲೆಂದು ದೀಪವಾಗಿ ಉರಿದೇನೋ
ಯಾರ ಪಯಣ ಸಾಗಲೆಂದು ,ಹಾದಿಯಾಗಿ ಹರಿದೇನೋ ॥ ೨ ॥

ಯಾರ ಕನಸ ಕಟ್ಟ ಹೋಗಿ ಬಣ್ಣಗೆಟ್ಟು ನಿಂತೇನೋ ,
ಎದೆಯ ನೋವು ಹಾಡಗದೆ ಬರಿಯ ಶಬ್ಧವಾದೇನೋ ॥ ೩ ॥
http://yourlisten.com/channel/content/16983491/Yaara_Haada_KoraLagi


೨೧. ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ರಚನೆ : ಎನ್. ಎಸ್  ಲಕ್ಷ್ಮಿನಾರಾಯಣ್ ಭಟ್ಟ

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು , ನಾವು ನಮ್ಮ ಅಂತರಾಳವ ?

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿವುದೇನು ಹಾಯಿ ದೋಣಿಗೆ ॥ ೧ ॥

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೆನು ನೀಲಿ ಬಾನಿಗೆ ॥ ೨ ॥

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯೇತೆ ಕನ್ನಡಿಯ ಪಾಲಿಗೆ ॥ ೩  ॥
http://yourlisten.com/channel/content/16983492/Istu_Kaala

೨೨ .  ಅಳುವ ಕಡಲೊಳು ತೇಲಿ ಬರುತಲಿದೆ
ರಚನೆ : ಎಂ  ಗೋಪಾಲ ಕೃಷ್ಣ ಅಡಿಗ

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ
ಬಾಳ  ಗಂಗೆಯ ಮಹಾ ಪೂರದೊಳು ಸಾವಿನೊಂದು ವೇಣಿ
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆ ತೆರೆಗಳೊಳಿಯಲ್ಲಿ
ಜನನ ಮರಣಗಳ ಉಬ್ಬು ತಗ್ಗು ಹೊರಳುರುಳುವಾಟವಲ್ಲಿ  ॥ ಪ ॥

ಆಸೆ ಬೂದಿ ತಳದಲ್ಲೂ ಕೆರಳುತಿವೆ  ಕಿಡಿಗಳೆನಿತೋ ಮರಳಿ
ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ
ಕೂಡಲಾರದೆದೆಯಾಳದಲ್ಲು ಕಂಡೀತು  ಏಕ ಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲೂ ಭಿನ್ನತೆಯ ವಿಕಟ ಹಾಸ್ಯ ॥ ೧ ॥

ಎತ್ತರೆತ್ತರಕೆ ಏರುವ ಮನಕು ಕೆಸರ ಲೇಪ ಲೇಪ
ಕೊಳೆಯ ಕೊಳಚೆಯಲಿ ಮುಳುಗಿ ಕಂಡೆನು ಬಾನಿನೊಂದು ಪೆಂಪ
ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ
ತಮಧಗಾದ ಹೊನಲಲ್ಲು ಹೊಳೆಯುತಿದೆ ಸತ್ವವೊಂದ ಕಂಡ ॥ ೨ ॥

ಆಸೆ ಎಂಬ ತಳ ಒಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೋ, ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣ
ಇದು ಬಾಳು ನೋಡು ಇದ ತಿಳಿದೆನೆಂದರು ತಿಳಿದ ಧೀರನಿಲ್ಲ
ಹಲವು ತನದ ಮೈ ಮರೆಸುವಾಟವಿದು ನಿಜವು ತಿಳಿವುದಲ್ಲ ॥ ೩ ॥
http://yourlisten.com/channel/content/16986922/AluvaKadaLoLu


