ಶುಕ್ರವಾರ, ನವೆಂಬರ್ 25, 2022

Kannada rajyotsava

ಎಲ್ಲರಿಗು ನಮಸ್ಕಾರ . ಶುಭಸಂಜೆ . 

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು? 

ಮಹಾಲಿಂಗರಂಗ ರ ಈ ಸಾಲುಗಳನ್ನು ನೆನೆಯುತ್ತಾ , ಎಲ್ಲರಿಗು ೬೬ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತ ಇಂದಿನ ಕಾರ್ಯಕ್ರಮವನ್ನು ಪ್ರಾರಂಭಿಸೋಣ 

ಜ್ಞಾನ  ಅಜ್ಞಾನವ  ಕಳೆವಂತೆ , ದೀಪ ಕತ್ತಲೆಯನ್ನು ಕಳೆಯುತ್ತದೆ . ದೀಪವನ್ನು ಬೆಳೆಗಿಸಿ , ಕಾರ್ಯಕ್ರಮವನ್ನು ಶುಭಾರಂಭ ಮಾಡುವುದು ನಮ್ಮ ಸಂಸ್ಕೃತಿ , ಆಚರಣೆ . ಅದರಲ್ಲೂ ಹಚ್ಚ್ಚುವ ಆ ದೀಪ ಕನ್ನಡದ್ದಾದರೆ ಅದರ ಬೆಳಕು, ಮೆರುಗು ಇನ್ನು ಹೆಚ್ಚು . 

ಹಚ್ಚೇವು ಕನ್ನಡದ ದೀಪ , ನಮ್ಮೆಲರ ನೆಚ್ಚಿನ ಕವಿ ಡಿ . ಎಸ್ ಕರ್ಕಿ ಅವರು ಬರಿದಿರುವ ಪದ್ಯ . ಇಂದಿನ ಕನ್ನಡದ ಬಗೆಗಿನ ಕಾರ್ಯಕ್ರಮದಲ್ಲಿ ಇದಕ್ಕೆ ಮಿಗಿಲಾದ ಪ್ರಾಥನೆ ಗೀತೆ ಇರಲಾರದು .

ಈಗ ಈ ಗೀತೆಯನ್ನು ನಮ್ಮ ಮುಂದೆ ಪ್ರಸ್ತುತ ಪಡಿಸುವವರು ನಮ್ಮವರೇ ಆದ  "ASP ladies group". 


ಈಗ ಸಮಾರಂಭ ಕಳೆ  ಕಟ್ಟಿತ್ತು . ತುಂಬು ಹೃದಯದ ಧನ್ಯವಾದಗಳು .

ನವೆಂಬರ ಕನ್ನಡ ರಜೋತ್ಸವದ ಸಂಭ್ರಮದ ತಿಂಗಳು . ಎಲ್ಲೆಲ್ಲೂ ಕನ್ನಡ ಬಾವುಟ , ಕನ್ನಡ ಗೀತೆಗಳು , ಸಭೆ ಸಮಾರಂಭಗಳು. ಇಂದು ನಾವೆಲ್ಲಾ ಇಲ್ಲಿ ಸೇರಿರುವುದು ಇದೆ ಉದ್ದೇಶಕ್ಕಾಗಿ . ಸಂಭ್ರಮದಾಚಾರಣೆ ಎಂದಾಗ , "ASP" ಕುಟುಂಬ ಯಾರಿಗೂ ಏನು ಕಡಿಮೆ ಇಲ್ಲ . ಎಲ್ಲ ವಿಶೇಷ ದಿನಗಳಂತೆ , ಇಂದು ಕೂಡ ನಮ್ಮ ಚಿಣ್ಣರು , ಕುಟುಂಬದ ಸದಸ್ಯರು ಅನೇಕ  ವಿಭಿನ್ನ ಕಾರ್ಯಕ್ರಮಗಳೊಂದಿಗೆ ತಯಾರಾಗಿದ್ದಾರೆ . ಇನ್ನು ಹೆಚ್ಚು ತಡಮಾಡದೆ ಕಾರ್ಯಕ್ರಮಕ್ಕೆ ಶುರು ಮಾಡೋಣ . 

