ಗುರುವಾರ, ಅಕ್ಟೋಬರ್ 3, 2013

Ammana habba

ಈ ವಾರಂತ್ಯ ಕುಶಾಲನಗರಕ್ಕೆ ಹೋಗಿ ಬರಬೇಕು ಎಂದು ಮೊದಲೇ ನಿರ್ದರಿಸಿದ್ದ ನಾನು, ಕಿರಣ್ ,ಆಫೀಸ್ ಗೆ ರಜೆ ಹಾಕಿ ಶುಕ್ರವಾರ ಬೆಳಗ್ಗೆ ೫ ಗಂಟೆಗೆ ಕಾರ್  ಸ್ಟಾರ್ಟ್ ಮಾಡಿಕೊಂಡು ಹೊರೆಟೆವು . ನಾನು ಎ ಸಲ ಊರಿಗೆ ಹೋಗಲು ಇನ್ನೊಂದು ಕಾರಣವು ಇತ್ತು - ಬನಶಂಕರಿ ಜಾತ್ರೆ ಅದಾಗಿತ್ತು (ಅಮ್ಮನ ಹಬ್ಬ ). ಸಣ್ಣವಳಿದ್ದಾಗ ಪ್ರತಿ ವರ್ಷ ನೋಡಿ ಆನಂದಿಸುತ್ತಿದ್ದ ಈ ಜಾತ್ರೆ ವೈಭವ ನಾನು ನೋಡ್ದೆ ಸುಮಾರು ೧೨ ವರ್ಷಗಳು ಕಳೆದಿರಬೇಕು. ಬೆಂಗಳೂರಿನಿಂದ ಕುಶಾಲನಗರದವರೆಗಿನ ೪ ಗಂಟೆ ಪ್ರಯಾಣ ಕಳೆಯಲು ನಾನು ಕಿರಣ್ ಗೆ  ಜಾತ್ರೆಯ ಮತ್ತು ಅದು ನಡೆಯುವ ಊರಿನ ಬಗ್ಗೆ ನನಗೆ ತಿಳಿದಷ್ತು ಹೇಳತೊಡಗಿದೆ .

ಕೊಡಗಿನ ಉತ್ತರಕ್ಕೆ ಇರುವ  ಒಂದು ಸಣ್ಣ ಹಳ್ಳಿ ಹೆಬ್ಬಾಲೆ . ನಾನು ಬೆಳೆದು  ಕಲಿತ ಊರು . ಈಗ ಅಲ್ಲಿ ನಾವು ವಾಸವಿಲ್ಲದೆ ೧೦-೧೫  ವರ್ಷಗಳು ಕಳೆದರು ಊರು ಎಂದಾಗ ಮೊದಲು ಮನಸ್ಸಿಗೆ  ಬರುವುದು ಇದೆ ಹಳ್ಳಿ . ಸುತ್ತಮುತ್ತಲ ಹಳ್ಳಿಗಳಿಗೆ ಹೋಲಿಸಿದರೆ ಅಂಚೆಕಚೇರಿ, ಪೋಲಿಸ್ ಸ್ಟೇಷನ್ ,  ಪ್ರೌಡ ಶಾಲೆ,  ಆಸ್ಪತ್ರೆ   ಹೀಗೆ ಇನ್ನು ಕೆಲವು ಮೂಲ ಸೌಲಭ್ಯಗಳು ಇದ್ದಿದ್ದು ಹೆಬ್ಬಾಲೆಯಲ್ಲಿ ಮಾತ್ರ. ಕೊಡಗು ಮತ್ತು  ಹಾಸನ ಜಿಲ್ಲೆಯ ಗಡಿಭಾಗವಾಗಿದ್ದ ಹೆಬ್ಬಾಲೆಯಲ್ಲಿ  ಇಲ್ಲವೆ ಇಲ್ಲ ಎನ್ನುವಷ್ಟು ಕಡಿಮೆ ಕೊಡವರು .  ಶಾಲೆಯ ಶಿಕ್ಷಕರಾಗಿಯೋ ಇಲ್ಲ ಆಸ್ಪತ್ರೆಯಾ ದಾದೀಯರಗಿಯೋ ಬಂದಾ ಒಂದೆರಡು ಕುಟುಂಬಗಳು ಇದ್ದವು. ಅಲ್ಲದೆ ಬೇರೆ ಬೇರೆ ಜಾತಿಯ , ಪಂಗಡಗಳ ನೂರಾರು ಕುಟುಂಬಗಳು ಇದ್ದವು . ಭಾರತದ ಇತರ ಎಲ್ಲ ಹಳ್ಳಿಯಂತೆ ಕೃಷಿ ಪ್ರಧಾನವಗಿತ್ತು . ಕಾವೇರಿ ನದಿ ಹಳ್ಳಿಯ ಪಕ್ಕದಲ್ಲೇ ಹರಿಯುತಿದ್ದಳಾದರು ಯಾರಿಗೂ ಕೈಗೆ ಸಿಗುತಿರಲಿಲ್ಲ . ಕಾರಣ , ಊರ ಹೊರಗಿನ ಹೊಲಗಳ ,ಮತ್ತು ಸಣ್ಣ ಕಾಡಿನ ಹಾದಿಯನ್ನು ದಾಟಿದ ಮೇಲೆ ಅದರ  ಹರಿವು ಕಾಣುತಿತ್ತು .ಆದರಿಂದ ಹಳ್ಳಿಯ ರೈತರು ಕೃಷಿಗೆ ನೀರಾವರಿಯನ್ನೇ ಅವಲಂಬಿಸಿದ್ದರು.