 ೨೩. ಅಮ್ಮ ನಾನು ದೆವರಾಣೆ ಬೆಣ್ಣೆ
ರಚನೆ : ಹೆಚ್ . ಎಸ್ ವೆಂಕಟೇಶ್ ಮೂರ್ತಿ

ಅಮ್ಮ ನಾನು ದೆವರಾಣೆ ಬೆಣ್ಣೆ ಕದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ  ॥ ಪ ॥

ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ
ಹೇಗೆ ತಾನೇ ತೆಗಯಲಿ ಅಮ್ಮ ನನ್ನ ಪುಟ್ಟ ಕೈಗಳ್ಳಲ್ಲಿ ॥ ೧ ॥

ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತ
ಬೆಣ್ಣೆ ಒರಸಿದ ಕೈಯಾ ಬೆನ್ನ ಹಿಂದೆ ಮರೆಸುತ್ತ ॥ ೨ ॥

ಎತ್ತಿದ ಕೈಯ ಕಡಗೋಲನ್ನು , ಮೂಲೆಲೆಟ್ಟು ನಕ್ಕಳು ಗೋಪಿ
ಸೂರ ದಾಸ ಪ್ರಿಯ ಶ್ಯಾಮನ ,ಮುತ್ತಿಟ್ಟು ನಕ್ಕಳು ಗೋಪಿ ॥ ೩ ॥



೨೫ . ಒಂದೇ ಬಾರಿ ನನ್ನ ನೋಡಿ
ರಚನೆ : ದ ರ ಬೇಂದ್ರೆ

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ  ಹೋದ ಹಿಂದ ನೋಡದ
ಗೆಳತಿ ಹಿಂದ ನೋಡದ

ಗಾಳಿ ಹೆಜ್ಜೆ ಹಿಡದ ಸುಗಂಧ ,ಅತ್ತ ಅತ್ತ ಹೋಗು ಅಂದ
ಹೋತ ಮನಸು ಅವನ ಹಿಂದ , ಹಿಂದ ನೋಡದ
ಗೆಳತಿ ಹಿಂದ ನೋಡದ ॥ ೩ ॥

ನಂದೇ ನಂಗೆ ಎಚ್ಚರಿಲ್ಲ , ಮಂದಿ ಗೊಡವಿ ಎನ ನನಗ 
ಒಂದೇ ಅಳತಿ ನಡದದ ಚಿತ್ತ ,ಹಿಂದ ನೋಡದ
ಗೆಳತಿ ಹಿಂದ ನೋಡದ ॥ ೨ ॥

ಸೂಜಿ ಹಿಂದ ದಾರದಾಂಗ , ಕೊಳ್ಳದೊಳಗ ಜಾರಿದಂಗ
ಹೋತ ಹಿಂದ ಬಾರದಂಗ,ಹಿಂದ ನೋಡದ
ಗೆಳತಿ ಹಿಂದ ನೋಡದ  ॥ ೩ ॥
http://yourlisten.com/channel/content/16986925/Ondebaari


೨೬ .ಯಾವ ಮೋಹನ ಮುರಳಿ
ರಚನೆ : ಎಮ್.   ಗೋಪಾಲ ಕೃಷ್ಣ ಅಡಿಗರು

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂದನ ಚುಂಬನ 
ಬಯಕೆ ತೋಟದೊಳಗೆ ಬೇಲಿಯೊಳಗೆ ಕರಣಗಣದಿ ರಿಂಗಣ  ॥ ೧ ॥

ಸಪ್ತ ಸಾಗರದಾಚೆ ಎಲ್ಲೋ ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಖ ಮರ್ಮರ ಇಂದು ಇಲ್ಲಿಗೆ ಹಾಯಿತೆ ॥ ೨ ॥

ವಿವಶವಾಯಿತು ಪ್ರಾಣಹ , ಪರವಶವು ನಿನ್ನಿ ಚೇತನ
ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿವುದೇ ಜೀವನ  ॥ ೩ ॥
http://yourlisten.com/channel/content/16986926/YaavaMohana



೨೭ .ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು
ರಚನೆ : ಕೆ .ಎಸ್ . ನರಸಿಂಹ ಸ್ವಾಮಿ

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ , ನಿನ್ನೊಲುಮೆ ನನ್ನ ಕಂಡು ।।ಪ।।

ಸಾಗರನ ಹೃದಯದಲಿ ರತ್ನ ಪರ್ವತ ಮಾಲೆ ಮಿಂಚಿನಲಿ ಮೀವುದಂತೆ
ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ ।। ೧।।

ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ , ಒಳಗಡಲ ರತ್ನ ಪುರಿಗೆ
ಅಲೆಯುಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ , ಒಳಗಡಲ ಮೂರ್ತಿ ಮಹಿಮೆ ॥ ೨ ॥


೨೮ . ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ರಚನೆ : ಕೆ. ಎಸ್ ನರಸಿಂಹ ಸ್ವಾಮಿ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ
ಚಿನ್ನದ ಬಣ್ಣದಜಿಂಕೆಯ ಕಣ್ಣಿನ ಮಿಂಚಾಗುವ ಆಸೆ  ॥ ೧ ॥

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ  ॥ ೨ ॥

ಸಿಡಿಲನು ಕಾರುವ ಬಿರಿಮಳೆಗಂಜದೆ ಮುನ್ನಡೆಯುವ ಆಸೆ
ನಾಳೆಯ ಬದುಕಿನ ಇರುಳಿನತಿರುವಿಗೆ ದೀಪವನಿಡುವಾಸೆ ॥ ೩ ॥

೨೯ . ಮೂಡಲ ಮನೆಯ ಮುತ್ತಿನ ನೀರಿನ
ರಚನೆ ದ ರ ಬೇಂದ್ರೆ

 ಮೂಡಲ ಮನೆಯ ಮುತ್ತಿನ ನೀರಿನ ,ಎರಕಾವ ಹೊಯ್ದ
ನುಣ್ಣನೆ ಎರಕಾವ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು ಜಗವೆಲ್ಲ ತೊಯ್ದ ,
ದೇವನು ಜಗವೆಲ್ಲ ತೊಯ್ದ ॥ ಪ ॥

ಎಲೆಗಳ ಮೇಲೆ ಹೂಗಳ ಒಳಗೆ ,ಅಮೃತದ ಬಿಂದು
ಕಂಡವು ಅಮೃತದ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ ಇಲ್ಲಿಗೆ ಇದ ತಂದು
ಈಗ ಇಲ್ಲಿಗೆ ಇದ ತಂದು ॥ ೧ ॥

ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು
ಹೊರಟಿತು ಹಕ್ಕಿಗಳ ಹಾಡು
ಗಂದರ್ವರ ಸೀಮೆಯಾಯಿತು ಕಾಡಿನ ನಾಡು
ಕ್ಷಣದೊಳು ಕಾಡಿನ ನಾಡು ॥ ೩ ॥
http://yourlisten.com/channel/content/16986927/Moodala_maneya


೩೦ . ದೋಣಿ ಸಾಗಲಿ ಮುಂದೆ
ರಚನೆ : ಕುವೆಂಪು

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ।।ಪ।।

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷ ಲೋಕವ ವಿರಚಿಸಿ
ನೋಡಿ ಮೂಡಣದ  ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಳುವೆಯಾಚೆಗೆ ಸುಪ್ರಭಾತವ ಬಯಸಿರಿ ।।೧।।

ತೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚು ತಿರ್ಪುವು ಮೂಡುತೈತರೆ ಬಾಲ ಕೋಮಲ ದಿನಮಣಿ
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿರೆ
ಹುದುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿದೆ ।।೨।।

