ಭಾನುವಾರ, ಮೇ 26, 2013

Kannada Bhakthi Chitrageethegalu

೧. ಗಣಪತಿಯೇ ಬುದ್ಧಿದಾತನೆ , ಸಿದ್ಧಿನಾತನೆ
ಸಲಹು ಗಣೇಶ ನೆ ವಿದ್ಯಾಧಿಪನೆ 

ನೀ ನಮ್ಮ ಗೆಲುವಾಗಿ ಬಾ ಗಜಮುಖ ನೆ || ೨॥ 
ಗುರುಕುಲಕೆ ವರವಾಗಿ ಗುರಿತೋರೋ ಗುರುವಾಗಿ 
ಪೋರೆನೀನು ಎಂದೆಂದೂ ಕರುಣಾಳು ಬಾ ಬಂಧು 

ಬಾಳಲ್ಲಿ ಒಂದಾಗಿ ಬಾ  ನಮ್ಮ ಜೊತೆಯಾಗಿ 
ಕ್ಷಣವು ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ ॥  ೨ ॥ 
ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ  ॥ ೧ ॥ 

ನಿಧಿಯಾಗಿ , ವಿಧಿಯಾಗಿ ಸುಧೆ ತುಂಬು ಒಲವಾಗಿ  
ಹಿರಿಯಾದ ಸಿರೀ ನೀನು ಈ ಬಾಳ ಸವಿಜೇನು || ೨ ॥ 
ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ  ॥ ೨ ॥ 

೨. ಪೂಜಿಸಲೆಂದೆ ಹೂಗಳ ತಂದೆ ದರುಶನ ಕೋರಿ
ನಾ ನಿಂದೆ ,ತೆರೆಯೋ ಬಾಗಿಲನು ರಾಮ

ಮೋಡದ ಮೇಲೆ ಚಿನ್ನದ ನೀರು ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರಥಿ ಉಷೆ ತಂದಿಹಳು , ತಾಮಸವೆಕಿನ್ನು ಸ್ವಾಮಿ
ತೆರೆಯೋ ಬಾಗಿಲನು, ರಾಮ ॥ ೧॥

ಒಲಿದರು ಚೆನ್ನ ಮುನಿದರು ಚೆನ್ನ , ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳದರು ಚೆನ್ನ ಸ್ವೀಕರಿಸು ನನ್ನ ಸ್ವಾಮೀ
ತೆರೆಯೋ ಬಾಗಿಲನು, ರಾಮ ॥ ೨ ॥
http://yourlisten.com/channel/content/16981944/Poojisalande

೩. ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ನೀನೊಲಿದ ಮನೆ ಮನೆಮನೆಯು ಲಕ್ಹ್ಮೀ ನಿವಾಸ ॥

ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲ
ಅಲಮೇಲು ಮಂಗ ಮನ್ನೋಲಾಸ ಲೋಲ ॥ ೧ ॥

ಪಂಕಜ ಲೋಚನ ಪತಿತೋದ್ಧಾರ ಸಂಕಟ ಹರಣ  ಸುಧಾರಸ ಧಾರಾ
ಶಂಕ ಚಕ್ರಧರ ಶ್ರೀಕರ ಸುಂದರ ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರಾ
ಶಿರಸಾ ನಮಾಮಿ ಮನಸಾ ಸ್ಮರಾಮಿ ॥ ೨ ॥
http://yourlisten.com/channel/content/16980711/Tirupati_Girivasa


೪. ಕಮಲದ ಮೊಗದೊಳೆ ಕಮಲದ  ಕಣ್ಣೋಳೆ
ಕಮಲವ ಕೈಯಲ್ಲಿ  ಹಿಡಿದೋಳೆ ,
ಕಮಲನಾಭಾನ ಹೃದಯಿ ಕಮಲದಲಿ ನಿಂತ್ಹೋಳೆ ,
ಕಮಲಿ ನೀ ಕರ ಮುಗಿವೆ ಬಾಮ್ಮ
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ  ॥

ಕಾವೇರಿ ನೀರ ಅಭಿಷೆಕಕಾಗಿ ನಿನಗಾಗಿ ನಾ ತಂದೆನಮ್ಮ
ಕಂಪನ್ನು ಚೆಲ್ಲೊ ಸುಮರಾಶಿ ಇಂದ ಹೂ ಮಾಲೆ ಕಟ್ಟಿರುವೆನಮ್ಮ
ಬಂಗಾರ ಕಾಲ್ಗೆಜ್ಜೆ ನಾದ ನಮ್ಮ ಮನೆಯೇಲ್ಲವ ತುಂಬುವಂತೆ
ನಲಿಯುತ ಕುಣಿಯುತ , ಒಲಿದು ಬಾ  ನಮ್ಮ ಮನೆಗೆ ಬಾ ॥ ೧ ॥

