ಮನುಷ್ಯನ ದೇಹ ಪಂಚಭೂತಗಳಿಂದಾದ್ದು . ಮನುಷ್ಯನ ಮನಸ್ಸು ಗುಣಗಳಿಂದ ನಿಯಂತ್ರಿಸಲ್ಪಡುತ್ತದೆ . ಮಾನವನ ಶಕ್ತಿ ಮೂರು ಗುಣಗಳಲ್ಲಿ ಹಂಚಿಹೊಗಿವೆ .ತಮಸ್ಸು , ರಜಸ್ಸು ಮತ್ತು ಸಾತ್ವಿಕ ಎಂಬುದೇ ಈ ಮೂರು ಗುಣಧರ್ಮಗಳು . ಹಿಂದೂ ಸಂಸ್ಕೃತಿಯ ದೇವರುಗಳಾದ , ,ಬ್ರಹ್ಮ ,ವಿಷ್ಣು ,ಮಹೇಶ್ವರರು ವಿಭಿನ್ನ ಗುಣಗಳ ಸ್ವರೂಪ . ಬ್ರಹ್ಮನು ರಜೋ ಗುಣದ ವಿಷ್ಣು ಸಾತ್ವಿಕ ಗುಣದ ಮತ್ತು ಶಿವನು ಎಲ್ಲ ಗುಣಗಳ ಪ್ರತಿರೂಪ . ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಈ ಮೂರು ಗುಣಗಳು ಪ್ರಭಾವ ಬೀರುತ್ತವೆ . ತಮೋ ಗುಣ ಜಡತ್ವದ , ರಜೋ ಗುಣ ಶಕ್ತಿ, ತೀವ್ರತೆಯಾ ಹಾಗು ಸಾತ್ವಿಕ ಗುಣ ಬೆಳಕಿನ , ಪರಿಶುದ್ದತೆಯ ಸಂಕೇತ .ಭೂಮಿಯ ಮೇಲಿರುವ ಎಲ್ಲ ವಸ್ತುಗಳು ,ಜೀವಿಗಳನ್ನು ಈ ಮೂರು ಗುಣದ ಆದರದ ಮೇಲೆಯೂ ವಿಂಗಡಿಸಬಹುದು
ಅಂಧಕಾರ ಕತ್ತಲೆಯ ಪ್ರತಿರೂಪವಾದ ತಮಸ್ಸು ಮಾಯೆ,ಉದಾಸೀನತೆ , ವಿನಾಶ, ಸಾವು, ಜಡತ್ವ, ಆಲಸ್ಯವನ್ನು ಪ್ರೋತ್ಸಾಹಿಸುವ ಶಕ್ತಿ . ಪ್ರಪಂಚದ ಸೃಷ್ಟಿಯಲ್ಲಿ ತಮಸ್ಸು ರಾಕ್ಷಸೀ ಗುಣ . ರಾಕ್ಷಸರಲ್ಲಿ ಮನೆಮಾಡಿರುವ ಗುಣ . ತಮೋಗುಣ ಹೆಚ್ಚಾದಂತೆಲ್ಲ ಮನುಷ್ಯ ತನ್ನ ದಿನಗಳ ಹೆಚ್ಚಿನ ಸಮಯ ನಿದ್ದೆ ಯಲ್ಲಿ ಕಳೆಯುತ್ತಾನೆ , ಕೆಲಸದ ಮೇಲಿನ ಅವನ ಶ್ರದ್ದೆ , ಆಸಕ್ತಿ ಕಡಿಮೆ ಆಗುತ್ತದೆ . ಈ ರೀತಿಯ ಅನುಭುವ ಪ್ರತಿಯೊಬ್ಬರಿಗೆ ಕೆಲವೊಮ್ಮೆ , ಕೆಲವೊಂದು ದಿನ ಆಗಬಹುದು . ಆದರೆ ಈ ಆಲಸ್ಯ ಪ್ರತಿದಿನದ ಮಾತಾಗುವುದು ಒಳ್ಳೆಯ ಲಕ್ಷಣವಲ್ಲ . ಹೆಚ್ಚಿನ ತಾಮಸಕ್ಕೆ ಶರಣಾದ ವ್ಯಕ್ತಿ , ತನ್ನ ಕೆಲಸಗಳನ್ನು ಪ್ರತಿ ದಿನ ಮುಂದೂಡುತ್ತಾ ಬರುತ್ತಾನೆ ಇದರಿಂದ ಅಪಜಯ ಅವನದಾಗುತ್ತದೆ , ಖಿನ್ನತೆಗೆ ಒಳಗಾಗುತ್ತಾನೆ , ತನ್ನನ್ನು ತಾನೆ ಹಳಿಯುತ್ತಾ ಆತ್ಮಹತ್ಯೆಗೆ ಶರಣಾಗುತ್ತಾನೆ . ಅರಿವಿಗೆ ಬರದಂತೆಯೇ , ತಮೋಗುಣ ಅವನ ಸುಂದರ ಜೀವನವನ್ನು ಕಬಳಿಸುತ್ತದೆ . ಎಲ್ಲೆ ಮೀರಿದ ,ತಮೋ ಗುಣವನ್ನು ಯಾವುದೇ ಆಯುಧದಿಂದ ದಂಡಿಸಲು ಸಾಧ್ಯವಿಲ್ಲ , ಇದರ ನಿಗ್ರಹಕ್ಕೆ ಇರುವ ಒಂದೇ ಮಾರ್ಗ ಸುಪ್ತವಾಗಿರುವ ಸಾತ್ವಿಕ ಗುಣವನ್ನು ಹೆಚ್ಚಿಸಿಕೊಳ್ಳುವುದು .
ಇನ್ನು ಚುರುಕುತನದ ಪ್ರತೀಕವಾದ ರಜೋ ಗುಣ ಉಳಿದೆರಡು ಗುಣಗಳನ್ನು ಬೆಂಬಲಿಸುವನ್ತದ್ದು . ಅತಿ ಹೆಚ್ಚು ಚುರುಕುತನ,ಉತ್ಸುಕತೆ ಮತ್ತು ಭಾವೋದ್ವೇಗ ರಜೋ ಗುಣದ ಮುಖ್ಯ ಲಕ್ಷಣಗಳು . ರಜೋ ಗುಣ ತಮಸ್ಸಿಗಿಂತ ಧನಾತಮ್ಕ ಸಾತ್ವಿಕಕಿಂತ ಋಣಾತ್ಮಕ . ನಾವು ನೋಡಿರಬಹುದು ಕೆಲವು ವ್ಯಕ್ತಿಗಳು , ಒಂದು ಕ್ಷಣಕ್ಕಾದರೂ ಒಂದು ಕಡೆ ಸ್ಥಿರವಾಗಿ ನಿಲ್ಲಲಾರರು , ಅವರ ಮನಸ್ಸು ಯಾವಾಗಲು , ನೂರಾರು ಯೋಚನೆ, ಯೋಜನೆ, ಆಲೋಚನೆಗಳ ಮಳೆಯಲ್ಲಿ ತೊಳಲಾಡುತಿರುತ್ತದೆ .ಇದು ಇನ್ನು ಮಿತಿಮೀರಿ ಗೊಂದಲಕ್ಕೆ ಒಳಗಾಗುತ್ತಾರೆ . ಮನದೊಳಗಿನ ಗೊಂದಲಗಳು ,ಮುಂಗೊಪಿತನ ,ಆಕ್ರಮಣ ರೂಪತಾಳಿ, ಕ್ರೌರ್ಯಕ್ಕೆ ತಿರುಗತ್ತದೆ . ಜೀವನದಲ್ಲಿ ಎಲ್ಲವನ್ನು ಸಾಧಿಸುವ ಶಕ್ತಿ ಇವರುಗಳಿಗೆ ಇದ್ದರು ಮಿತಿಮೀರಿದ ರಜೋ ಗುಣದ ಪ್ರಭಾವದಿಂದ ಜೀವನ ವ್ಯರ್ಥವಾಗುತ್ತದೆ .