ಈಗ ನಿಮ್ಮೆಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಲು ಬರುತಿದ್ದಾರೆ  ನಮ್ಮ "ASP"  ಸಂಘದ ಅಧ್ಯಕ್ಷರಾದಂತಹ ಶ್ರೀಮತಿ , ಪ್ರತಿಭಾ ರಮೇಶ ರವರು 

ತುಂಬ ಧನ್ಯವಾದಗಳು . 



೧. ಕನ್ನಡ ಹಾಡು ಕೇಳಿದರೆ ನಮ್ಗೆಲ್ಲಾ ಕುಣಿ ಬೇಕು ಅನ್ನಿಸುತ್ತೆ . ಅಂತಹದ್ದೇ ಒಂದು ಅಧ್ಭುತ ಹಾಡು " ಕರುನಾಡೇ ಕೈ ಚಾಚಿದೆ ನೋಡೇ " . ಇಂದು ಈ ಹಾಡಿಗೆ ನೃತ್ಯ ಮಾಡಿ ನಮ್ಮನೆಲ್ಲ ರಂಜಿಸಲು ಬರುತ್ತಿದ್ದಾಳೆ , ಪುಟಾಣಿ । ಖುಷಿ . 

೨. ಸಂಗೀತಕ್ಕೆ  ಯಾವುದೇ  ದೇಶ ,ಭಾಷೆಗಳೆಂಬ ಕಟ್ಟಿಲ್ಲ . ಅದು ಎಲ್ಲವನ್ನು ಮೀರಿದ್ದು . ಸುಮಧುರವಾದ ಹಾಡು ಯಾವ ಭಾಷೆಯಲ್ಲಿ ಇದ್ದರು , ಅದು ನಮ್ಮ ಕಿವಿಗೆ ಹಿತವನ್ನು ಮತ್ತು ಮನಸ್ಸಿಗೆ ಆಹ್ಲಾದತೆಯನ್ನು ಕೊಡುತ್ತದೆ . ಈಗ ಇಂತಹದ್ದೇ ಒಂದು ಸುಂದರ ಗೀತೆಯನ್ನು ನಮ್ಮ ಮುಂದೆ ಹಾಡಲಿರುವ ಪ್ರತಿಭೆ ಪುಟಾಣಿ । ಸಗಸ್ರ . 


 " ನೃತ್ಯ ಆಯಿತು , ಹಾಡು ಆಯಿತು ಮುಂದೆ ಏನು ? . ಹಾಡು ನೃತ್ಯ ಆದ ಮೇಲೆ ಕಥೆ ಬೇಡವೇ ? 

೩. ಕಥೆಯನ್ನು ಕೇಳದ, ಹೇಳದವರು ಬಹುಷಃ ಯಾರು ಇರಲಾರರು . ಅನೇಕ ವಿಷಯಗಳನ್ನು , ಕಣ್ಣಿಗೆ ಕಟ್ಟುವಂತೆ ಮನ ಮುಟ್ಟುವಂತೆ ಹೇಳುವುದೇ ಕಥೆಯ ವಿಶಷತೆ . ಇಂದು ಅಂತಹದ್ದೇ ಒಂದು ಕಥೆಯನ್ನು ನಮ್ಮ ಮುಂದೆ ಹೇಳಲು ಬರುತ್ತಿದೆ , ರಿತ್ವಿಕ್ . ಇವರು "A tale of two frogs" ಕಥೆಯನ್ನು ನಮಗೆ ಹೇಳಲಿದ್ದಾರೆ . ಈಗ ಎಲ್ಲರು ಆಲಿಸೋಣ . 

 " ಕಥೆ ತುಂಬ ಸೊಗಸಾಗಿತ್ತು ರಿತ್ವಿಕ್ . ಧನ್ಯವಾದಗಳು ". 