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೊಡವ ನೋಡಿರಿ
ಅದನೆ ಹೊಳುಥ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ದೇವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ , ಇಂದು ಇಂದಿಗೆ , ಇರಲಿ ನಾಳೆಯು ನಾಳೆಗೆ ।।೩।।

http://yourlisten.com/channel/content/16986928/DoniSaagali_

೨೪ . ಸುಂದರ ದಿನ ಸುಂದರ ಇನ
ರಚನೆ : ಕುವೆಂಪು

ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ
ಎಳೆ ಬಿಸಿಳೊಳು ತಿಳಿ ಗೊಳದೊಳು  ಜಲದಲೆಗಳು ನಲಿ  ನಲಿಯಲು
ನೋಡು ಬಾ ಕೂಡು ಬಾ  , ಬೇಗ ಬಾ ಬಾ ಬಾ ॥ ಪ ॥

ತಣ್ಣೆಲರಲಿ ಹೂಗಳ ಬಳಿ ಸೊಕ್ಕಿದ ಅಳಿ ನೋಡು ಬಾ
ಹೊಸ ತಳಿರೊಳು ಇಂಗೊರಳೊಲು ಕೋಗಿಲೆಗಳು ಸ್ವರಗಯಲ್ಲೂ
ಹಾಡು ಬಾ , ಕೂಡು ಬಾ ಬೇಗ ಬಾ ಬಾ ಬಾ ॥ ೧ ॥

ಜೊತೆಇಲ್ಲದೆ ನನ್ನೋಲಿದೆದೆ ಕಂಪಿಸುತಿದೆ ಕೂಡು ಬಾ
ಹೊಸ ಹಸುರೆಡೆ ತಿಳಿ ಗೊಳದೆಡೆ ನಾ ನಿನ್ನೆಡೆ ನೀ ನನ್ನೆಡೆ
ಕೂಡು ಬಾ ಹಾಡು ಬಾ , ಬೇಗ ಬಾ , ಬಾ ಬಾ ॥ ೨ ॥


೨೩ . ಬಿದ್ದಿಯಬ್ಬೇ ಮದುಕಿ ಬಿದ್ದೀಯಬ್ಬೆ
ರಚನೆ : ಸಂತ ಶಿಶುನಾಳ ಶರೀಪರು

ಬಿದ್ದಿಯಬ್ಬೇ ಮದುಕಿ ಬಿದ್ದೀಯಬ್ಬೆ
ನೀ ದಿನ ಹೋದಾಕಿ ,ಇರು ಬಾಳ ಜೋಕಿ ॥ ಪ ॥

ಸದ್ಯಕಿದು ಹುಲುಗುರ ಸಂತಿ , ಗದ್ದಲದೊಳಗ್ಯಾಕ ನಿಂತಿ
ಬಿದ್ದು ಇಲ್ಲಿ ಒದ್ದಾಡಿದರ , ಎದ್ದು ಹೇಂಗ  ನೀನು ಹಿಂದಕೆ ಬರತಿ
ಬುದ್ಧಿ ಗೆಡಿ ಮದುಕಿ ನೀನು , ಬಿದ್ದಿಯಬ್ಬೇ ॥ ೧ ॥

ಬುಟ್ಟಿಯಲ್ಲಿ ಪತ್ತಳ ಇತ್ತಿ ಅದನ ಉಟ್ಟ  ಹೊತ್ತಳು ಜೋತಿ
ಕೆಟ್ಟ ಗಂಟಿ  ಚೌಡೆರು ಬಂದು ಉಟ್ಟದನ್ನೇ  ಕದ್ದರು ಜೋಕಿ
ಬುದ್ಧಿಗೇಡಿ ಮದುಕಿ ನೀನು , ಬಿದ್ದಿಯಬ್ಬೇ ॥ ೨ ॥

ಶಿಶುನಾಳ ಧೀಶನ ಮುಂದೆ ಕೊಸರಿ ಕೊಸರಿ ಹೋಗಬೇಡ
ಹಸನವಿಲ್ಲ ಹರೆಯ ಸಂದ ಪಿಸುರು ಪಿಚ್ಚುಗಣ್ಣಿನ ಮುದುಕಿ