ಅಪರೂಪವಾದ ಗುಣ , ಸತ್ವ ಗುಣ.ಸತ್ವ ಗುಣದಿಂದ ಕೂಡಿದ ವಸ್ತು , ವ್ಯಕ್ತಿ ತನ್ನ ಬಾಹ್ಯ ಮತ್ತು ಅಂತರಿಕ ಜಗತ್ತನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾನೆ . ಸಾತ್ವಿಕತೆಯನ್ನು ಮೈಗೂದಿಡಿಕೊಂಡ ವ್ಯಕ್ತಿ ತನ್ನ ಸುತ್ತಮುತ್ತಲಿನ, ಜನ , ಪರಿಸರವನ್ನು ಸದಾ, ಒಳ್ಳೆಯ ರೀತಿಯಲ್ಲಿ ಕಾಣುತ್ತಾನೆ . ಹೂವು , ಹಣ್ಣು , ದೇವರಿಗೆ ಸಮರ್ಪಿಸುವ ನೈವೇದ್ಯ ಎಲ್ಲ ಸಾತ್ವಿಕತೆಯ ರೂಪಗಳು . ಒಂದು ಸುಂದರವಾದ , ಹೂವನ್ನು ಕಂಡಾಗ ನಮ್ಮ ಮನಸಿನಲ್ಲಿ ಉಂಟಾಗುಗುವ ಆಹ್ಲಾದತೆಯ ಅನುಭವವೇ ಸಾತ್ವಿಕ ಗುಣ. ಸಾತ್ವಿಕ ಮನಸ್ಸು ಸದಾ ಪ್ರಶಾಂತ , ಸ್ಥಿರ ,ಸುಖಪ್ರದ .ಸಾತ್ವಿಕ ವ್ಯಕ್ತಿಗಳು ಸದಾ ಪ್ರಪಂಚದ , ಒಳಿತಿಗಾಗಿ ಚಿಂತಿಸುವವರು , ಅದಕ್ಕಾಗಿ ದುಡಿಯವವರು, . ಅವರ ಆಹಾರ,ಉಡುಗೆ ತೊಡುಗೆ ಮಾತು ಎಲ್ಲ ಹಿತ ಮಿತವಾದದ್ದು . ವಿಚಾರ ಮೆಲುಸ್ತರದ್ದು . ತುಳಸಿದಾಸರು, ತ್ಯಾಗರಾಜರು, ರಮಣ ಮಹರ್ಷಿಗಳು, ಪರಮಹಂಸರು, ಸ್ವಾಮಿ ವಿವೇಕಾನಂದರು ಇವರೆಲ್ಲ ಸಾತ್ವಿಕ ಗುಣಕ್ಕೆ ಇನ್ನೊಂದು ಹೆಸರು . ಎಲ್ಲದರಲ್ಲೂ ಸುಂದರತೆಯನ್ನು,ಸತ್ಯತೆಯನ್ನು ಕಾಣುವ, ಕಿಚ್ಚು ದ್ವೇಷ ,ಅಸೂಯೆಗಳಿಂದ ವಿಚಲಿತರಾಗದವರೆ ಸಾತ್ವಿಕ ಪುರುಷರು .
