ಶುಕ್ರವಾರ, ನವೆಂಬರ್ 25, 2022

Kannada rajyotsava

ಎಲ್ಲರಿಗು ನಮಸ್ಕಾರ . ಶುಭಸಂಜೆ . 

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು? 

ಮಹಾಲಿಂಗರಂಗ ರ ಈ ಸಾಲುಗಳನ್ನು ನೆನೆಯುತ್ತಾ , ಎಲ್ಲರಿಗು ೬೬ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತ ಇಂದಿನ ಕಾರ್ಯಕ್ರಮವನ್ನು ಪ್ರಾರಂಭಿಸೋಣ 

ಜ್ಞಾನ  ಅಜ್ಞಾನವ  ಕಳೆವಂತೆ , ದೀಪ ಕತ್ತಲೆಯನ್ನು ಕಳೆಯುತ್ತದೆ . ದೀಪವನ್ನು ಬೆಳೆಗಿಸಿ , ಕಾರ್ಯಕ್ರಮವನ್ನು ಶುಭಾರಂಭ ಮಾಡುವುದು ನಮ್ಮ ಸಂಸ್ಕೃತಿ , ಆಚರಣೆ . ಅದರಲ್ಲೂ ಹಚ್ಚ್ಚುವ ಆ ದೀಪ ಕನ್ನಡದ್ದಾದರೆ ಅದರ ಬೆಳಕು, ಮೆರುಗು ಇನ್ನು ಹೆಚ್ಚು . 

ಹಚ್ಚೇವು ಕನ್ನಡದ ದೀಪ , ನಮ್ಮೆಲರ ನೆಚ್ಚಿನ ಕವಿ ಡಿ . ಎಸ್ ಕರ್ಕಿ ಅವರು ಬರಿದಿರುವ ಪದ್ಯ . ಇಂದಿನ ಕನ್ನಡದ ಬಗೆಗಿನ ಕಾರ್ಯಕ್ರಮದಲ್ಲಿ ಇದಕ್ಕೆ ಮಿಗಿಲಾದ ಪ್ರಾಥನೆ ಗೀತೆ ಇರಲಾರದು .

ಈಗ ಈ ಗೀತೆಯನ್ನು ನಮ್ಮ ಮುಂದೆ ಪ್ರಸ್ತುತ ಪಡಿಸುವವರು ನಮ್ಮವರೇ ಆದ  "ASP ladies group". 


ಈಗ ಸಮಾರಂಭ ಕಳೆ  ಕಟ್ಟಿತ್ತು . ತುಂಬು ಹೃದಯದ ಧನ್ಯವಾದಗಳು .

ನವೆಂಬರ ಕನ್ನಡ ರಜೋತ್ಸವದ ಸಂಭ್ರಮದ ತಿಂಗಳು . ಎಲ್ಲೆಲ್ಲೂ ಕನ್ನಡ ಬಾವುಟ , ಕನ್ನಡ ಗೀತೆಗಳು , ಸಭೆ ಸಮಾರಂಭಗಳು. ಇಂದು ನಾವೆಲ್ಲಾ ಇಲ್ಲಿ ಸೇರಿರುವುದು ಇದೆ ಉದ್ದೇಶಕ್ಕಾಗಿ . ಸಂಭ್ರಮದಾಚಾರಣೆ ಎಂದಾಗ , "ASP" ಕುಟುಂಬ ಯಾರಿಗೂ ಏನು ಕಡಿಮೆ ಇಲ್ಲ . ಎಲ್ಲ ವಿಶೇಷ ದಿನಗಳಂತೆ , ಇಂದು ಕೂಡ ನಮ್ಮ ಚಿಣ್ಣರು , ಕುಟುಂಬದ ಸದಸ್ಯರು ಅನೇಕ  ವಿಭಿನ್ನ ಕಾರ್ಯಕ್ರಮಗಳೊಂದಿಗೆ ತಯಾರಾಗಿದ್ದಾರೆ . ಇನ್ನು ಹೆಚ್ಚು ತಡಮಾಡದೆ ಕಾರ್ಯಕ್ರಮಕ್ಕೆ ಶುರು ಮಾಡೋಣ . 

ಈಗ ನಿಮ್ಮೆಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಲು ಬರುತಿದ್ದಾರೆ  ನಮ್ಮ "ASP"  ಸಂಘದ ಅಧ್ಯಕ್ಷರಾದಂತಹ ಶ್ರೀಮತಿ , ಪ್ರತಿಭಾ ರಮೇಶ ರವರು 

ತುಂಬ ಧನ್ಯವಾದಗಳು . 



೧. ಕನ್ನಡ ಹಾಡು ಕೇಳಿದರೆ ನಮ್ಗೆಲ್ಲಾ ಕುಣಿ ಬೇಕು ಅನ್ನಿಸುತ್ತೆ . ಅಂತಹದ್ದೇ ಒಂದು ಅಧ್ಭುತ ಹಾಡು " ಕರುನಾಡೇ ಕೈ ಚಾಚಿದೆ ನೋಡೇ " . ಇಂದು ಈ ಹಾಡಿಗೆ ನೃತ್ಯ ಮಾಡಿ ನಮ್ಮನೆಲ್ಲ ರಂಜಿಸಲು ಬರುತ್ತಿದ್ದಾಳೆ , ಪುಟಾಣಿ । ಖುಷಿ . 

೨. ಸಂಗೀತಕ್ಕೆ  ಯಾವುದೇ  ದೇಶ ,ಭಾಷೆಗಳೆಂಬ ಕಟ್ಟಿಲ್ಲ . ಅದು ಎಲ್ಲವನ್ನು ಮೀರಿದ್ದು . ಸುಮಧುರವಾದ ಹಾಡು ಯಾವ ಭಾಷೆಯಲ್ಲಿ ಇದ್ದರು , ಅದು ನಮ್ಮ ಕಿವಿಗೆ ಹಿತವನ್ನು ಮತ್ತು ಮನಸ್ಸಿಗೆ ಆಹ್ಲಾದತೆಯನ್ನು ಕೊಡುತ್ತದೆ . ಈಗ ಇಂತಹದ್ದೇ ಒಂದು ಸುಂದರ ಗೀತೆಯನ್ನು ನಮ್ಮ ಮುಂದೆ ಹಾಡಲಿರುವ ಪ್ರತಿಭೆ ಪುಟಾಣಿ । ಸಗಸ್ರ . 


 " ನೃತ್ಯ ಆಯಿತು , ಹಾಡು ಆಯಿತು ಮುಂದೆ ಏನು ? . ಹಾಡು ನೃತ್ಯ ಆದ ಮೇಲೆ ಕಥೆ ಬೇಡವೇ ? 

೩. ಕಥೆಯನ್ನು ಕೇಳದ, ಹೇಳದವರು ಬಹುಷಃ ಯಾರು ಇರಲಾರರು . ಅನೇಕ ವಿಷಯಗಳನ್ನು , ಕಣ್ಣಿಗೆ ಕಟ್ಟುವಂತೆ ಮನ ಮುಟ್ಟುವಂತೆ ಹೇಳುವುದೇ ಕಥೆಯ ವಿಶಷತೆ . ಇಂದು ಅಂತಹದ್ದೇ ಒಂದು ಕಥೆಯನ್ನು ನಮ್ಮ ಮುಂದೆ ಹೇಳಲು ಬರುತ್ತಿದೆ , ರಿತ್ವಿಕ್ . ಇವರು "A tale of two frogs" ಕಥೆಯನ್ನು ನಮಗೆ ಹೇಳಲಿದ್ದಾರೆ . ಈಗ ಎಲ್ಲರು ಆಲಿಸೋಣ . 

