ಶುಕ್ರವಾರ, ನವೆಂಬರ್ 3, 2017

NaughtyMonkey

ದೊಡ್ಡ ಕಾಡಿನ ಶಾಲೆಗೆ ಉದ್ದ ಕತ್ತಿನ ಜಿರಾಫೆ ಟೀಚರ್ ! ಆನೆ , ಸಿಂಹ , ಹುಲಿ, ಕರಡಿ, ಮಂಗ , ನರಿ, ತೋಳ ,ಜಿಂಕೆ ಹೀಗೆ ಎಲ್ಲ ಹತ್ತು ಹಲವು ಪ್ರಾಣಿ- ಪಕ್ಷಿಗಳ ಮರಿಗಳು ಒಟ್ಟಿಗೆ ಒಂದೇ ಶಾಲೆಯಲ್ಲಿ ಕಲಿಯುತ್ತಿದವು. ಈಗ ಹೇಳುವ ಕಥೆ ಶಾಲೆಯಲ್ಲಿ ಕಲಿಯುತಿದ್ದ ಮಹಾ ಗರ್ವಿ ಮಂಗನದು .  ಇತರ ಪ್ರಾಣಿಗಳನ್ನು ಸದಾ ಕೆದುಕುವುದು , ಉಪದ್ರ ಮಾಡುವುದು ಇದೆ ಅದರ ದಿನ ನಿತ್ಯದ ಕೆಲಸ . ತಾನು ಎಲ್ಲರಿಗಿಂತ ಮಿಗಿಲಿನವನು ಎಂಬ ಭ್ರಮೆ ಅದಕ್ಕೆ. ಮಂಗನ

ಮಳೆಗಾಲದ ದಿನ . ಕಾಡಿನಲ್ಲಿ ಬಿಡದ ಹಾಗೆ ಮಳೆ ಸುರಿಯುತಿತ್ತು .ಜಂಬೊ  ಆನೆ , ಸ್ಟೈಲಿ ಸಿಂಹ , ಬೆಳಗಿನ ತಿಂಡಿ ಮುಗಿಸಿ , ಕೊಡೆ ಹಿಡಿದು ಶಾಲೆಗೇ ತೆರಳುತ್ತಿದ್ದವು .  ಹಾಗೆ ಹಾದಿ ನಡೆಯುತ್ತಿದ್ದಾಗ , ಯಾರೋ ದೂರದಲ್ಲಿ ಸಹಾಯಕ್ಕಾಗಿ ಕೂಗುತ್ತಿರುವುದು ಕೇಳಿತು. ಆನೆ ಸಿಂಹ ಗಳೆರಡೂ ಪರಸ್ಪರ ಒಬ್ಬರನೊಬ್ಬ ಮುಖ ನೋಡಿಕೊಂಡು , ಯಾರು ಸಹಾಯ ಅಪೇಕ್ಷಿಸುತ್ತಿದರೆ ಎಂದು ನೋಡಬೇಕೆಂದು , ಧ್ವನಿಯನ್ನೇ ಅರಸಿ ಅದು ಬರುತ್ತಿದ್ದ ದಿಕ್ಕಿನ ಕಡೆ ನಡೆದವು .

ಸ್ವಲ್ಪ ದೂರ ಹೋದ ಮೇಲೆ ಎದುರಿಗೆ ಇದ್ದ ಕೆಸರು ಗುಂಡಿಯಲ್ಲಿ ಯಾವದೋ ಮಂಗ ಬಿದ್ದಿರುವುದು ಕಂಡಿತು . ಹತ್ತಿರ ಹೋಗಿ ನೋಡಲು ಅರೆ ! ಇದು ನಮ್ಮ ಸಹಪಾಠಿ ಮೋಟು . ಮೋಟು ಇದೇನಾಯಿತು ನಿನಗೆ ಎಂದು ಜಂಬೊ ಕನಿಕರದಿಂದ ಕೇಳಲು . ಮರದಿಂದ ಮರಕ್ಕೆ ನೆಗೆಯುವ ವೇಳೆ ಆಯಾ ತಪ್ಪಿ ಕೆಸರು ಗುಂಡಿಯಲ್ಲಿ ಬಿದ್ದೆ . ಗುಂಡಿ ತುಂಬಾ ಆಳವಿದ್ದು ಮೇಲೆ ಬರಲು ಸಾಧ್ಯವಾಗುತ್ತಿಲ್ಲ. ನಾನು ಸತ್ತೇ ಎಂದು ಜೋರಾಗಿ ಅಳಲು ಶುರುಮಾಡಿತು .

