ಗುರುವಾರ, ಜೂನ್ 15, 2017

Panchabootha

 ಪಂಚಭೂತಗಳು ಪ್ರಕೃತಿಯ ಮೂಲ ಧಾತುಗಳು .ಬ್ರಹ್ಮಾಂಡದ ಚರಾಚರಗಳು  ಪಂಚಭೂತಗಳಿಂದ ಆದದ್ದು .ಭೂಮಿ ಅಥವ ಪೃಥ್ವಿ ,ಜಲ ಅಥವ ನೀರು, ತೇಜಸ್ ಅಥವ ಬೆಂಕಿ,ಪವನ ಅಥವ ಗಾಳಿ, ಶೂನ್ಯ ಅಥವ ಆಕಾಶ  ಇವೆ ಆ ಐದು ಪಂಚ ಮಹಾಭೂತಗಳು . ಪಂಚಮಹಭೂತಗಳ ಸಿದ್ದಾಂತ  ಕೇವಲ ಭಾರತದಲ್ಲ  ಪುರಾತನ ಗ್ರೀಕ್, ಈಜಿಪ್ಟ್   ಮತ್ತಿತರ ರಾಷ್ಟ್ರಗಳ ತತ್ವಜ್ಞಾನಿಗಳು ಕೂಡ  ಇದರ ಬಗ್ಗೆ  ಪ್ರತಿಪಾದಿಸಿದ್ದಾರೆ .

ಪಂಚಭೂತಗಳು ವಿಷ್ಣುವಿನಿಂದ ಜನಿಸಿದವು  ಎಂದು ಪುರಾಣಗಳು ಹೇಳುತ್ತವೆ . ಹಿಂದೊಮ್ಮೆ , ವಿಷ್ಣು , ಶಿವನನ್ನು ಕುರಿತು  ತಪಸನ್ನು ಆಚರಿಸುತ್ತಿದ್ದ, ಶಿವನ ಆಶಿರ್ವಾದದಿಂದ ಅನೇಕ  ಪರ್ವತ ಶಿಕರ , ಜರಿ , ನದಿ ತೊರೆಗಳು , ವಿಷ್ಣುವಿನ ದೇಹದಿಂದ  ಜನ್ಮ ತಾಳಿದವು . ನಂತರೆ ವಿಷ್ಣುವಿನ ದೇಹದಿಂದ, ಮೂರು ಗುಣಗಳು , ಪಂಚಭೂತಗಳು, ಕೊನೆಯಲ್ಲಿ ಪಂಚ ಜ್ಞಾನೇಂದ್ರಿಯ ಗಳು ಪ್ರಕಟವಾದವು . ಆತ್ಮನಿಂದ  ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಬೆಂಕಿ, ಬೆಂಕಿಯಿಂದ ನೀರು ಮತ್ತು ಎಲ್ಲ ೪ ಧಾತುಗಳಿಂದ ಭೂಮಿಯಾ ಸೃಷ್ಟಿಯಾಯಿತು . ವೇದಾಂತ ಪುರಾಣಗಳ  ಪ್ರಕಾರ , ಮನಷ್ಯನ ಪಂಚೇಂದ್ರಿಯಗಳು ಪಂಚಭೂತಗಳಿಂದ ಆವಿಷ್ಕರವಾಯಿತು .  ಆಕಾಶದಿಂದ ಕಿವಿ , ವಾಯುವಿನಿಂದ  ಚರ್ಮ, ಅಗ್ನಿಯಿಂದ ಕಣ್ಣು, ನೀರಿನಿಂದ ನಾಲಿಗೆ ಮತ್ತು ಭೂಮಿಯಿಂದ ನಾಸಿಕ ಹೊರಹೊಮ್ಮಿತು

ಪುರಾಣಗಳು , ಉಪನಿಷತ್ತುಗಳ ಜೊತೆ , ಆಯುರ್ವೇದ ಕೂಡ ಪಂಚ ಭೂತಗಳ ಮಹತ್ವವನ್ನು ಹೇಳುತ್ತದೆ .ಇದರ ಪ್ರಕಾರ , ಮನುಷ್ಯನಮರಣಾನಂತರ ಅವನ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ. ಇದು ಪ್ರಕೃತಿಯ ಸಮತೋಲನದ ಗುಟ್ಟು . ಆಯುರ್ವೇದದ ಪ್ರಕಾರ  ಮನುಷ್ಯನ ಆರೋಗ್ಯ ಕೂಡ ಪಂಚಭೂತಗಳಿಂದ ನಿಯಂತ್ರಿಸಲ್ಪಡುತ್ತದೆ . ದೇಹದ ಯಾವುದೇ ರೀತಿಯ ಅಸ್ವಸ್ಥೆ ಗೆ , ಪಂಚಭೂತಗಳ ಅಸಮತೊಲನವೆ ಕಾರಣ. ಆಯುರ್ವೇದದಲ್ಲಿ ಹೇಳುವ ವಾತ ಪಿತ್ತ , ಕಫ ದೋಷಗಳು , ಪಂಚಭೂತಗಳ ಪ್ರಾತಿನಿದ್ಯ .ಇನ್ನು ಪ್ರಾಚಿನ ಹಸ್ತ  ಮುದ್ರ ಕೂಡ ಪಂಚಭೂತಗಳ ಸಿದ್ಧಾಂತದಿಂದ ಆದ  ಜ್ಞಾನ . ಹಸ್ತ ಮುದ್ರಿಕೆಯ ಪ್ರಕಾರ ಹೆಬ್ಬೆರಳು ಅಗ್ನಿಯನ್ನು , ತೋರುಬೆರಳು ವಾಯುವನ್ನು, ಮದ್ಯಬೆರಳು ಆಕಾಶವನ್ನು ,ಉಂಗುರ ಬೆರಳು ಪ್ರುಥ್ವಿಯನ್ನು ಮತ್ತು ಕಿರು ಬೆರಳು ನೀರನ್ನು ಪ್ರತಿನಿದುಸುತ್ತದೆ