 " ಕಥೆ ತುಂಬ ಸೊಗಸಾಗಿತ್ತು ರಿತ್ವಿಕ್ . ಧನ್ಯವಾದಗಳು ". 

೪. ಮುಂದಿನ ಪ್ರಸ್ತುತಿ , ಸುಧನ್ವ ಅವರಿಂದ. ಸಂಗೀತವನ್ನು ಹತ್ತಾರು ರೀತಿಯಲ್ಲಿ  ಆಹ್ವಾದಿಸಬಹುದು  . ಅದು ಹಾಡುಗಾರಿಕೆ ಆಗಿರಬಹುದು ಅಥವಾ ವಾದ್ಯ ಸಂಗೀತ. ಇಂದು ಸುಧನ್ವ ಮಕ್ಕಳೆಲ್ಲರಿಗೂ ಅಂತ್ಯಂತ ಪ್ರಿಯವೆಂದ ಎರಡು ಚಲನಚಿತ್ರ " The chronicles of Narnia" ಮತ್ತು "Penguins of madagaskar" ದ  ಹಾಡುಗಳನ್ನು ತನ್ನ  ಕೀಬೋರ್ಡ್ನಲ್ಲಿ ನುಡಿಸಿ ನಮನ್ನು ಮನೋರಂಜಿಸಲಿದ್ದಾರೆ . 


ಈ ವರ್ಷದ ನಾಮ್ಮ "ASP"  ಕುಟುಂಬದ ರಾಜ್ಯೋತ್ಸವ ಆಚರಣೆ ಸ್ವಲ್ಪ ವಿಶೇಷ . ಏಕೆಂದರೆ ಮೊಟ್ಟಮೊದಲ ಬಾರಿಗೆ ನಮ್ಮ "ASP " ಆವರಣದಲ್ಲಿ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು .  " ASP" ಸಂಘದ ವತಿಯಿಂದ ನಡೆದ ಈ " ಕ್ರೀಡೋತ್ಸವ" ದಲ್ಲಿ ಭಾಗವಹಿಸಿದ ಎಲ್ಲರಿಗು ಅಭಿನಂದನೆಗಳು .  

ಒಂದು ಕಾರ್ಯಕ್ರಮವನ್ನು ಯೋಚಿಸಿ ಅದನನ್ನು ಕಾರ್ಯಗತ ಮಾಡುವುದು ಸುಲಭದ ಮಾತಲ್ಲ . ಅದರಲ್ಲೂ ಮೂರು ರೀತಿಯ ಪಂದ್ಯಗಳ್ಳನ್ನು , ಮಕ್ಕಳಿಗೆ ಮತ್ತು ವಯಸ್ಕರಿಗೆ  ಪ್ರತ್ಯೇಕವ್ವಾಗಿ  ನಡೆಸಿ  , ಈ ವರ್ಷದ ಕ್ರೀಡೋತ್ಸವವನ್ನು ಅತ್ಯಂತ ಯಶ್ವಿಯಾಗಿ ನಡೆಸಿದ ರೂವಾರಿಗಳು , ಸಂಚಾಲಕರು ಆದ ಶ್ರೀಯುತ । ರವಿ ಕಿರಣ್ ಹಾಗು ಉಮೇಶ ಪಾಟೀಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು . 

ಮೊದಲಿಗೆ  ವಯಸ್ಕರಿಗೆ ಗೆ ನಡೆದ ವಿವಿಧ ಕ್ರೀಡಾಕೊಟಗಳ್ಲಲಿ ಗೆದ್ದವರಿಗೆ ಬಹುಮಾನ ವಿತರಣೆ . 


೫. ಈಗ ಮೊಬೈಲ್ ನ ಅತಿಯಾದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಒಂದು ಸಣ್ಣ ನಾಟಕ ನಮ್ಮ " ASP" ಮಕ್ಕಳಿಂದ  
      


೬. ಅಗಸ್ತ್ಯ ಇಂದ ಕೀಬೋರ್ಡ್'


೭.  ಈಗ ಶ್ರೀನಿವಾಸ ವೀರವಳ್ಳಿ ಅವರಿಂದ ಗಾಯನ. 

