ಸೋಮವಾರ, ಅಕ್ಟೋಬರ್ 24, 2022

ಎಲ್ಲೆಲ್ಲೂ ನೀನೆ   !!!


ಮನೆಯ ಕಿಟಕಿ ಬಾಗಿಲು ತೆರೆಯುವಂತಿಲ್ಲ 

ನೀನು ಒಳಸೇರುವೆ ।।

ಕೈ ಕಾಲು ಮುಖ ತೊಳೆಯುವಂತಿಲ್ಲ 

ಮನೆಯೆಲ್ಲಾ ತಿರುಗುವೆ ।।


ನಿನಗೆ ಬೇಕೆಂದ ಕಡೆ ಹೋಗುವೆ 

ಕಂಡದೆಲ್ಲಾ ತಿನ್ನುವೆ ।।

ಎಲ್ಲೆಂದರಲ್ಲಿ ಕೂರುವೆ , ಎಲ್ಲೆಂದರಲ್ಲಿ ಮಲಗುವೆ 

ಕರ್ಕಷವಾಗಿ ಕೂಗುವೆ ।।


ನಿನ್ನ ಆಯಸ್ಸೇ ಕೆಲವು ದಿನ , ಆದರೆ 

ನಿನ್ನ ಆರ್ಭಟ ಮತ್ತದರ ಪರಿಣಾಮಗಳು 

ಹಲವು ದಿನ ।।


ನೀನು ಹೋದರು , ನಾನು ಖುಷಿಪಡುವಂತಿಲ್ಲ 

ಏಕೆಂದರೆ , ಹೋಗುವ ಮುನ್ನ ನೀ ಖಚಿತವಾಗಿ 

ಸೃಷ್ಟಿಸಿರುವೆ ನಿನ್ನಂತಹ  ಹಲವರನ್ನ ।।


ಹೀಗಿರುವಗ್ಗ ನಾ ಏನು ಮಾಡಲಿ 

ಹೇಗೆ ನಿನ್ನಿಂದ ನಾನು ಮುಕ್ತಿ ಹೊಂದಲಿ ।।


ನಿನ್ನ ಕಾಟಕ್ಕೆ ಕೊನೆಯೆಂದೆಣಿಸಿ 

ಸೋತಿಹೆ ನಾನು  ಇಂದು|

ನಿನ್ನಿಂದ ನಮ್ಮನೆಲ್ಲ ಕಾಪಾಡುವ 

ಆಪದ್ಭಾಂಧವ   , ಅನಾಥರಕ್ಷಕ 

ಎಲ್ಲಿರುವನೋ , ಬರುವನೋ ಇನ್ನೆಂದು !!!



(ಈ ವಿಡಂಬ ಕಾವ್ಯದ ಮಾರ್ಮಿಕತೆಯನ್ನು ಅರಿತವರೇ ಕೋವಿದರು)


ಸ್ವರ್ಣ ಕಿರಣ್ 

ಮನೆ ಸಂಖ್ಯೆ ೪೨೧.