ಯಾವಾಗಲೂ ಎಲ್ಲರನ್ನು ಹಂಗಿಸಿ , ರೇಗಿಸುತ್ತಿದ್ದ ಮೋಟು , ಇಂದು , ತನ್ನನ್ನು ಹೇಗೆದಾರು ಕೆಸರಿನಿಂದ ಹೊರಗೆ ತೆಗೆಯುವಂತೆ ಸ್ಟೈಲಿ ಮತ್ತು ಜಂಬೊವನ್ನು ಅಂಗಲಾಚಿತು. ಅದಕ್ಕೆ ಸಹಾಯ ಮಾಡ್ಬೇಕೆಂದು ಮನಸು ಇದ್ದರೂ  , ಹೇಗೆ ಮೋಟುವನ್ನು ಮೇಲೆ ಎಳೆಯುವುದು , ಎಂದು ತಿಳಿಯದು . ಅಷ್ಟು ದೊಡ್ಡ ದೇಹ ಇದ್ದರು , ಜಂಬೊ ಗೆ ಕೆಸರಿನಲ್ಲಿ ಇಳಿಯಲು ಭಯ, ಎಲ್ಲಿ ಕೆಸರಲ್ಲಿ ನಾನು ಹೂತುಹೋಗುವೆನೋ ಎಂದು . ಇನ್ನು ಜಂಬೊ ಧೈರ್ಯ ಮಾಡದೆ ಸಿಂಹ ಕ್ಕೆ ಏನು ಮಾಡಲು ತೋಚದು. ಆನೆ ಸಿಂಹ ಗಳೆರೆಡು ಬೆಪ್ಪಾಗಿ ಮೋಟುವನ್ನು ನೋಡುತ್ತಾ ನಿಂತವು

ಅಷ್ಟರಲ್ಲಿ ತನ್ನ ಪಾಡಿಗೆ ಸಿಳ್ಳೆ ಹೊಡೆಯುತ್ತ , ವಿಕ್ಕಿ ನರಿ ಶಾಲೆಗೇ ಅದೇ ದಾರಿಯಲ್ಲಿ ಸಾಗುತಿತ್ತು . ಆನೆ ,ಸಿಂಹ ಬೆಪ್ಪಾಗಿ ಕೆಸರಿನ ಗುಂಡಿಯ ಬಳಿ ನಿಂತಿರುವುದನ್ನು , ತನ್ನ ಕೊಡೆಯ ಅಂಚಿನಿಂದ ನೋಡಿದ ವಿಕ್ಕಿ, ಏನೋ ತೊಂದರೆ ಆಗಿರಬಹುದೆಂದು ಎಣಿಸಿ , ಅವೆರಡರ ಬಳಿಗೆ ಓಡಿತು . ಅಷ್ಟರಲ್ಲಿ ಮೋಟು ಮಂಗ ನ ಮುಕ್ಕಾಲು ಶರೀರ ಕೆಸರಿನಲ್ಲಿ ಸ್ವಲ್ಪ ಸ್ವಲ್ಪವೇ ಕುಸಿಯುತಿತ್ತು . ಇದನ್ನು ಕಂಡ ನರಿ ತಕ್ಷಣ , ಸುತ್ತ ಕಣ್ಣಾಡಿಸಿತು . ಅಲ್ಲೇ ಹತ್ತಿರದಲ್ಲೇ ಆಲದ ಮರವೊಂದಿತ್ತು . ತನ್ನ ಚಾಣಾಕ್ಷ ಬುದ್ದಿಯನ್ನು, ಚುರುಕುಗೊಳಿಸಿ , ಅದರ ಬೇರೆಗಳನ್ನು ಕತ್ತರಿಸಿ , ಅದರಿಂದ ಹಗ್ಗ ಹೊಸೆದು , ಮೋಟು ವನ್ನು ಹೊರಗೆ ತೆಗೆಯಬಹುದೆಂದು ಯೋಚಿಸಿತು .

ನರಿಯ ಸಮಯೋಚಿತ ಉಪಾಯಕ್ಕೆ ತಲೆದೂಗಿದ , ಸಿಂಹ ತನ್ನ ಚೂಪಾದ ಹಲ್ಲಿನಿಂದ, ಮರದ ಬೇರುಗಳನ್ನು ಕತ್ತರಿಸಿತು. ನರಿ ಅದನ್ನು ಹಗ್ಗದ ಹಾಗೆ ಹೊಸೆದು , ಒಂದು ಕೊನೆಯನ್ನು ಮೋಟುವಿನ ಕಡೆಗೆ ಎಸೆದು, ಇನ್ನೊಂದನ್ನು ಜಂಬೊವಿನ ಕಾಲಿಗೆ ಬಿಗಿಯಿತು. ಜಂಬೊ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮೋಟುವನ್ನು ಎಳೆದು ಕೆಸರಿನಿಂದ ಹೊರಗೆ ಹಾಕಿತು .

ಬದುಕಿದೆಯಾ ಜೀವ ಎಂದು . ಮಂಗಾ ಪಿಳಿ ಪಿಳಿ ಕಣ್ಣು ಬಿಟ್ಟಿತ್ತು. ತನ್ನನ್ನು ಕಾಪಾಡಿದ , ಸಿಂಹ, ಆನೆ ಮತ್ತು ನರಿಗಳಿಗೆ , ಧನ್ಯವಾದ ಹೇಳಿತು .ತಾನೇ ಎಲ್ಲರಿಗಿಂತ ಮಿಗಿಲು ಎಂಬ ಅಹಂಕಾರ ಇಳಿದು, ಮೋಟು ಮಂಗಾ ಕುಗ್ಗಿದ.

ಸೋಮವಾರ, ಅಕ್ಟೋಬರ್ 9, 2017

Pebbe

ಹಿಮಕರಡಿ (ಪೆಬ್ಬೆ)

ಒಂದು ದಿನ ಹಿಮಕರಡಿ ಮರಿಯೊಂದು ತನ್ನ ಮನೆಯ ಮುಂದೆ ಸಪ್ಪೆ ಮುಖ ಮಾಡಿಕೊಂಡು ಕುಳಿತಿತ್ತು . ತನ್ನ ಅಣ್ಣ ಅಕ್ಕಂದಿರು ಎಲ್ಲ ಶಾಲೆಗೆ ತೆರಳಿದ್ದರು.  ಅಮ್ಮ ಮನೆಯಲ್ಲೇ ಇದ್ದರು , ಅಡುಗೆ ಮನೆಯಲ್ಲಿ ಅವಳಿಗೆ ಉಸಿರಾಡಲು ಪುರುಸೊತ್ತು ಇಲ್ಲದಷ್ಟು ಕೆಲಸ. ಆಟವಾಡಲು ಯಾರಾದರೂ ಸಿಗಬಹುದೇ ಎಂದು ದಾರಿ ನೋಡುತ್ತಾ ಕುಳಿತಿದ್ದ ಪೆಬ್ಬೆ. ಅಷ್ಟರಲ್ಲಿ ಅವನ ಅಮ್ಮ ಕರೆದದ್ದು ಕೇಳಿ , ಆಟವಾಡಲು ಕರೆಯುತ್ತಿದಾಳೆ ಎಂದು ಖುಷಿಯಲ್ಲಿ ಒಳಗೆ ಓಡಿತು .

ಸಂಜೆ ತಿಂಡಿ ಗೆ ಪಾಯಸ ಮಾಡುವಾದಾಗಿ ಯೋಚಿಸ್ಸಿದ್ದ ತಾಯಿ , ಮನೆಯಲ್ಲಿ ಸಕ್ಕರೆ ಖಾಲಿ ಯಾಗಿರಿವುದನ್ನು ನೋಡಿ , ಅದನ್ನು ತರಲು ಪೆಬ್ಬೆಯನ್ನು ಕರೆದಿದ್ದಳು . "ಪೆಬ್ಬೆ ಅಂಗಡಿ ಗೆ ಹೋಗಿ ಕೆಜಿ ಸಕ್ಕರೆ ತಾ, ನಿನ್ನ ಅಣ್ಣ ಅಕ್ಕ ಶಾಲೆ ಇಂದ ಬರುವು ವೇಳೆಗೆ ಪಾಯಸ ಮಾಡುವೆ , ಎಲ್ಲರು ತಿನ್ನುವ" ಎಂದು ಅದರ ಕೈಗೆ ಚೀಲ ಮತ್ತು ಹಣವನ್ನು ನೀಡಿದಳು . ಆಟವಾಡಲು ಕರೆಯುತ್ತಿದಾಳೆ ಎಂದು ನೆನೆಸಿದ ಪೆಬ್ಬೆಗೆ ತುಸು ನಿರಾಸೆ ಯಾದರು , ಅಂಗಡಿಗೆ ಹೋಗುವ ಕೆಲಸ ಮನೆಯ ಮುಂದೆ ದಾರಿ ಕಾಯುವುದಕ್ಕಿಂತ ಲೇಸು ಎನ್ನಿಸಿ , ಚೀಲ ಹಿಡಿದು ಅಂಗಡಿಯ ಕಡೆ ಹೊರಟಿತು .

ಹಿಮದಿಂದ ಆವರಿಸಿದ ಬೆಟ್ಟ ಗುಡ್ಡಗಳ ಹತ್ತಿ ಇಳಿಯುತ್ತ  ಸಾಗಿದ್ದ ಪೆಬ್ಬೆ ಇದ್ದಕ್ಕಿದ್ದ ಹಾಗೆ ಏನೆನ್ನೋ ನೆನಸಿಕೊಂಡು ಹಾಗೆ  ಹಿಂದೆ ತಿರುಗಿ ಅಲ್ಲೇ ಇದ್ದ ಹಿಮ ಸರೋವರವನ್ನು ನೋಡಿ ,ಅದರಲ್ಲಿ ಇರುವು ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ತಿನ್ನುವ , ನೀರಲ್ಲಿ ಆಟವಾಡುವ ಆಸೆಯಿಂದ ಕಿರುನಗೆ ಬೀರುತ್ತಾ ಅದರ ಕಡೆಗೆ ಹೆಜ್ಜೆ ಹಾಕಿತು . ಇನ್ನು ಸಣ್ಣವನಾಗಿದ್ದ ಪೆಬ್ಬೆಗೆ ಗೆ ಮೀನು ಹಿಡಿಯುವುದು ಅಷ್ಟು ಸರಿಯಾಗಿ ಬರುತ್ತಿರಲಿಲ್ಲ . ಅಲ್ಲದೆ ಸರೋವರದಲ್ಲಿ ಇರಬಹುದಾದ ದೊಡ್ಡ ಮೀನುಗಳಿಂದ ಪೆಬ್ಬೆ ಗೆ ಅಪಾಯವಾಗಬಹುದು ಎಂದು ಅದರ ಅಪ್ಪ ಅಮ್ಮ ಅದಕ್ಕೆ ಸರೋವರದಲ್ಲಿ ಮೀನು ಹಿಡಿಯಲು ಬಿಟ್ಟಿರಲಿಲ್ಲ. ಆದರೆ ಈಗ ಯಾರು ತಡೆಯವರು ಇಲ್ಲದ ಕಾರಣ , ಪೆಬ್ಬೆ ಸರೋವರದ ಕಡೆಗೆ ಹೋಗುವು ಮೀನು ಹಿಡಿಯುವ ಧೈರ್ಯ ಮಾಡಿದ್ದ

ತನ್ನ ಮನಸಿಗೆ ತೃಪ್ತಿ ಆಗುವಷ್ಟು ಸಮಯ ಪೆಬ್ಬೆ ನೀರಿನಲ್ಲಿ ಆಟವಾಡಿತು . ಕೊರೆಯುವ ಹಿಮ ಸರೋವರದಲ್ಲಿ ಮಿಂದೆದ್ದು ಖುಷಿ ಪಟ್ಟಿತ್ತು  . ನೀರಿನ ಆಳದಲ್ಲಿ ಈಜಿ ಕಂಡ ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ಗುಳುಂ ಎನಿಸಿತು . ತನ್ನ ಸಾಮರ್ಥ್ಯಕ್ಕೆ ತಾನೇ ಗರ್ವ ಪಡುತಾ, ಅಪ್ಪ ಅಮ್ಮ ಗೆ ಬುದ್ದಿ ಇಲ್ಲ , ನಾನು ಒಳ್ಳೆಯ ಬೇಟೆಗಾರ, ಈಜುಗಾರ, ಇಂದು ಮನೆಗೆ ಹೋದ ಮೇಲೆ ಎಲ್ಲರಿಗು ತನ್ನ ಆಟಗಳ ವರ್ಣನೆ ಮಾಡುವೆ ಎಂದು ಯೋಚಿಸಿಕೊಂಡು ನೀರಿನಲ್ಲಿ ಮುಳುಗೇಳುತ್ತಿತ್ತು . ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ ಪೆಬ್ಬೆ , ದೊಡ್ಡ ಮೀನೊಂದು ತನ್ನ ಬಳಿ ಬರುವುದು ಕಾಣಲೇ ಇಲ್ಲ . ಇನ್ನೇನು ಆ ದೊಡ್ಡ ಮೀನು ಇದರ ಕಾಲಿಗೆ ಬಾಯಿ ಹಾಕುವಷ್ಟರಲ್ಲಿ , ಪೆಬ್ಬೆ ಎಚ್ಚೆತ್ತು ಮೇಲಕ್ಕೆ ಈಜಿತು . ಆದರೆ ಬಿಡದ ದೊಡ್ಡ ಮೀನು ಇದನ್ನು ಹಿಂಬಾಲಿಸಿ ತಿನಲ್ಲೂ ಯತ್ನಿಸ್ತು. ಆದ್ರೆ ಪೆಬ್ಬೆ ಅದೃಷ್ಟವಶಾತ್ ಹೇಗೋ ತಪ್ಪಿಸಿಕೊಂಡು ಜೀವಕ್ಕೆ ಜೀವ ಬಿಡುತ್ತ ಸರೋವರದಿಂದ ಮೇಲೆ ಓಡಿತು .

ಅಪ್ಪ ಅಮ್ಮ ನ ಮಾತನ್ನು ಕೇಳದೆ ವ್ಯರ್ಥ ಸಾಹಸಕ್ಕೆ ಹೊರಟಿದ್ದು ದೊಡ್ಡ ತಪ್ಪೆಂದು ಅರಿವಾಗಿ , ಇದು ಯಾವುದನ್ನು ಮನೆಯಲ್ಲಿ ಯಾರಿಗೂ ಹೇಳ್ಬಾರದು ಎಂದು ನಿರ್ಧರಿಸಿ ಅದೇ ಭಯದಲ್ಲಿ ಹೇಗೋ ಅಂಗಡಿಗೆ ತೆರಳಿ , ಸಕ್ಕರೆ ಖರೀದಿಸಿ , ಮನೆಗೆ ಸಾಗಿ ಅಮ್ಮನಿಗೆ ನೀಡಿತು . ಸಂಜೆ ಪಾಯಸ ತಿಂದು ಇನ್ನೇನು ಮಲುಗುವ ಸಮಯದಲ್ಲಿ , ಬೆಳ್ಳಿಗೆ ನಡೆದ ಎಲ್ಲ ಸಂಗತಿಗಳನ್ನು ಪೆಬ್ಬೆ ಅಮ್ಮನಲ್ಲಿ ಹೇಳಿತು , ಬೈಯ್ಯಬಹುದೆಂದು ನೆನಿಸಿದ್ದ ಪೆಬ್ಬೆಯ ಸಾಹಸಕ್ಕೆ ಖುಷಿ ಪಟ್ಟ ಅಮ್ಮ ಅದನ್ನು ತೋರ್ಪಡಿಸದೆ , ಮುಂದಿನ ಬಾರಿ ಒಬ್ಬನೇ ಸರೋವರದಲ್ಲಿ ಇಳಿಯಬಾರದೆಂದು ಆಣೆ ಮಾಡಿಸಿಕೊಂಡಳು .ಆಣೆ ಮಾಡಿದ ಪೆಬ್ಬೆ ಅಮ್ಮನ ಬಳಿ ಬೆಚ್ಚಗೆ ಮಲಗಿದ. 

ಗುರುವಾರ, ಜೂನ್ 15, 2017

Panchabootha

 ಪಂಚಭೂತಗಳು ಪ್ರಕೃತಿಯ ಮೂಲ ಧಾತುಗಳು .ಬ್ರಹ್ಮಾಂಡದ ಚರಾಚರಗಳು  ಪಂಚಭೂತಗಳಿಂದ ಆದದ್ದು .ಭೂಮಿ ಅಥವ ಪೃಥ್ವಿ ,ಜಲ ಅಥವ ನೀರು, ತೇಜಸ್ ಅಥವ ಬೆಂಕಿ,ಪವನ ಅಥವ ಗಾಳಿ, ಶೂನ್ಯ ಅಥವ ಆಕಾಶ  ಇವೆ ಆ ಐದು ಪಂಚ ಮಹಾಭೂತಗಳು . ಪಂಚಮಹಭೂತಗಳ ಸಿದ್ದಾಂತ  ಕೇವಲ ಭಾರತದಲ್ಲ  ಪುರಾತನ ಗ್ರೀಕ್, ಈಜಿಪ್ಟ್   ಮತ್ತಿತರ ರಾಷ್ಟ್ರಗಳ ತತ್ವಜ್ಞಾನಿಗಳು ಕೂಡ  ಇದರ ಬಗ್ಗೆ  ಪ್ರತಿಪಾದಿಸಿದ್ದಾರೆ .

ಪಂಚಭೂತಗಳು ವಿಷ್ಣುವಿನಿಂದ ಜನಿಸಿದವು  ಎಂದು ಪುರಾಣಗಳು ಹೇಳುತ್ತವೆ . ಹಿಂದೊಮ್ಮೆ , ವಿಷ್ಣು , ಶಿವನನ್ನು ಕುರಿತು  ತಪಸನ್ನು ಆಚರಿಸುತ್ತಿದ್ದ, ಶಿವನ ಆಶಿರ್ವಾದದಿಂದ ಅನೇಕ  ಪರ್ವತ ಶಿಕರ , ಜರಿ , ನದಿ ತೊರೆಗಳು , ವಿಷ್ಣುವಿನ ದೇಹದಿಂದ  ಜನ್ಮ ತಾಳಿದವು . ನಂತರೆ ವಿಷ್ಣುವಿನ ದೇಹದಿಂದ, ಮೂರು ಗುಣಗಳು , ಪಂಚಭೂತಗಳು, ಕೊನೆಯಲ್ಲಿ ಪಂಚ ಜ್ಞಾನೇಂದ್ರಿಯ ಗಳು ಪ್ರಕಟವಾದವು . ಆತ್ಮನಿಂದ  ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಬೆಂಕಿ, ಬೆಂಕಿಯಿಂದ ನೀರು ಮತ್ತು ಎಲ್ಲ ೪ ಧಾತುಗಳಿಂದ ಭೂಮಿಯಾ ಸೃಷ್ಟಿಯಾಯಿತು . ವೇದಾಂತ ಪುರಾಣಗಳ  ಪ್ರಕಾರ , ಮನಷ್ಯನ ಪಂಚೇಂದ್ರಿಯಗಳು ಪಂಚಭೂತಗಳಿಂದ ಆವಿಷ್ಕರವಾಯಿತು .  ಆಕಾಶದಿಂದ ಕಿವಿ , ವಾಯುವಿನಿಂದ  ಚರ್ಮ, ಅಗ್ನಿಯಿಂದ ಕಣ್ಣು, ನೀರಿನಿಂದ ನಾಲಿಗೆ ಮತ್ತು ಭೂಮಿಯಿಂದ ನಾಸಿಕ ಹೊರಹೊಮ್ಮಿತು

ಪುರಾಣಗಳು , ಉಪನಿಷತ್ತುಗಳ ಜೊತೆ , ಆಯುರ್ವೇದ ಕೂಡ ಪಂಚ ಭೂತಗಳ ಮಹತ್ವವನ್ನು ಹೇಳುತ್ತದೆ .ಇದರ ಪ್ರಕಾರ , ಮನುಷ್ಯನಮರಣಾನಂತರ ಅವನ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ. ಇದು ಪ್ರಕೃತಿಯ ಸಮತೋಲನದ ಗುಟ್ಟು . ಆಯುರ್ವೇದದ ಪ್ರಕಾರ  ಮನುಷ್ಯನ ಆರೋಗ್ಯ ಕೂಡ ಪಂಚಭೂತಗಳಿಂದ ನಿಯಂತ್ರಿಸಲ್ಪಡುತ್ತದೆ . ದೇಹದ ಯಾವುದೇ ರೀತಿಯ ಅಸ್ವಸ್ಥೆ ಗೆ , ಪಂಚಭೂತಗಳ ಅಸಮತೊಲನವೆ ಕಾರಣ. ಆಯುರ್ವೇದದಲ್ಲಿ ಹೇಳುವ ವಾತ ಪಿತ್ತ , ಕಫ ದೋಷಗಳು , ಪಂಚಭೂತಗಳ ಪ್ರಾತಿನಿದ್ಯ .ಇನ್ನು ಪ್ರಾಚಿನ ಹಸ್ತ  ಮುದ್ರ ಕೂಡ ಪಂಚಭೂತಗಳ ಸಿದ್ಧಾಂತದಿಂದ ಆದ  ಜ್ಞಾನ . ಹಸ್ತ ಮುದ್ರಿಕೆಯ ಪ್ರಕಾರ ಹೆಬ್ಬೆರಳು ಅಗ್ನಿಯನ್ನು , ತೋರುಬೆರಳು ವಾಯುವನ್ನು, ಮದ್ಯಬೆರಳು ಆಕಾಶವನ್ನು ,ಉಂಗುರ ಬೆರಳು ಪ್ರುಥ್ವಿಯನ್ನು ಮತ್ತು ಕಿರು ಬೆರಳು ನೀರನ್ನು ಪ್ರತಿನಿದುಸುತ್ತದೆ

ದಕ್ಷಿಣ ಭಾರತದಲ್ಲಿ , ಪಂಚಭೂತಸ್ಥಳಂ ಎಂದು ಕರೆಯಲ್ಪಡುವ ಶಿವನ  ೫ ಬೇರೆ ಬೇರೆ ದೇವಸ್ಥಾನಗಳಿವೆ . ಈ ೫ ದೇವಸ್ಥಾನಗಳು ಪಂಚಬೂತಗಳನ್ನು  ಪ್ರಥಿನಿದಿಸುತ್ತವೆ. ಕಂಚಿಪುರಂನ ಎಕಾಮ್ಬರೆಶ್ವರ ದೇವಸ್ಥಾನ , ತ್ರಿಚಿಯ ಜಂಬುಕೇಶ್ವರ, ತಿರುವನಮಲೈ ನ ಅರುಣಾಚಲೇಶ್ವರ, ಕಳಹಸ್ತಿಯ ಶ್ರೀ ಕಾಳಹಸ್ಥೆಶ್ವರ ಮತ್ತು ಚಿದಂಬರಂನ ತಿಳ್ಳಿನಟರಾಜ ದೇವಸ್ಥಾನ .

ನಮ್ಮ ದೇಹದಂತೆ ಮನ್ಸಸ್ಸು ಕೂಡ ಪಂಚಭೂತಗಳ ಅತಿ ಸೂಕ್ಧ್ಮ ರೂಪದಿಂದ  ಆದದ್ದು . ಹಾಗಾಗಿ ಯಾವ ಪಂಚಭೂತ ಪ್ರಧಾನವಾಗಿರತ್ತೊದೋ ,ಮನುಷ್ಯನು ಅದೇ ರೀತಿಯ ವಿವಿದ ಮನಸ್ಥಿತಿ ಮತ್ತು ಭಾವಪರವಶತೆ ಯನ್ನು ಅನುಭವಿಸುತ್ತಾನೆ . ಉಧಾಹರಣೆಗೆ ಹೇಳುವುದಾದರೆ , ಪ್ರುಥ್ವಿಯು  ಪ್ರಬಲವಾದಾಗ ಆರಾಮದ ಅಥವ ಅಸ್ವಸ್ಥೆಯ , ಮತ್ತು ಮನಸೀನ ಭಾರವಾದ ಸ್ತಿತಿ, ಅದೇ ರೀತಿ ವಿಹರಿಸುತ್ತಿರುವ, ತೇಲುತಿರುವ ಮನಸಲ್ಲಿ  ನೀರಿನ  ,ಮುಂದೆ ನಡೆಯುವ ಅಥವ  ಸನ್ನಿವೇಶಗಳಿಂದ ಓಡಿ ಹೋಗಬೇಕು ಎಂದೆನಿಸುವ ಸಮಯಗಳ್ಳಲ್ಲಿ ಗಾಳಿಯಾ  , ಸಾಧಿಸುವ ಛಲ ,ರೋಷ , ಬೆಂಕಿಯ , ಮತ್ತು ಪೂರ್ಣತೆಯ ,ಹಗುರತೆಯ  ನಮ್ಮನ್ನು  ಸುತ್ತುವರೆದಾಗ ಮನಸ್ಸು ಆಕಾಶದ ಅಧೀನದಲ್ಲಿರುತ್ತದೆ . ಪಂಚಬೂತಗಳು   ನೇರವಾಗಿ ನಮ್ಮ ಮನಸನ್ನು ನಿಯಂತ್ರಿಸುತ್ತವೆ ಹಾಗಾಗಿ ಜ್ಞಾನಿಗಳು , ಋಷಿಮುನಿಗಳು ಮೂಲವಸ್ತುಗಳ ನಿಗ್ರಹಕ್ಕೆ , ಹತೋಟಿಗೆ ಯೋಗ ಧ್ಯಾನ ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು . ಯೋಗದ ಅಂತಿಮ,ಕಟ್ಟ ಕಡೆಯ ಉದ್ದೇಶ ಬೂತಶುದ್ದಿ - ಅಂದರೆ ಪಂಚಭೂತಗಳನ್ನು ಚೊಕ್ಕಟಗೊಲಿಸುವ  ಕೆಲಸ .ಹಾಗಾಗಿ ಶಾಂತಿ , ಸಮ್ರುದ್ದಿ ಮತ್ತು ಚಿರಂತನವಾದ ನೆಮ್ಮದಿಯ ಜೀವನ ನಮ್ಮದಾಗಬೇಕಾದರೆ ಪಂಚಬೂತಗಳ ಪ್ರಾಮುಖ್ಯತೆ ಹಾಗು ಅದರ ಮಾರ್ಮಿಕ ಫಲ ಪರಿಣಾಮಗಳ ಬಗೆಗಿನ ತಿಳುವಿಕೆ ತುಂಬ ಮುಖ್ಯ .