ಬುದ್ಧಿಗೇಡಿ ಮದುಕಿ ನೀನು , ಬಿದ್ದಿಯಬ್ಬೇ ॥ ೩ ॥

೨೪ . ಅಳಬೇಡ ತಂಗಿ ಅಳಬೇಡ ,
ರಚನೆ : ಸಂತ ಶಿಶುನಾಳ ಶರೀಪರು 

ಅಳಬೇಡ ತಂಗಿ ಅಳಬೇಡ ,
ನಿನ್ನ ಕಳುಹ ಬಂದವರಿಲ್ಲಿ ಉಳುಹಿಕೊಂಬವರಿಲ್ಲ 

ಕಡಿಕಿಲೆ ಉಡಿಯಕ್ಕಿ ಹಾಕಿದರವ್ವ 
ಒಳ್ಳೆ ದುಡಿಕಿಲ್ಲೇ ಮುಂದಕ್ಕೆ ನೂಕಿದರವ್ವ 
ಮಿಡಿಕ್ಯಾಡಿ ಮದ್ವಯಾದಿ ಮೋಜು ಕಾಣವ್ವ 
ಕುಡುಕ್ಯಾದಿ ಮಾಯಾವಿ ಮರವೇರಿತವ್ವ 

ರಂಗೇಲಿ ಉಟ್ಟಿದಿ ರೇಷ್ಮೆ ತಡಿ ಸೀರಿ 
ಹನ್ಗವ್ವೋ ನಿನ್ ಪರವಿ ಮರೆತ್ತವ್ವೋ ನಾರಿ 
ಮಂಗಳ ಮೂರುತಿ ಶಿಶುನಾಳ ಧೀಶನ 
ಅಂಗಳಕ ನೀ ಹೊರತು ಅದ್ಯವ್ವ ಗೌರಿ


೨೫ . ತೊರೆದು ಹೋಗದಿರು ಜೋಗಿ 
ಅಡಿಗೆರಗಿದ ಈ ಧೀನಳ ಮರೆತು ಸಾಗುವೆ ಏಕೆ ವಿರಾಗಿ 

ಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ಧೀಕ್ಷೆ ಎನಗೆ 
ನಿನ್ನ ವಿರಹದಲೆ ಉರಿದು ಹೋಗಲು ಸಿದ್ಧಳಿರುವ ನನಗೆ ॥ ೧ ॥  

ಹೂಡುವೆ ಗಂಧದ ಚಿತೆಯ , ನಡುವೆ ನಿಲುವೆ ನಾನೇ 
ಉರಿಸೋಕಿಸು ಪ್ರಭುವೇ ಚಿತೆಗೆ ಪ್ರೀತಿಯಿಂದ ನೀನೆ  ॥ ೨ ॥ 

 ಉರಿದು ಉಳಿವೆನು ಬೂದಿಯಲಿ ಲೀಪಿಸಿಕೋ ಅದ ಮೈಗೆ 
ಮೀರಾ ಪ್ರಭು ಗಿರಿಧರನೇ ಜ್ಯೋತಿಯು ಜ್ಯೋತಿಯ ಸೇರಲಿ ಹೀಗೆ ॥ ೩॥


೨೬ .ಭೂಮಿನ್ ತಬ್ಬಿದ್ದ್ ಮೋಡಿದ್ನ್ದಂಗೆ
ರಚನೆ : ಜಿ ಪಿ. ರಾಜರತ್ನಂ 
 ಭೂಮಿನ್ ತಬ್ಬಿದ್ದ್ ಮೋಡಿದ್ನ್ದಂಗೆ
ಬೆಳ್ಳಿ ಬಳ್ದಿದ್ ರೋಡ್ ಇದ್ದಂಗೆ , ಸಾಫಗಳ್ಳ ಥಿಟ್ಟಿಲನ್ದಂಗೆ
ಮಡಿಕೇರಿ ಮೇಲೆ ಮಂಜು  ॥ ೨ ॥