ದಕ್ಷಿಣ ಭಾರತದಲ್ಲಿ , ಪಂಚಭೂತಸ್ಥಳಂ ಎಂದು ಕರೆಯಲ್ಪಡುವ ಶಿವನ  ೫ ಬೇರೆ ಬೇರೆ ದೇವಸ್ಥಾನಗಳಿವೆ . ಈ ೫ ದೇವಸ್ಥಾನಗಳು ಪಂಚಬೂತಗಳನ್ನು  ಪ್ರಥಿನಿದಿಸುತ್ತವೆ. ಕಂಚಿಪುರಂನ ಎಕಾಮ್ಬರೆಶ್ವರ ದೇವಸ್ಥಾನ , ತ್ರಿಚಿಯ ಜಂಬುಕೇಶ್ವರ, ತಿರುವನಮಲೈ ನ ಅರುಣಾಚಲೇಶ್ವರ, ಕಳಹಸ್ತಿಯ ಶ್ರೀ ಕಾಳಹಸ್ಥೆಶ್ವರ ಮತ್ತು ಚಿದಂಬರಂನ ತಿಳ್ಳಿನಟರಾಜ ದೇವಸ್ಥಾನ .

ನಮ್ಮ ದೇಹದಂತೆ ಮನ್ಸಸ್ಸು ಕೂಡ ಪಂಚಭೂತಗಳ ಅತಿ ಸೂಕ್ಧ್ಮ ರೂಪದಿಂದ  ಆದದ್ದು . ಹಾಗಾಗಿ ಯಾವ ಪಂಚಭೂತ ಪ್ರಧಾನವಾಗಿರತ್ತೊದೋ ,ಮನುಷ್ಯನು ಅದೇ ರೀತಿಯ ವಿವಿದ ಮನಸ್ಥಿತಿ ಮತ್ತು ಭಾವಪರವಶತೆ ಯನ್ನು ಅನುಭವಿಸುತ್ತಾನೆ . ಉಧಾಹರಣೆಗೆ ಹೇಳುವುದಾದರೆ , ಪ್ರುಥ್ವಿಯು  ಪ್ರಬಲವಾದಾಗ ಆರಾಮದ ಅಥವ ಅಸ್ವಸ್ಥೆಯ , ಮತ್ತು ಮನಸೀನ ಭಾರವಾದ ಸ್ತಿತಿ, ಅದೇ ರೀತಿ ವಿಹರಿಸುತ್ತಿರುವ, ತೇಲುತಿರುವ ಮನಸಲ್ಲಿ  ನೀರಿನ  ,ಮುಂದೆ ನಡೆಯುವ ಅಥವ  ಸನ್ನಿವೇಶಗಳಿಂದ ಓಡಿ ಹೋಗಬೇಕು ಎಂದೆನಿಸುವ ಸಮಯಗಳ್ಳಲ್ಲಿ ಗಾಳಿಯಾ  , ಸಾಧಿಸುವ ಛಲ ,ರೋಷ , ಬೆಂಕಿಯ , ಮತ್ತು ಪೂರ್ಣತೆಯ ,ಹಗುರತೆಯ  ನಮ್ಮನ್ನು  ಸುತ್ತುವರೆದಾಗ ಮನಸ್ಸು ಆಕಾಶದ ಅಧೀನದಲ್ಲಿರುತ್ತದೆ . ಪಂಚಬೂತಗಳು   ನೇರವಾಗಿ ನಮ್ಮ ಮನಸನ್ನು ನಿಯಂತ್ರಿಸುತ್ತವೆ ಹಾಗಾಗಿ ಜ್ಞಾನಿಗಳು , ಋಷಿಮುನಿಗಳು ಮೂಲವಸ್ತುಗಳ ನಿಗ್ರಹಕ್ಕೆ , ಹತೋಟಿಗೆ ಯೋಗ ಧ್ಯಾನ ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು . ಯೋಗದ ಅಂತಿಮ,ಕಟ್ಟ ಕಡೆಯ ಉದ್ದೇಶ ಬೂತಶುದ್ದಿ - ಅಂದರೆ ಪಂಚಭೂತಗಳನ್ನು ಚೊಕ್ಕಟಗೊಲಿಸುವ  ಕೆಲಸ .ಹಾಗಾಗಿ ಶಾಂತಿ , ಸಮ್ರುದ್ದಿ ಮತ್ತು ಚಿರಂತನವಾದ ನೆಮ್ಮದಿಯ ಜೀವನ ನಮ್ಮದಾಗಬೇಕಾದರೆ ಪಂಚಬೂತಗಳ ಪ್ರಾಮುಖ್ಯತೆ ಹಾಗು ಅದರ ಮಾರ್ಮಿಕ ಫಲ ಪರಿಣಾಮಗಳ ಬಗೆಗಿನ ತಿಳುವಿಕೆ ತುಂಬ ಮುಖ್ಯ .