೮.  ಮಾತು ಮನುಷ್ಯನಿಗೆ ಎಷ್ಟು ಮುಖ್ಯವೋ ಅದನ್ನು ಸಂಧರ್ಭಕ್ಕೆ ತಕ್ಕ ಹಾಗೆ ಆಡುವುದು ಅಷ್ಟೇ ಮುಖ್ಯ . ಆಡುವ ಮಾತಿನ ವೈಖರಿ , ದಾಟಿ ಸಮಯಕ್ಕೆ ತಕ್ಕ ಹಾಗೆ ಇರಬೇಕು . ಈ ಸಂದೇಶವನ್ನು ಈಗ ನಮ್ಮ ಮುಂದೆ "ಏಕಪಾತ್ರಾಭಿನಯ" ಮೂಲಕ ಪ್ರಸ್ತುತ ಪಡಿಸುವವರು ಸುಧನ್ವ ರ್ . 

ಈಗ "ASP" ಕ್ರೀಡೋತ್ಸವದಲ್ಲಿ ಮಕ್ಕಳಿಗಾಗಿ ನಡೆದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ . 


ಆಟ ಎಂದ ಮೇಲೆ ಸೋಲು , ಗೆಲುವು ಎರಡು ಇದೆ . ಮಕ್ಕಳಿಗೆ ಪಾಠ ಎಷ್ಟು ಮುಖ್ಯವೋ ಆಟ ಕೂಡ ಅಷ್ಟೇ ಮುಖ್ಯ . ಮಕ್ಕಳಲ್ಲಿ ಕ್ರೀಡಾಮನೋಭಾವನೆ ಆತ್ಮಸ್ತ್ಯ್ರ್ಯವನ್ನು , ವಿದೇಯತೆನ್ನು , ಛಲವನ್ನು ತುಂಬುತ್ತದೆ . ಇದನ್ನು ಅರಿತು , ಕ್ರೀಡೋತ್ಸವನ್ನು ನಡೆಸಿದ "ASP" ಸಂಘಕ್ಕೆ ನಮ್ಮ ಧನ್ಯವಾದಗಳು . ಈ ಕಾರ್ಯಕ್ರಮಕ್ಕೆ ತಮ್ಮ ಮಕ್ಕಳನ್ನು ಕಳಿಸಿ ಅವರನ್ನು ಹುರಿದುಂಬಿಸಿದ ಪೋಷಕರಿಗೂ ಅನಂತ ನಮನಗಳು . 

ಎಲ್ಲ ರೀತಿಯ ಅದೇ ತಡೆಗಳ್ಳನ್ನು ನೀಗಿಸಿಕೊಂಡು ವಯಸ್ಸಿನ ಮಿತಿ ನೋಡದೆ ಎಲ್ಲ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತ , ಎಲ್ಲರಿಗು ತಮ್ಮ ಕುಶಲತೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟ ರವಿಕಿರಣ್ ಮತ್ತು ಉಮೇಶ್ಅವ್ರ್ಗೆ ಮತ್ತೆ ಧನ್ಯವಾದಗಳು . 

೯.  Dr. ರಾಜಕುಮಾರ್ ಕನ್ನಡಿಗರೆಲ್ಲರಿಗೂ ಚಿರಪರಿಚಿತ . ಕನ್ನಡ ಭಾಷೆಗೆ ಅವರ ಕೊಡುಗೆ ಅಪಾರ. ರಾಜ್ಯೋತ್ಸವದಲ್ಲಿ ಅವರು ಕನ್ನಡ ದ ಬಗ್ಗೆ ಹಾಡಿರುವ ಗೀತೆಯನ್ನು ಇಂದು ನಮಗೆ ಹಾಡಿ ಕೇಳಿಸಲಿದ್ದಾರೆ Dr. ಶಮಂಬುಲಿಂಗಯ್ಯ ನವರು . " ಜೇನಿನ ಹೊಳೆಯೋ ಹಾಲಿನ ಮಳೆಯೋ "


೧೦. ಮೂರು ಹಾಡುಗಳು (ಶ್ರುತಿ , ಸ್ವರ್ಣ , ವೃಂದ ಗಾಯನ)

೧೧. ಸಮೂಹ ನೃತ್ಯ . ಪ್ರಸ್ತುತಿ : 

                      ಸಿಂಧು ಚಿಂಚೋಳಿ , ಪ್ರತಿಭಾ ಸುಮಂತ್, ನಾಗಶ್ರೀ, Dr. ದಿವ್ಯ , ಅಶ್ವಿನಿ ಪ್ರಕಾಶ್ .. 


೧೨. ವಂದನಾರ್ಪಣೆ . 

೧೩. ನಾಡಗೀತೆ 
                    



 

ಸೋಮವಾರ, ಅಕ್ಟೋಬರ್ 24, 2022

ಎಲ್ಲೆಲ್ಲೂ ನೀನೆ   !!!


ಮನೆಯ ಕಿಟಕಿ ಬಾಗಿಲು ತೆರೆಯುವಂತಿಲ್ಲ 

ನೀನು ಒಳಸೇರುವೆ ।।

ಕೈ ಕಾಲು ಮುಖ ತೊಳೆಯುವಂತಿಲ್ಲ 

ಮನೆಯೆಲ್ಲಾ ತಿರುಗುವೆ ।।


ನಿನಗೆ ಬೇಕೆಂದ ಕಡೆ ಹೋಗುವೆ 

ಕಂಡದೆಲ್ಲಾ ತಿನ್ನುವೆ ।।

ಎಲ್ಲೆಂದರಲ್ಲಿ ಕೂರುವೆ , ಎಲ್ಲೆಂದರಲ್ಲಿ ಮಲಗುವೆ 

ಕರ್ಕಷವಾಗಿ ಕೂಗುವೆ ।।


ನಿನ್ನ ಆಯಸ್ಸೇ ಕೆಲವು ದಿನ , ಆದರೆ 

ನಿನ್ನ ಆರ್ಭಟ ಮತ್ತದರ ಪರಿಣಾಮಗಳು 

ಹಲವು ದಿನ ।।


ನೀನು ಹೋದರು , ನಾನು ಖುಷಿಪಡುವಂತಿಲ್ಲ 

ಏಕೆಂದರೆ , ಹೋಗುವ ಮುನ್ನ ನೀ ಖಚಿತವಾಗಿ 

ಸೃಷ್ಟಿಸಿರುವೆ ನಿನ್ನಂತಹ  ಹಲವರನ್ನ ।।


ಹೀಗಿರುವಗ್ಗ ನಾ ಏನು ಮಾಡಲಿ 

ಹೇಗೆ ನಿನ್ನಿಂದ ನಾನು ಮುಕ್ತಿ ಹೊಂದಲಿ ।।


ನಿನ್ನ ಕಾಟಕ್ಕೆ ಕೊನೆಯೆಂದೆಣಿಸಿ 

ಸೋತಿಹೆ ನಾನು  ಇಂದು|

ನಿನ್ನಿಂದ ನಮ್ಮನೆಲ್ಲ ಕಾಪಾಡುವ 

ಆಪದ್ಭಾಂಧವ   , ಅನಾಥರಕ್ಷಕ 

ಎಲ್ಲಿರುವನೋ , ಬರುವನೋ ಇನ್ನೆಂದು !!!



(ಈ ವಿಡಂಬ ಕಾವ್ಯದ ಮಾರ್ಮಿಕತೆಯನ್ನು ಅರಿತವರೇ ಕೋವಿದರು)


ಸ್ವರ್ಣ ಕಿರಣ್ 

ಮನೆ ಸಂಖ್ಯೆ ೪೨೧.