ಮಡ್ಗಿದಲ್ಲೇ ಮಡ್ಗಿದಂಗೆ , ಲಂಗರ್ ಬಿದ್ದಿದ್ ಅಡ್ಗಿದಂಗೆ ,
ಸೀಥಕ್ಕ್ ಸಕ್ತಿ ಉಡ್ಗೊದಂಗೆ , ಅಳ್ಳಾಡಲ್ದು ಮಂಜು
ತಾಯಿ ಮಗೀನ್ ಎತ್ತ್ಕೊಂಡಂಗೆ , ಒಂದಕ್ಕೊಂದು ಅಪ್ಪ್ಕೊಂಡಂಗೆ
ಮಡ್ಕೆರಿನ ಎದೆಗೊತ್ತ್ಕೊಂಡು ಜೂಗಡ್ತಿತ್ತು ಮಂಜು  ॥ ೧ ॥

ಮಲ್ಗಾಕ್ ಸೊಳ್ಳೆ ಪರದೆ ಕಟ್ಟಿ ಹೊದೆಯಕ್  ಕೊಬ್ಬಿದ ದುಪ್ಟಿ ಕೊಟ್ಟಿ
ಪಕ್ಕದಾಗ್ ಗಂಧದ  ಧೂಪ ಹಾಕ್ದಂಗ ಮಡಿಕೇರಿ ಮೇಲ್ ಮಂಜು
ನಡಿಯೋ ದೊಡ್ಡ ದೊಡ್ಡ ಟೇಬಲ್ ನಂಗೆ , ಪಟ್ನ ಸುತ್ತಿದ ಕಾವಲ್ನಂಗೆ
ಅಲ್ಲಲೇನೆ ಅಂಗಂಗೆನೆ ಗಸ್ತಾಕ್ತಿತ್ತು ಮಂಜು ॥ ೨ ॥

ಸೂರ್ಯನ ಕರೆಗ್ ಬಂದ್ ನಿಂತೋರು , ಕೊಡ್ಗಿನೆಲ್ಲ ಪೂವಮ್ಮ್ನೋರು
ತೆಳ್ಳನೆ ಬೆಳ್ಳನೆ ಬಟ್ಟೆನ್ ಹಾಕಿ ಬಂದಂಗಿತ್ತು ಮಂಜು
ಚಿನ್ತನೆದ್ರಿಗೆ ಬಿಸ್ಲಿನ್ ಕೆಂಪು ,ಮಂಜಿನ್ ಬಣ್ಣ ಕಣ್ಣಗೆ ತಂಪು
ಕೊಡಗಿನ ಲಕ್ಷ್ಮಿ ಪೂವಮ್ಮ್ನೋರ್ಗೆ ಅಲಿನ್ಸೋಲ್ದೆ  ಮಂಜು ॥ ೩ ॥

ಅಗ್ಲೆ ಬರಲಿ , ರಾತ್ರಿ ಬರಲಿ, ಬಿಸಳು ನೆಳ್ಳೂ ಏನೇ ಇರ್ಲಿ
ಕಣ್ಮರೆಯಾಗ ತಾವಕೊಡಲ್ದು ಮಡಿಕೇರಿಗೆ ಮಂಜು
ತೈಲ ನೀರಿನ್ ಮ್ಯಾಗಿದಂಗೆ ಪೂವಮ್ಮನ್ ತಂಗಿದಂಗೆ
ಬಿಟ್ಟು ಬಿಡದಂಗೆ ಹಿಡ್ಕೊಂತಿತ್ತು ಮಡ್ಕೆರಿಗೆ ಮಂಜು।।೩।।


೨೨ . ಕಂಡ ಕಂಡ ಕಡೆ
ರಚೆನೆ : ಜೆ ಎಸ್ . ಶಿವರುದ್ರಪ್ಪ

ಕಂಡ ಕಂಡ ಕಡೆ ಸೊಂಡಿಲ ಚಾಚುವ ಆನೆಗೆ ಅಂಕುಶವಿಲ್ಲ
ಕಾಡು ಕುದುರೆಗಳ ಹೂಡಿದ ರಥಕ್ಕೆ ದಾರಿಯ ಹಂಗಿಲ್ಲ