ಶ್ರೀದೇವಿ ಬಾಮ್ಮ ಧನಲಕ್ಸ್ಮಿ ಬಾಮ್ಮ ಮನೆಯನ್ನು ಬೆಳಕಾಗಿ ಮಾಡು
ದಯೆ ತೋರಿ ಬಂದು ಮನದಲ್ಲಿ ನಿಂತು ಸಂತೋಷ ಸೌಭಾಗ್ಯ ನೀಡು
ಸ್ಥಿರವಾಗಿ ಬಂದಿಲ್ಲಿ ನೆಲೆಸು ತಾಯೆ ವರಮಹಲಕ್ಸ್ಮಿಯೆ ಹರಸು
ಕರವನ್ನು  ಮುಗಿಯುವೆ ಆರತಿ ಈಗ ಬೆಳಗುವೆ || ೨ ॥



೩. ಭಾರತ ಭೂಶಿರ  ಮಂದಿರ ಸುಂದರಿ , ಭುವನ ಮನೋಹರಿ , ಕನ್ಯಾಕುಮಾರಿ ॥

ಸಾಮಗಾನ ಪ್ರಿಯ ಸಾಂಬ ರೂಪಿಣಿ , ಪಾಲಗಡಲ ಸ್ವರ ಪಂಚಮ ಧಾರಿಣಿ  ೨
ಸಾಕಾರ ಷಡ್ಜ್ಯದ ಶರಧಿ ತರಂಗಿಣಿ ,ಸಾಗರ ಸಂಗಮ ಸರಸ ವಿಹಾರಿಣಿ ॥ ೧ ॥

ಶಿವ ತಾಂಡವದ ಢಮರು ನಿನಾದ ,ನಾದ ಬ್ರಹ್ಮ ನ ಓಂಕಾರ ನಾದ ,
ನಾದದೆ  ಲೀನ ಆಗಮ ವೇದ, ನಾದ ವೇದ ಶಿವೆ , ನಿನ್ನ ವಿನೋದ  ॥ ೨ ॥

ಸಂಗೀತ ಸುಧೆಯ ಚೈತನ್ಯ ಧಾರೆ , ಕಣ ಕಣ ನೀನೆ ಕರುಣ ಪೂರೇ
ನವ ಭಾವ ನವ ಜೀವ ನೀ ತುಂಬಿ ,ಬಾರೆ  ನವ ರಸ ವಾಹಿನಿ ನೀ ದಯೆ ತೊರೆ ॥ ೩ ॥




೮.  ಮಹಾಲಕ್ಷ್ಮಿ ಮನೆಗೆ ಬಾರಮ್ಮ ,ನಮ್ಮ ಪ್ರೆಮದಿಂದೊಮ್ಮೆ ನೋಡಮ್ಮ
  ಶುಕ್ರವಾರವೂ ಪೂಜಾ ಸಮಯವೂ  , ನೀ  ಬರದೆ  ಸುಖ ಶಾಂತಿ ಕಾಣೆವು

ನಿನ್ನ ಕಂಗಳ ಚಂದ್ರಿಕೆಯಲ್ಲಿ ನಲಿಯುವ ಭಾಗ್ಯವ ನೀ ಕೊಡಲರೆಯ
ನಿನ್ನ ಕಾಲ್ಗಳ,ಗೆಜ್ಜೆಯ ನಾದಕೆ ಕುಣಿಯುವ ಯೋಗವ ನೀ ತರಲಾರೆಯ
ಈ ಮನೆಯಲ್ಲಿ ಶಾಶ್ವತವಾಗಿ ನೆಲೆಸಿ ನಮ್ಮನ್ನು ಹರಸಮ್ಮ ॥ ೧ ॥

ನಿನ್ನ ಸ್ಮರಣೆಯೇ ಮನಕಾನ್ದವು , ನಿನ್ನ ಕರುಣೆಯೇ ಬಾಳಿನ ದೀಪವು
ನೀನಿರುವಾ ಮನೆ ಭೂ ವೈಕುಂಟವು , ನೀನೋಲಿದಾಗಲೇ ಸಿರಿ ಸೌಭಾಗ್ಯವು
ನಮ್ಬಿಹೆ ನಿನ್ನೆ ಕರವನ್ನು ಹಿಡಿದು ,ಅಮ್ಮ ನನ್ನ ನಡೆಸಮ್ಮಾ ॥ ೨ ॥




2 ಕಾಮೆಂಟ್‌ಗಳು: