ಶನಿವಾರ, ಜುಲೈ 25, 2015

Thriguna

 ಮನುಷ್ಯನ  ದೇಹ ಪಂಚಭೂತಗಳಿಂದಾದ್ದು . ಮನುಷ್ಯನ ಮನಸ್ಸು ಗುಣಗಳಿಂದ ನಿಯಂತ್ರಿಸಲ್ಪಡುತ್ತದೆ . ಮಾನವನ  ಶಕ್ತಿ ಮೂರು ಗುಣಗಳಲ್ಲಿ ಹಂಚಿಹೊಗಿವೆ .ತಮಸ್ಸು , ರಜಸ್ಸು ಮತ್ತು ಸಾತ್ವಿಕ ಎಂಬುದೇ ಈ ಮೂರು ಗುಣಧರ್ಮಗಳು .  ಹಿಂದೂ ಸಂಸ್ಕೃತಿಯ  ದೇವರುಗಳಾದ , ,ಬ್ರಹ್ಮ ,ವಿಷ್ಣು ,ಮಹೇಶ್ವರರು  ವಿಭಿನ್ನ ಗುಣಗಳ ಸ್ವರೂಪ . ಬ್ರಹ್ಮನು  ರಜೋ ಗುಣದ ವಿಷ್ಣು ಸಾತ್ವಿಕ ಗುಣದ ಮತ್ತು ಶಿವನು ಎಲ್ಲ ಗುಣಗಳ ಪ್ರತಿರೂಪ . ವ್ಯಕ್ತಿಯ ವ್ಯಕ್ತಿತ್ವದ ಮೇಲೆ  ಈ ಮೂರು ಗುಣಗಳು ಪ್ರಭಾವ ಬೀರುತ್ತವೆ . ತಮೋ ಗುಣ ಜಡತ್ವದ , ರಜೋ ಗುಣ ಶಕ್ತಿ, ತೀವ್ರತೆಯಾ ಹಾಗು ಸಾತ್ವಿಕ ಗುಣ ಬೆಳಕಿನ , ಪರಿಶುದ್ದತೆಯ ಸಂಕೇತ .ಭೂಮಿಯ ಮೇಲಿರುವ ಎಲ್ಲ ವಸ್ತುಗಳು ,ಜೀವಿಗಳನ್ನು ಈ ಮೂರು ಗುಣದ ಆದರದ ಮೇಲೆಯೂ ವಿಂಗಡಿಸಬಹುದು

ಅಂಧಕಾರ ಕತ್ತಲೆಯ ಪ್ರತಿರೂಪವಾದ ತಮಸ್ಸು ಮಾಯೆ,ಉದಾಸೀನತೆ , ವಿನಾಶ, ಸಾವು, ಜಡತ್ವ, ಆಲಸ್ಯವನ್ನು ಪ್ರೋತ್ಸಾಹಿಸುವ ಶಕ್ತಿ .  ಪ್ರಪಂಚದ ಸೃಷ್ಟಿಯಲ್ಲಿ ತಮಸ್ಸು ರಾಕ್ಷಸೀ ಗುಣ .  ರಾಕ್ಷಸರಲ್ಲಿ ಮನೆಮಾಡಿರುವ ಗುಣ . ತಮೋಗುಣ ಹೆಚ್ಚಾದಂತೆಲ್ಲ ಮನುಷ್ಯ ತನ್ನ ದಿನಗಳ ಹೆಚ್ಚಿನ ಸಮಯ ನಿದ್ದೆ ಯಲ್ಲಿ ಕಳೆಯುತ್ತಾನೆ , ಕೆಲಸದ ಮೇಲಿನ ಅವನ ಶ್ರದ್ದೆ ,  ಆಸಕ್ತಿ ಕಡಿಮೆ ಆಗುತ್ತದೆ . ಈ ರೀತಿಯ ಅನುಭುವ ಪ್ರತಿಯೊಬ್ಬರಿಗೆ ಕೆಲವೊಮ್ಮೆ , ಕೆಲವೊಂದು ದಿನ ಆಗಬಹುದು . ಆದರೆ ಈ ಆಲಸ್ಯ ಪ್ರತಿದಿನದ ಮಾತಾಗುವುದು  ಒಳ್ಳೆಯ ಲಕ್ಷಣವಲ್ಲ . ಹೆಚ್ಚಿನ ತಾಮಸಕ್ಕೆ ಶರಣಾದ ವ್ಯಕ್ತಿ , ತನ್ನ ಕೆಲಸಗಳನ್ನು ಪ್ರತಿ ದಿನ ಮುಂದೂಡುತ್ತಾ ಬರುತ್ತಾನೆ ಇದರಿಂದ ಅಪಜಯ ಅವನದಾಗುತ್ತದೆ , ಖಿನ್ನತೆಗೆ ಒಳಗಾಗುತ್ತಾನೆ , ತನ್ನನ್ನು ತಾನೆ ಹಳಿಯುತ್ತಾ ಆತ್ಮಹತ್ಯೆಗೆ ಶರಣಾಗುತ್ತಾನೆ .  ಅರಿವಿಗೆ ಬರದಂತೆಯೇ , ತಮೋಗುಣ ಅವನ ಸುಂದರ ಜೀವನವನ್ನು ಕಬಳಿಸುತ್ತದೆ . ಎಲ್ಲೆ ಮೀರಿದ ,ತಮೋ ಗುಣವನ್ನು ಯಾವುದೇ  ಆಯುಧದಿಂದ ದಂಡಿಸಲು ಸಾಧ್ಯವಿಲ್ಲ , ಇದರ ನಿಗ್ರಹಕ್ಕೆ ಇರುವ ಒಂದೇ ಮಾರ್ಗ ಸುಪ್ತವಾಗಿರುವ ಸಾತ್ವಿಕ ಗುಣವನ್ನು ಹೆಚ್ಚಿಸಿಕೊಳ್ಳುವುದು .

 ಇನ್ನು ಚುರುಕುತನದ ಪ್ರತೀಕವಾದ ರಜೋ ಗುಣ ಉಳಿದೆರಡು ಗುಣಗಳನ್ನು ಬೆಂಬಲಿಸುವನ್ತದ್ದು . ಅತಿ ಹೆಚ್ಚು  ಚುರುಕುತನ,ಉತ್ಸುಕತೆ ಮತ್ತು ಭಾವೋದ್ವೇಗ ರಜೋ ಗುಣದ ಮುಖ್ಯ ಲಕ್ಷಣಗಳು . ರಜೋ ಗುಣ ತಮಸ್ಸಿಗಿಂತ ಧನಾತಮ್ಕ  ಸಾತ್ವಿಕಕಿಂತ ಋಣಾತ್ಮಕ . ನಾವು ನೋಡಿರಬಹುದು ಕೆಲವು ವ್ಯಕ್ತಿಗಳು , ಒಂದು ಕ್ಷಣಕ್ಕಾದರೂ ಒಂದು ಕಡೆ ಸ್ಥಿರವಾಗಿ ನಿಲ್ಲಲಾರರು , ಅವರ  ಮನಸ್ಸು ಯಾವಾಗಲು , ನೂರಾರು ಯೋಚನೆ, ಯೋಜನೆ, ಆಲೋಚನೆಗಳ ಮಳೆಯಲ್ಲಿ ತೊಳಲಾಡುತಿರುತ್ತದೆ .ಇದು ಇನ್ನು ಮಿತಿಮೀರಿ  ಗೊಂದಲಕ್ಕೆ ಒಳಗಾಗುತ್ತಾರೆ . ಮನದೊಳಗಿನ ಗೊಂದಲಗಳು ,ಮುಂಗೊಪಿತನ ,ಆಕ್ರಮಣ ರೂಪತಾಳಿ, ಕ್ರೌರ್ಯಕ್ಕೆ ತಿರುಗತ್ತದೆ . ಜೀವನದಲ್ಲಿ ಎಲ್ಲವನ್ನು ಸಾಧಿಸುವ ಶಕ್ತಿ ಇವರುಗಳಿಗೆ ಇದ್ದರು ಮಿತಿಮೀರಿದ  ರಜೋ ಗುಣದ ಪ್ರಭಾವದಿಂದ ಜೀವನ ವ್ಯರ್ಥವಾಗುತ್ತದೆ .

 ಅಪರೂಪವಾದ ಗುಣ , ಸತ್ವ ಗುಣ.ಸತ್ವ ಗುಣದಿಂದ ಕೂಡಿದ ವಸ್ತು , ವ್ಯಕ್ತಿ ತನ್ನ ಬಾಹ್ಯ ಮತ್ತು ಅಂತರಿಕ ಜಗತ್ತನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾನೆ  . ಸಾತ್ವಿಕತೆಯನ್ನು ಮೈಗೂದಿಡಿಕೊಂಡ ವ್ಯಕ್ತಿ ತನ್ನ ಸುತ್ತಮುತ್ತಲಿನ, ಜನ , ಪರಿಸರವನ್ನು ಸದಾ, ಒಳ್ಳೆಯ ರೀತಿಯಲ್ಲಿ ಕಾಣುತ್ತಾನೆ .  ಹೂವು , ಹಣ್ಣು , ದೇವರಿಗೆ  ಸಮರ್ಪಿಸುವ ನೈವೇದ್ಯ ಎಲ್ಲ ಸಾತ್ವಿಕತೆಯ ರೂಪಗಳು  . ಒಂದು ಸುಂದರವಾದ , ಹೂವನ್ನು   ಕಂಡಾಗ ನಮ್ಮ  ಮನಸಿನಲ್ಲಿ ಉಂಟಾಗುಗುವ ಆಹ್ಲಾದತೆಯ ಅನುಭವವೇ ಸಾತ್ವಿಕ ಗುಣ. ಸಾತ್ವಿಕ ಮನಸ್ಸು ಸದಾ ಪ್ರಶಾಂತ , ಸ್ಥಿರ ,ಸುಖಪ್ರದ .ಸಾತ್ವಿಕ ವ್ಯಕ್ತಿಗಳು ಸದಾ ಪ್ರಪಂಚದ , ಒಳಿತಿಗಾಗಿ ಚಿಂತಿಸುವವರು , ಅದಕ್ಕಾಗಿ ದುಡಿಯವವರು, .  ಅವರ ಆಹಾರ,ಉಡುಗೆ ತೊಡುಗೆ ಮಾತು ಎಲ್ಲ ಹಿತ ಮಿತವಾದದ್ದು . ವಿಚಾರ ಮೆಲುಸ್ತರದ್ದು . ತುಳಸಿದಾಸರು, ತ್ಯಾಗರಾಜರು, ರಮಣ  ಮಹರ್ಷಿಗಳು, ಪರಮಹಂಸರು, ಸ್ವಾಮಿ ವಿವೇಕಾನಂದರು ಇವರೆಲ್ಲ ಸಾತ್ವಿಕ ಗುಣಕ್ಕೆ ಇನ್ನೊಂದು ಹೆಸರು . ಎಲ್ಲದರಲ್ಲೂ ಸುಂದರತೆಯನ್ನು,ಸತ್ಯತೆಯನ್ನು ಕಾಣುವ, ಕಿಚ್ಚು ದ್ವೇಷ ,ಅಸೂಯೆಗಳಿಂದ ವಿಚಲಿತರಾಗದವರೆ ಸಾತ್ವಿಕ ಪುರುಷರು .

ಮೂರು ಗುಣಗಳಲ್ಲಿ ಒಂದು ಗುಣವನ್ನು ಒಳ್ಳೆಯದು,ಇನ್ನೊಂದನ್ನು ಕೆಟ್ಟದ್ದು ಎಂದು ವಿಂಗಡಿಸಿ ಭೆರ್ಪಡಿಸಲು ಸಾಧ್ಯವಿಲ್ಲ . ತಮಸ್ಸು ಇಲದೆ ನಿದ್ರೆ ಇಲ್ಲ , ರಜಸ್ಸು ಇಲ್ಲದೆ ಚಟುವಟಿಕೆ ಇಲ್ಲ.ಸಾತ್ವಿಕ ಗುಣ ಮೆಲುಸ್ತರದ್ದು , ಅದನ್ನು ಹೆಚ್ಚಿಸಿ, ಉಳಿದೆರಡು  ಗುಣಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು .ಸಾತ್ವಿಕತೆ ಹೆಚ್ಚಿ,ತಮೋ ರಜೋ ಗುಣಗಳು ಸಮತೊಲನದಲ್ಲಿದ್ದಾಗ, ಮನಸ್ಸು ಪ್ರಫುಲ್ಲ, ಸ್ಥಿರ. ಆತ್ಮ ಆಹ್ಲಾದಮಯ ,ಜೀವನ ಸಾರ್ಥಕ .




ಗುರುವಾರ, ಜುಲೈ 23, 2015

yoga

ಜೂನ್ ೨೧, ೨೦೧೫ ರಂದು ಅಂತರಾಷ್ಟ್ರೀಯ ಯೋಗ ದಿನವನ್ನು  ಆಚರಿಸಲಾಯಿತು . ೧೯೨ ರಾಷ್ಟ್ರಗಳು ಯೋಗಾಸನದ ಅಭ್ಯಾಸದಲ್ಲಿ ಭಾಗವಿಸಿದ್ದವು . ೫೦೦೦ ವರ್ಷಗಳಷ್ಟು  ಹಿಂದೆ ಭಾರತದಲ್ಲಿ ಉಗಮವಾದ ಯೋಗದ ಏಕೈಕ ಗುರಿ ಆತ್ಮ ಮತ್ತು ಪರಮಾತ್ಮನ ಮಿಲನದ ಅನುಭವ . ಯೋಗ ಮನುಷ್ಯನ ಮಾನಸಿಕ ,ಭೌದ್ಧಿಕ ಮತ್ತು ಆದ್ಯಾತ್ಮಿಕ ಅಭ್ಯಾಸ .  ಜೂನ್ ೨೧ನ್ನೇ ಯೋಗ ದಿನವೆಂದು ಗುರಿತುಸುವುದರ ಹಿಂದೆ ಅನೇಕ ಕಾರಣಗಳಿವೆ  . ಭೂಮಿಯ ಉತ್ತರಾರ್ಧ ಗೋಳದ ಅತ್ಯಂತ ಧೀರ್ಘವಾದ ದಿನ,ದಕ್ಷಿಣಾಯಣ ಸಂಧಿ ಕಾಲ . ಜಗದ ಆದಿಗುರು, ಆದಿಯೋಗಿ ಶಿವನು ದಿನ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದನೆಮ್ಬುದು ಇನ್ನೊಂದು ನಂಬಿಕೆ 

ಯೋಗದ ಹುಟ್ಟು ಎಂದು , ಯಾರಿದರ ಕರ್ತ್ರು ಎಂಬುದರ ಬಗ್ಗೆ ಯಾವುದೇ ನಿಖರ ಮಹಿತಿಗಳಿಲ್ಲ . ಇತಿಹಾಸ ಕಾರರ ಪ್ರಕಾರ ಇದು ವೇದ ಕಾಲಕಿಂತಲೂ ಹಳೆಯದು .ಈಗ ಪ್ರಚಲಿತದಲ್ಲಿರುವ ಪತಂಜಲಿ ಯೋಗ ತೀರೇ ಇತ್ತೀಚಿನದು . ಇದು ೧ ನೆ ಶತಮಾನಕ್ಕೆ ಸೇರಿದ ಗ್ರಂಥ .  ಕೇವಲ  ನಮ್ಮ ದೇಶಕ್ಕೆ ಸೀಮಿತವಾಗಿದ್ದ ಯೋಗಬ್ಯಾಸವನ್ನು ವಿಶ್ವಕ್ಕೆ ಪರಿಚಯಿಸಿದ  ಮೊದಲ ಭಾರತಿಯ ಸ್ವಾಮಿ ವಿವೇಕಾನಂದರು  .ಇವರ ನಂತರ ಅನೇಕ ಆಧ್ಯಾತ್ಮಿಕ ಗುರುಗಳು , ಯೋಗಿಗಳು ಈ ಪರಂಪರೆಯನ್ನು  ಮುಂದುವರೆಸುತ್ತಿದ್ದಾರೆ . ೧೯  ನೆ ಶತಮಾನದಲ್ಲಿ ಕೇವಲ ದೈಹಿಕ ವ್ಯಾಯಾಮವಾಗಿ ವಿಶ್ವದೆಲ್ಲೆಡೆ ಪ್ರಸ್ಸಿದಿಯಾದ ಯೋಗ ಭಾರತದಲ್ಲಿ ಮಾತ್ರ ಕೇವಲ ವ್ಯಾಯಮವಲ್ಲ . ಅದು  ಧ್ಯಾನ ಮತ್ತು ಆಧ್ಯಾತ್ಮಿಕತೆಯ ಸತ್ಹ್ವಾಂಶ . 

ವೇದಗಳು ಹಳೆಯದಾಯಿತು ,ಉಪನಿಷತ್ತು ಮತ್ತು ಗ್ರಂಥಗಳ  ಬಳಕೆ ಕಡಿಮೆ ಆಯಿತು .  ಹೊಸ ನೀರು ಬಂದು ಹಳೆ ನೀರು ಕೊಚ್ಚಿ ಹೋಗುವಂತೆ ಕಾಲದೊಂದಿಗೆ ಭಾರತದಲ್ಲಿ ಹುಟ್ಟಿದ ಕಲೆ-ಸಂಸ್ಕೃತಿ ,ಆಚರ -ವಿಚಾರ , ಸಂಪ್ರದಾಯ , ಕಟ್ಟಲೆಗಳು ಮೂಲೆಗುಂಪಾದವು  ಪುರಾತನ ನಂಬಿಕೆಗಳನ್ನು ,  ಪ್ರಯೋಜನಕ್ಕೆ ಬಾರದ ವಿಷಗಳು ಎಂದು  ಮೂಗು ಮುರಿಯುವ ಯುವಜನ , ಯೋಗಬ್ಯಾಸವನ್ನು ಮಾತ್ರ ನಂಬುತ್ತಾರೆ,ಗೌರ್ರವಿಸುತ್ತರೆ , ಅನುಸರಿಸುತ್ತಾರೆ  . ಇಷ್ಟು ವರ್ಷ ಕಳೆದರು ಯೋಗ ಇಂದಿಗೂ ಪ್ರಸ್ತುತ 

ಆರೋಗ್ಯವೇ ಭಾಗ್ಯ . ಯೋಗ ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ  ಅವಶ್ಯಕ .  ಪ್ರತಿಯೊಬ್ಬ ಮನುಷ್ಯನಿಗೂ  ತನ್ನ ಜೀವನದ ಪ್ರತಿ ಘಟ್ಟದಲ್ಲೂ ಯೋಗ  ಸಹಾಯಕ್ಕೆ ಬರುತ್ತದೆ  ಯೋಗಭ್ಯಾಸದಲ್ಲಿ ತೊಡಗಿಸಿಕೊಂಡ ವ್ಯಕ್ತಿಗೆ  , ಶಿಸ್ತು  ಸಂಯಮ,ಆರೋಗ್ಯ,  ಸ್ಥಿರ ಮನಸ್ಸು , ಚುರುಕಾದ ಬುದ್ಧಿ ತಾನಾಗಿಯೇ ಬರುತ್ತದೆ . ಹೃದ್ರೋಗ,ಅಸ್ತಮಾ ಕ್ಯಾನ್ಸರ್ ಮುಂತಾದ ಖಾಯಿಲೆಗಳ ನಿಗ್ರಹಕ್ಕೆ ಯೋಗ ಪರಿಣಾಮಕಾರಿ . ಪ್ರಾಣಯಾಮ , ಧ್ಯಾನ ಮತ್ತು ಯೋಗದ ಅಭ್ಯಾಸದಿಂದ ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲಾಗುವ ಅಥ್ಯದ್ಭುಥ ಪರಿಣಾಮಗಳನ್ನು ವೈದ್ಯರು , ಮನೋವಿಜ್ಞಾನಿಗಳು ಕೂಡ ಪುಷ್ಟಿಕರಿಸುತ್ತಾರೆ. ವಿಧ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು , ಯುವಕರಲ್ಲಿ ಮಾನಸಿಕ ಸ್ಥಿರತೆಯನ್ನು , ವಯಸ್ಕರಲ್ಲಿ ಸಾಧಿಸುವ ಛಲ ಮತ್ತು ತಾಳ್ಮೆಯನ್ನು  ಹಾಗು ವೃದ್ದಾಪ್ಯದಲ್ಲಿ ಅತ್ಯಂತ ಅವಶ್ಯಕವಾದ ಮಾನಸಿಕ ನೆಮ್ಮದಿ ಮತ್ತು ಆರೋಗ್ಯವನ್ನು ಯೋಗ ನೀಡುತ್ತದೆ . 

ಇಷ್ಟೆಲ್ಲಾ  ಪ್ರಯೋಜನಕಾರಿಯಾದ ಯೋಗಾಭ್ಯಾಸ ಪ್ರತಿಯೊಬ್ಬರ ಜೀವನದಲ್ಲಿ ದಿನಚರಿಯಾಗಿ ಇರದಿರುವುದು ವಿಷಾದಕರ.ಕೇವಲ ಖಾಯಿಲೆ ಬಂದಾಗ, ಖಿನ್ನತೆ ಗೆ ಒಳಗಾದಾಗ , ಸ್ಥೂಳಕಾಯರಾದಾಗ , ವೈದ್ಯರ ಸಲಹೆಯಾ ಮೇರೆಗೆ ಯೋಗಾಸನದ ಕಡೆಗೆ ಮುಖ ಮಾಡುವವರು ಅದನ್ನು ದಿನಚರಿಯ ಭಾಗವಾಗಿ ಅಭ್ಯಸಿಸಬೇಕು , ಅನುಸರಿಸಬೇಕು . ಯೋಗದ   ಮಹತ್ವ ವನ್ನು  ಅರಿತ ಅದೆಷ್ಟೋ ಬಹುದೆಶಿಯ ಕಂಪನಿ ಗಳು ತಮ್ಮಲ್ಲಿ  ಕೆಲಸ ಮಾಡುವ ಉದ್ಯೋಗಿಗಳಿಗೆ , ಆಗಿನ್ದಾಗೆ ಯೋಗಾಭ್ಯಾಸದ ಕಾರ್ಯಾಗಾರಗಳನ್ನು ,ತರಗತಿಗಳನ್ನು ನಡೆಸುತ್ತದೆ. ಇದರ ಹಿಂದಿರುವ ಉತ್ತಮ , ಉದ್ದೇಶ ನೌಕರರ ದೈಹಿಕ,ಮಾನಸಿಕ ,ಆರೋಗ್ಯ ವೃದ್ದಿ ಅದರಿಂದ ಹೆಚ್ಚುವ ಕಾರ್ಯ ಕ್ಷಮತೆ .ಇದನ್ನು ನಮ್ಮ ಸರ್ಕಾರಿ ಕಛೇರಿಗಳಲ್ಲಿ , ಶಾಲಾ ಕಾಲೆಗುಗಳಲ್ಲಿ ರೂಡಿಸಿಕೊಳ್ಳಬೇಕು  .ಹಳ್ಳಿಯ ಜನ ಶ್ರಮಿಕರು ,  ಪಟ್ಟಣ ದ ಜನರ ಜೀವನ ಶೈಲಿಗೆ ಮಾತ್ರ ಯೋಗದ ಅವಶ್ಯಕತೆ ಇದೆ ಎಂದು ವಾದಿಸುವುದು ಅವೈಜಾನಿಕ . ಕೇವಲ ಕೆಲವು ವಯಸ್ಸಿನ , ಧರ್ಮದ, ಜಾತಿಯ, ಜನಾಂಗದ , ಪ್ರದೇಶದ ಜನರಿಗೆ ಮಾತ್ರ ಯೋಗದ ಅವಶ್ಯಕತೆ ಇದೆ ಎಂಬುದು ತಪ್ಪು ಕಲ್ಪನೆ .ಮಾನಸಿಕ ದೈಹಿಕ ಆರೋಗ್ಯ ಪ್ರತಿಯೊಬ್ಬರ ಹಕ್ಕು,ಅದನ್ನು ಕಾಪಾಡಿ ಕೊಳ್ಳುವುದು ನಮೆಲ್ಲರ ಕರ್ತವ್ಯ .  
ಯೋಗ ಕೇವಲ ಒಂದು ದಿನದ ಅಬ್ಯಾಸವಲ್ಲ , ಪ್ರತಿನಿತ್ಯ ಮಾಡುವುದೇ ಯೋಗಬ್ಯಾಸ . ಯೋಗ ನಮ್ಮ ಹಿರಿಯರು, ಯೋಗಿಗಳು ,ಚಿಂತಕರು, ತತ್ವಜ್ಞಾನಿಗಳ ನಮಗಾಗಿ ಬಿಟ್ಟು ಹೋಗಿರುವ ಪರಂಪರೆ. ಅದನ್ನು ನಮ್ಮ ದಿನನಿತ್ಯದ ಜೀವನದಲ್ಲಿ ರೂಡಿಸಿಕೊಳ್ಳುವುದರ ಬಗ್ಗೆ ಚಿಂತನೆ ನಡೆಸೋಣ .