ಇಷ್ಟು ದೀಪಗಳು ಸುತ್ತಲು ಉರಿದು ಕಟ್ಟಲು ತಪ್ಪಿಲ್ಲ
ಎಷ್ಟು ಗುಡಿಸಿದರು ದಿನವು ಮನೆಯನು ಪೊರಕೆಗೆ ಬಿಡುವಿಲ್ಲ
ಕರಡು ಪ್ರತಿಗಳನು ಯಾರು ತಿದ್ದಿದರು ಕುರುಡಿಗೆ ಕೊನೆಯಿಲ್ಲ
ಎಷ್ಟು ಉಜ್ಜಿದರು ಕಾಲ ಬುಡಕ್ಕೆ ಗೆದ್ದಲು ಬಿಡಲಿಲ್ಲ ॥  ೧ ॥

ತಿರುಗು ಚಕ್ರಗಳ ನಿಶ್ಚಲ ಕೇಂದ್ರದಿ ನಿಲ್ಲುವ ಬಲವಿಲ್ಲ
ಮೊರೆಯುವ ಅರೆಯುವ ಬದುಕನ್ನೆದುರಿಸಿ ಗೆಲ್ಲುವ  ಛಲವಿಲ್ಲ
ಪಾಚಿಗಟ್ಟಿರುವ ಕುರುಡು ದಾರಿಯಲ್ಲಿ ಜಾರಿಕೆ ತಪಿಲ್ಲ
ದಾರಿ ಉದ್ದಕ್ಕೂ ಸೋಲಿನ ಹಾಡಿಗೆ ಎಂದು ಮುಗಿವಿಲ್ಲ ॥ ೨ ॥

೨೩. ಕಾಣದ ಕಡಲಿಗೆ ಹಂಬಲಿಸಿದೆ ಮನ
ರಚೆನೆ : ಜೆ ಎಸ್ . ಶಿವರುದ್ರಪ್ಪ

ಕಾಣದ ಕಡಲಿಗೆ ಹಂಬಲಿಸಿದೆ ಮನ 
ಕಾಣಾಬಲ್ಲೆನೆ  ಒಂದು ದಿನ ಕಡಲನು ಕೂಡಬಲ್ಲೇನೆ ಒಂದು ದಿನ ।। ಪ ।।

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು , ಎನ್ತಿರುವುದು ಅದು ,
ನೋಡಬಲ್ಲನೆ ಒಂದು ದಿನ ,ಕಡಲನು ಕೂದಬಲ್ಲೇನೆ ಒಂದು ದಿನ  ।। ೧।।

ಸಾವಿರ ಹೊಳೆಗಳು ತುಂಬಿ ಹರಿದರು,ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಮ್ಭುಧಿ ತಾನಂತೆ  
ಮುನ್ನೀರಂತೆ , ಅಪಾರವಂತೆ
ಕಾಣ ಬಲ್ಲನೆ ಒಂದು ದಿನ ಅದರಲಿ ಕರಗಲಾರೆನೆ ಒಂದು ದಿನ ।। ೨ ।।

ಜಟಿಲ ಕಾನನದ ಕುಟಿಲ ಪಥಗಳಲಿ  ಹರಿವ  ತೊರೆಯು ನಾನು
ಎಂದಿಗಾದರೂ ಕಾಣದ ಕಡಲನು ಸೇರಬಲ್ಲೆನೆನು 
ಸೇರಬಹುದೇ ನಾನು ಕಡಲ ನೀಲಿಯೊಳು ಕರಗಬಹುದೇ ನಾನು।।೩ ।।

೨೪.  ಹಿಂದೆ ಹೀಗೆ ಚಿಮ್ಮುತಿತ್ತು  ಕಣ್ಣ  ತುಂಬಾ ಪ್ರೀತಿ
ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ  ।। ಪ ।।