೪. ಮುಂದಿನ ಪ್ರಸ್ತುತಿ , ಸುಧನ್ವ ಅವರಿಂದ. ಸಂಗೀತವನ್ನು ಹತ್ತಾರು ರೀತಿಯಲ್ಲಿ  ಆಹ್ವಾದಿಸಬಹುದು  . ಅದು ಹಾಡುಗಾರಿಕೆ ಆಗಿರಬಹುದು ಅಥವಾ ವಾದ್ಯ ಸಂಗೀತ. ಇಂದು ಸುಧನ್ವ ಮಕ್ಕಳೆಲ್ಲರಿಗೂ ಅಂತ್ಯಂತ ಪ್ರಿಯವೆಂದ ಎರಡು ಚಲನಚಿತ್ರ " The chronicles of Narnia" ಮತ್ತು "Penguins of madagaskar" ದ  ಹಾಡುಗಳನ್ನು ತನ್ನ  ಕೀಬೋರ್ಡ್ನಲ್ಲಿ ನುಡಿಸಿ ನಮನ್ನು ಮನೋರಂಜಿಸಲಿದ್ದಾರೆ . 


ಈ ವರ್ಷದ ನಾಮ್ಮ "ASP"  ಕುಟುಂಬದ ರಾಜ್ಯೋತ್ಸವ ಆಚರಣೆ ಸ್ವಲ್ಪ ವಿಶೇಷ . ಏಕೆಂದರೆ ಮೊಟ್ಟಮೊದಲ ಬಾರಿಗೆ ನಮ್ಮ "ASP " ಆವರಣದಲ್ಲಿ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು .  " ASP" ಸಂಘದ ವತಿಯಿಂದ ನಡೆದ ಈ " ಕ್ರೀಡೋತ್ಸವ" ದಲ್ಲಿ ಭಾಗವಹಿಸಿದ ಎಲ್ಲರಿಗು ಅಭಿನಂದನೆಗಳು .  

ಒಂದು ಕಾರ್ಯಕ್ರಮವನ್ನು ಯೋಚಿಸಿ ಅದನನ್ನು ಕಾರ್ಯಗತ ಮಾಡುವುದು ಸುಲಭದ ಮಾತಲ್ಲ . ಅದರಲ್ಲೂ ಮೂರು ರೀತಿಯ ಪಂದ್ಯಗಳ್ಳನ್ನು , ಮಕ್ಕಳಿಗೆ ಮತ್ತು ವಯಸ್ಕರಿಗೆ  ಪ್ರತ್ಯೇಕವ್ವಾಗಿ  ನಡೆಸಿ  , ಈ ವರ್ಷದ ಕ್ರೀಡೋತ್ಸವವನ್ನು ಅತ್ಯಂತ ಯಶ್ವಿಯಾಗಿ ನಡೆಸಿದ ರೂವಾರಿಗಳು , ಸಂಚಾಲಕರು ಆದ ಶ್ರೀಯುತ । ರವಿ ಕಿರಣ್ ಹಾಗು ಉಮೇಶ ಪಾಟೀಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು . 

ಮೊದಲಿಗೆ  ವಯಸ್ಕರಿಗೆ ಗೆ ನಡೆದ ವಿವಿಧ ಕ್ರೀಡಾಕೊಟಗಳ್ಲಲಿ ಗೆದ್ದವರಿಗೆ ಬಹುಮಾನ ವಿತರಣೆ . 


೫. ಈಗ ಮೊಬೈಲ್ ನ ಅತಿಯಾದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಒಂದು ಸಣ್ಣ ನಾಟಕ ನಮ್ಮ " ASP" ಮಕ್ಕಳಿಂದ  
      


೬. ಅಗಸ್ತ್ಯ ಇಂದ ಕೀಬೋರ್ಡ್'


೭.  ಈಗ ಶ್ರೀನಿವಾಸ ವೀರವಳ್ಳಿ ಅವರಿಂದ ಗಾಯನ. 

೮.  ಮಾತು ಮನುಷ್ಯನಿಗೆ ಎಷ್ಟು ಮುಖ್ಯವೋ ಅದನ್ನು ಸಂಧರ್ಭಕ್ಕೆ ತಕ್ಕ ಹಾಗೆ ಆಡುವುದು ಅಷ್ಟೇ ಮುಖ್ಯ . ಆಡುವ ಮಾತಿನ ವೈಖರಿ , ದಾಟಿ ಸಮಯಕ್ಕೆ ತಕ್ಕ ಹಾಗೆ ಇರಬೇಕು . ಈ ಸಂದೇಶವನ್ನು ಈಗ ನಮ್ಮ ಮುಂದೆ "ಏಕಪಾತ್ರಾಭಿನಯ" ಮೂಲಕ ಪ್ರಸ್ತುತ ಪಡಿಸುವವರು ಸುಧನ್ವ ರ್ . 