ಮೂರು ಗುಣಗಳಲ್ಲಿ ಒಂದು ಗುಣವನ್ನು ಒಳ್ಳೆಯದು,ಇನ್ನೊಂದನ್ನು ಕೆಟ್ಟದ್ದು ಎಂದು ವಿಂಗಡಿಸಿ ಭೆರ್ಪಡಿಸಲು ಸಾಧ್ಯವಿಲ್ಲ . ತಮಸ್ಸು ಇಲದೆ ನಿದ್ರೆ ಇಲ್ಲ , ರಜಸ್ಸು ಇಲ್ಲದೆ ಚಟುವಟಿಕೆ ಇಲ್ಲ.ಸಾತ್ವಿಕ ಗುಣ ಮೆಲುಸ್ತರದ್ದು , ಅದನ್ನು ಹೆಚ್ಚಿಸಿ, ಉಳಿದೆರಡು ಗುಣಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು .ಸಾತ್ವಿಕತೆ ಹೆಚ್ಚಿ,ತಮೋ ರಜೋ ಗುಣಗಳು ಸಮತೊಲನದಲ್ಲಿದ್ದಾಗ, ಮನಸ್ಸು ಪ್ರಫುಲ್ಲ, ಸ್ಥಿರ. ಆತ್ಮ ಆಹ್ಲಾದಮಯ ,ಜೀವನ ಸಾರ್ಥಕ .
ಇನ್ನು ಚುರುಕುತನದ ಪ್ರತೀಕವಾದ ರಜೋ ಗುಣ ಉಳಿದೆರಡು ಗುಣಗಳನ್ನು ಬೆಂಬಲಿಸುವನ್ತದ್ದು . ಅತಿ ಹೆಚ್ಚು ಚುರುಕುತನ,ಉತ್ಸುಕತೆ ಮತ್ತು ಭಾವೋದ್ವೇಗ ರಜೋ ಗುಣದ ಮುಖ್ಯ ಲಕ್ಷಣಗಳು . ರಜೋ ಗುಣ ತಮಸ್ಸಿಗಿಂತ ಧನಾತಮ್ಕ ಸಾತ್ವಿಕಕಿಂತ ಋಣಾತ್ಮಕ . ನಾವು ನೋಡಿರಬಹುದು ಕೆಲವು ವ್ಯಕ್ತಿಗಳು , ಒಂದು ಕ್ಷಣಕ್ಕಾದರೂ ಒಂದು ಕಡೆ ಸ್ಥಿರವಾಗಿ ನಿಲ್ಲಲಾರರು , ಅವರ ಮನಸ್ಸು ಯಾವಾಗಲು , ನೂರಾರು ಯೋಚನೆ, ಯೋಜನೆ, ಆಲೋಚನೆಗಳ ಮಳೆಯಲ್ಲಿ ತೊಳಲಾಡುತಿರುತ್ತದೆ .ಇದು ಇನ್ನು ಮಿತಿಮೀರಿ ಗೊಂದಲಕ್ಕೆ ಒಳಗಾಗುತ್ತಾರೆ . ಮನದೊಳಗಿನ ಗೊಂದಲಗಳು ,ಮುಂಗೊಪಿತನ ,ಆಕ್ರಮಣ ರೂಪತಾಳಿ, ಕ್ರೌರ್ಯಕ್ಕೆ ತಿರುಗತ್ತದೆ . ಜೀವನದಲ್ಲಿ ಎಲ್ಲವನ್ನು ಸಾಧಿಸುವ ಶಕ್ತಿ ಇವರುಗಳಿಗೆ ಇದ್ದರು ಮಿತಿಮೀರಿದ ರಜೋ ಗುಣದ ಪ್ರಭಾವದಿಂದ ಜೀವನ ವ್ಯರ್ಥವಾಗುತ್ತದೆ .
ಅಪರೂಪವಾದ ಗುಣ , ಸತ್ವ ಗುಣ.ಸತ್ವ ಗುಣದಿಂದ ಕೂಡಿದ ವಸ್ತು , ವ್ಯಕ್ತಿ ತನ್ನ ಬಾಹ್ಯ ಮತ್ತು ಅಂತರಿಕ ಜಗತ್ತನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾನೆ . ಸಾತ್ವಿಕತೆಯನ್ನು ಮೈಗೂದಿಡಿಕೊಂಡ ವ್ಯಕ್ತಿ ತನ್ನ ಸುತ್ತಮುತ್ತಲಿನ, ಜನ , ಪರಿಸರವನ್ನು ಸದಾ, ಒಳ್ಳೆಯ ರೀತಿಯಲ್ಲಿ ಕಾಣುತ್ತಾನೆ . ಹೂವು , ಹಣ್ಣು , ದೇವರಿಗೆ ಸಮರ್ಪಿಸುವ ನೈವೇದ್ಯ ಎಲ್ಲ ಸಾತ್ವಿಕತೆಯ ರೂಪಗಳು . ಒಂದು ಸುಂದರವಾದ , ಹೂವನ್ನು ಕಂಡಾಗ ನಮ್ಮ ಮನಸಿನಲ್ಲಿ ಉಂಟಾಗುಗುವ ಆಹ್ಲಾದತೆಯ ಅನುಭವವೇ ಸಾತ್ವಿಕ ಗುಣ. ಸಾತ್ವಿಕ ಮನಸ್ಸು ಸದಾ ಪ್ರಶಾಂತ , ಸ್ಥಿರ ,ಸುಖಪ್ರದ .ಸಾತ್ವಿಕ ವ್ಯಕ್ತಿಗಳು ಸದಾ ಪ್ರಪಂಚದ , ಒಳಿತಿಗಾಗಿ ಚಿಂತಿಸುವವರು , ಅದಕ್ಕಾಗಿ ದುಡಿಯವವರು, . ಅವರ ಆಹಾರ,ಉಡುಗೆ ತೊಡುಗೆ ಮಾತು ಎಲ್ಲ ಹಿತ ಮಿತವಾದದ್ದು . ವಿಚಾರ ಮೆಲುಸ್ತರದ್ದು . ತುಳಸಿದಾಸರು, ತ್ಯಾಗರಾಜರು, ರಮಣ ಮಹರ್ಷಿಗಳು, ಪರಮಹಂಸರು, ಸ್ವಾಮಿ ವಿವೇಕಾನಂದರು ಇವರೆಲ್ಲ ಸಾತ್ವಿಕ ಗುಣಕ್ಕೆ ಇನ್ನೊಂದು ಹೆಸರು . ಎಲ್ಲದರಲ್ಲೂ ಸುಂದರತೆಯನ್ನು,ಸತ್ಯತೆಯನ್ನು ಕಾಣುವ, ಕಿಚ್ಚು ದ್ವೇಷ ,ಅಸೂಯೆಗಳಿಂದ ವಿಚಲಿತರಾಗದವರೆ ಸಾತ್ವಿಕ ಪುರುಷರು .
ಮೂರು ಗುಣಗಳಲ್ಲಿ ಒಂದು ಗುಣವನ್ನು ಒಳ್ಳೆಯದು,ಇನ್ನೊಂದನ್ನು ಕೆಟ್ಟದ್ದು ಎಂದು ವಿಂಗಡಿಸಿ ಭೆರ್ಪಡಿಸಲು ಸಾಧ್ಯವಿಲ್ಲ . ತಮಸ್ಸು ಇಲದೆ ನಿದ್ರೆ ಇಲ್ಲ , ರಜಸ್ಸು ಇಲ್ಲದೆ ಚಟುವಟಿಕೆ ಇಲ್ಲ.ಸಾತ್ವಿಕ ಗುಣ ಮೆಲುಸ್ತರದ್ದು , ಅದನ್ನು ಹೆಚ್ಚಿಸಿ, ಉಳಿದೆರಡು ಗುಣಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು .ಸಾತ್ವಿಕತೆ ಹೆಚ್ಚಿ,ತಮೋ ರಜೋ ಗುಣಗಳು ಸಮತೊಲನದಲ್ಲಿದ್ದಾಗ, ಮನಸ್ಸು ಪ್ರಫುಲ್ಲ, ಸ್ಥಿರ. ಆತ್ಮ ಆಹ್ಲಾದಮಯ ,ಜೀವನ ಸಾರ್ಥಕ .