ಜೇನು ಸುರಿಯುತಿತ್ತು ನಿನ್ನ  ಧನಿಯ ಧಾರೆಯಲ್ಲಿ
ಕುದಿಯುತಿದೆ ಈಗ ವಿಷ ಮಾತು ಮಾತಿನಲ್ಲಿ  ।। ೧।।

ಒಂದು ಸಣ್ಣ ಮಾತಿನಿರಿತ ತಾಳದಯ್ತೆ ಪ್ರೇಮ
ಜೇವವೆರಡು ಕೂಡಿ ಉಂಡ ಸ್ನೇಹವಾಯ್ತೆ ಹೋಮ ।। ೨ ।।

ಹಮ್ಮು  ಬೆಳೆದು ನಮ್ಮ ಬಾಳು  ಆಯತು ಎರಡು ಹೋಳು
ಕೂಡಿಕೊಳಲಿ ಮತ್ತೆ ಪ್ರೀತಿ ತಬ್ಬಿಕೊಳಲಿ ತೋಳು  ।।೩।।

೨೫. ನಿರಾಶೆ ಯಾಕೆ ಗೆಳೆಯ
ರಚನೆ : ಎಂ ಆರ್ ಕಮಲ

ನಿರಾಶೆ ಏಕೆ ಗೆಳೆಯ ,ತೊರೆಯದಿರು ಭರವಸೆಯ ।।ಪ॥

ಹೂವಿನಂತ ಹೃದಯಗಳು  ಕಲ್ಲಾದರೇನು
ಬಂಡೆಗಳ ನಡುವೆಯೂ ಹೂವರಳದೆನು ।।೧ ।।

ಪಡುವಣದ ದಡದಲ್ಲಿ ಮುಳುಗಿದರು ಸೂರ್ಯ
ಮುಂಜಾನೆ ಎಂದಿನಂತೆ ಮೊಳಗುವನು ತೂರ್ಯ ।। ೨।।

ಬೋಳು ಮರ ಹಾಡಿದರು ಹೇಮಂತ ಗಾನ
ಹೊಸ ಚಿಗುರು ಆಸೆಯಲಿ ಕರೆಯದೆ ವಸಂತನ ।।೩।।

೨೬. ಮಬ್ಬು ಕವಿದರೇನು ನಿನ್ನ
ರಚನೆ : ಜಿ . ಎಸ . ಶಿವರುದ್ರಪ್ಪ

ಮಬ್ಬು ಕವಿದರೇನು ನಿನ್ನ ಹಬ್ಬಿದಿರುಳ ದಾರಿಗೆ
ನಡೆ ಮುಂದಕೆ ದೈರ್ಯದಿಂದ , ಅರುಣೋದಯ ತೀರಕೆ ।।ಪ।

ಹಳೆ ನೆನಪುಗಳುದರಲಿ ಬಿಡು ಬೀಸುವ ಚಳಿ ಗಾಳಿಗೆ
ತರಗೆಲೆಗಳ ಚಿತೆ ಉರಿಯಲಿ ಚೈತ್ರೋದಯ ಜ್ವಾಲೆಗೆ ।।೧।।

ಹೊಸ ಭರವಸೆ ಚಿಗುರುತಲಿವೆ ಎಲೆಯುದುರಿದ ಕೊಂಬೆಗೆ
ಅರಳಿ ನಗುವ ಹೂಗಳಲ್ಲಿ ಪುಟಿಯುತಲಿವೆ ನಂಬಿಕೆ  ।।೨ ।।

ಹಗಲಿರುಳಿನ ಕುದುರೆಗಳನು ಹೂಡಿದ  ರಥ ಸಾಗಿದೆ
ಯುಗ ಯುಗಗಳ ಹಾದಿಯಲ್ಲಿ ಋತು ಚಕ್ರಗಳುರುಳಿವೆ ।।೩।।