ಈಗ "ASP" ಕ್ರೀಡೋತ್ಸವದಲ್ಲಿ ಮಕ್ಕಳಿಗಾಗಿ ನಡೆದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ . 


ಆಟ ಎಂದ ಮೇಲೆ ಸೋಲು , ಗೆಲುವು ಎರಡು ಇದೆ . ಮಕ್ಕಳಿಗೆ ಪಾಠ ಎಷ್ಟು ಮುಖ್ಯವೋ ಆಟ ಕೂಡ ಅಷ್ಟೇ ಮುಖ್ಯ . ಮಕ್ಕಳಲ್ಲಿ ಕ್ರೀಡಾಮನೋಭಾವನೆ ಆತ್ಮಸ್ತ್ಯ್ರ್ಯವನ್ನು , ವಿದೇಯತೆನ್ನು , ಛಲವನ್ನು ತುಂಬುತ್ತದೆ . ಇದನ್ನು ಅರಿತು , ಕ್ರೀಡೋತ್ಸವನ್ನು ನಡೆಸಿದ "ASP" ಸಂಘಕ್ಕೆ ನಮ್ಮ ಧನ್ಯವಾದಗಳು . ಈ ಕಾರ್ಯಕ್ರಮಕ್ಕೆ ತಮ್ಮ ಮಕ್ಕಳನ್ನು ಕಳಿಸಿ ಅವರನ್ನು ಹುರಿದುಂಬಿಸಿದ ಪೋಷಕರಿಗೂ ಅನಂತ ನಮನಗಳು . 

ಎಲ್ಲ ರೀತಿಯ ಅದೇ ತಡೆಗಳ್ಳನ್ನು ನೀಗಿಸಿಕೊಂಡು ವಯಸ್ಸಿನ ಮಿತಿ ನೋಡದೆ ಎಲ್ಲ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತ , ಎಲ್ಲರಿಗು ತಮ್ಮ ಕುಶಲತೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟ ರವಿಕಿರಣ್ ಮತ್ತು ಉಮೇಶ್ಅವ್ರ್ಗೆ ಮತ್ತೆ ಧನ್ಯವಾದಗಳು . 

೯.  Dr. ರಾಜಕುಮಾರ್ ಕನ್ನಡಿಗರೆಲ್ಲರಿಗೂ ಚಿರಪರಿಚಿತ . ಕನ್ನಡ ಭಾಷೆಗೆ ಅವರ ಕೊಡುಗೆ ಅಪಾರ. ರಾಜ್ಯೋತ್ಸವದಲ್ಲಿ ಅವರು ಕನ್ನಡ ದ ಬಗ್ಗೆ ಹಾಡಿರುವ ಗೀತೆಯನ್ನು ಇಂದು ನಮಗೆ ಹಾಡಿ ಕೇಳಿಸಲಿದ್ದಾರೆ Dr. ಶಮಂಬುಲಿಂಗಯ್ಯ ನವರು . " ಜೇನಿನ ಹೊಳೆಯೋ ಹಾಲಿನ ಮಳೆಯೋ "


೧೦. ಮೂರು ಹಾಡುಗಳು (ಶ್ರುತಿ , ಸ್ವರ್ಣ , ವೃಂದ ಗಾಯನ)

೧೧. ಸಮೂಹ ನೃತ್ಯ . ಪ್ರಸ್ತುತಿ : 

                      ಸಿಂಧು ಚಿಂಚೋಳಿ , ಪ್ರತಿಭಾ ಸುಮಂತ್, ನಾಗಶ್ರೀ, Dr. ದಿವ್ಯ , ಅಶ್ವಿನಿ ಪ್ರಕಾಶ್ .. 


೧೨. ವಂದನಾರ್ಪಣೆ . 

೧೩. ನಾಡಗೀತೆ