ಬನಶಂಕರಿ ಊರಿನ ಗ್ರಾಮ ದೇವತೆ . ಹೆಸರೇ ಹೇಳುವಂತೆ ಈ ದೇವರು ನೆಲೆಸಿದ್ದು ಬನ (ಸಣ್ಣ ಕಾಡು) ದಲ್ಲಿದ್ದ ಒಂದು ಸಣ್ಣ ಗುಡಿಯಲ್ಲಿ. ಅದೇ ನಮಗೆ ದೇವಸ್ತಾನ .ಕಾಡಿನ ಬಲ ಭಾಗದಲ್ಲಿ ಸಣ್ಣಗೆ ಹರಿಯುತಿದ್ದ ತೊರೆ , ಎಡ ಬಾಗದಲ್ಲಿ ದೊಡ್ಡ ಕಾಲುವೆಯ ಏರಿ . ಕಾಲುವೆಯ ಏರಿಯಾ ಮೇಲೆ  ಸ್ವಲ್ಪ ದೂರ ನಡೆದು ಹೋದರೆ ಹಳೆಕೋಟೆ ಎಂಬ ಇನ್ನೊಂದ್ ತೀರ ಸಣ್ಣ ಹಳ್ಳಿ .  ಇದೆ ಕಾಲುವೆ ಏರಿಯ ಇನ್ನೊಂದು ಬಾಗಕ್ಕೆ  ಸರಕಾರೀ ಶಾಲೆಯ ಆಟದ ಮೈದಾನ .  ಹಳೆಕೊಟೆಯ ಹಳ್ಳಿಯ ಮಕಳ್ಳೇಲ್ಲ ಹೆಬ್ಬಾಲೆಯ  ಶಾಲೆಗೇ ಬರುತಿದ್ದರು . ಅವರು ಬರುವಾಗ ಅ ಕಾಡಿನಲ್ಲಿ ಇದ್ದ ಹಲವರು , ನೆಲ್ಲಿಕಾಯಿ, ಮಾವು, ಸೀಬೆ ,ಹುಣಸೆ  ತಡಸಲ ಹಣ್ಣು , ಹೀಗೆ ಹಲವರು ಮತಿತ್ತರ ಹಣ್ಣು ಗಳ್ಳನ್ನು ಕಿತ್ತು ತರುತಿದ್ದರು .ಕೆಲವೊಮ್ಮೆ , ತಾವು ಬೂತ ದೆವ್ವ ಗಳನ್ನೂ ನೋಡಿದ , ಯಾರೋ ಹೆಂಗಸು ನಕ್ಕ , ಗೆಜ್ಜೆಯ ಶಬ್ದವಾದ  ಕತೆಗಳನ್ನು ತರುತಿದ್ದರು .  ಇದನೆಲ್ಲ ನಿಜವೆಂದು ನಂಬಿ ಹೆದರುತಿದ್ದ ನಾವು , ದೇವಸ್ತಾನವಿರಲಿ ಅದರ ಕಾಡಿನ ಬಳಿಯೂ ಹೋಗುತಿರಲಿಲ್ಲ. ಒಟ್ಟಿನಲ್ಲಿ ದೇವಸ್ತನವಗಿದ್ದರು , ದೆವ್ವಗ ಜಾಗವೆಮ್ಬಂತೆ ನಾವು ಹೆದರುತ್ತಿದೆವು . 

 ಪಾರ್ವತಿಯ ಇನ್ನೊದು ಅವತಾರವಾದ ಬನಶಂಕರಿಗೆ ವರುಷಕ್ಕೆ ಒಂದು ಬಾರಿ ಜಾತ್ರೆ ಉತ್ಸವ ಪೂಜೆ ಎಲ್ಲ . ಇನ್ನುಳಿದ ದಿನಗಳು ಬಾಗಿಲು ಮುಚ್ಚಿರುತಿತ್ತು . ಬನಶಂಕರಿಯಾ ಜಾತ್ರೆಯೆಂದರೆ ಹಳ್ಳಿಯವರಿಗೆಲ್ಲ  ದೊಡ್ಡ ಹಬ್ಬ . ನಾವು ಅದೇ ಹಳ್ಳಿಯವರಲ್ಲ ಎಂಬ ಕಾರಣಕ್ಕೆ ನನ್ನ ಅಮ್ಮ , ಹಬ್ಬವನ್ನು ಮೊದ್ಲು ಆಚಿರಿಸುತಿರಲಿಲ್ಲ .ಆದರೆ ನನ್ನ  ಅಜ್ಜಿ ಹಳಿಯಲ್ಲಿ , ಇರೋವರೆಗೂ ಅ ಗ್ರಾಮದ ದೇವತೆ ಹಬ್ಬ ವನ್ನು ಮಾಡಬೇಕು ಎಂದು ಅಮ್ಮನಿಗೆ ,ಹೇಳಿದ ಮೇಲೆ  ನಮ್ ಮನೆಯಲ್ಲೂ ಹಬ್ಬದ ಆಚರಣೆ ಶುರವಾಇಯ್ತು 

ಜಾತ್ರೆ ಹಬ್ಬ-ಹುಣ್ಣೀಮೆಗಳ ಆಚರಣೆ  ಸ್ಥಳದಿಂದ - ಸ್ಥಳಕ್ಕೆ ಭಿನ್ನವಾಗಿರುತ್ತದೆ . ಅದೇ ರೀತಿ ಬನಶಂಕರಿಯಾ ಜಾತ್ರೆ  ತನ್ನದೇ ರೀತಿಯಲ್ಲಿ ವಿಭಿನ್ನವಾಗಿತ್ತು .ತಿಥಿ , ನಕ್ಷತ್ರ ಇತ್ಯಾದಿಗಳು ನಂಗೆ ಗೊತಿಲ್ಲದಿದ್ದರು , ನವೆಂಬರ್ ಅತ್ವ ಡಿಸೆಂಬರ್ ಮಾಹೆಯ ಅಮಾವಸ್ಯೆಯ ದಿನ ಈ  ಹಬ್ಬ ನಡೆಯುತ್ತದ್ದೆ ಎಂದು ನಾನು ತಿಳಿದಿದ್ದೇನೆ . ಜಾತ್ರೆಯ ಒಂದು ತಿಂಗಳು ಮುಂಚೆಯೇ , ಕೆಲವು ಸಂಘಗಳು, ಇತರ ಊರಿನ ಹಿರಿಯರು , ಗ್ರಾಮ ಪಂಚಾಯಿತಿ ವತಿ ಇಂದ  ಮನೆಗೆ ಹೋಗಿ ಉತ್ಸವದ ಕರ್ಚಿಗೆ ಹಣ ಸಂಗ್ರಹಿಸುತ್ತಾರೆ . ಹಬ್ಬದ ಪ್ರಯುಕ್ತ , ಸುತ್ತ ಮುತ್ತಲಿನ ಶಾಲಾ ಮಕ್ಕಳಿಗೆ ವಿವಿದ ರೀತಿಯ , ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ದೆಗಳು ಒಂದು ವಾರ ಮುಂಚೆ  ಶುರುವಾಗುತಿದ್ದವು . ಎಲ್ಲ ಕರ್ಯಕ್ರಮ್ಗು ನಾನು ಓದುತಿದ್ದ ಪ್ರಾಥಮಿಕ ಶಾಲೆಯಲ್ಲೇ ,ಜರುಗುತಿದ್ದರಿಂದ  ನಮಗೆ ೧ ವಾರಗಳ ಕಾಲ ಪಾಟವೆ  ಇಲ್ಲ , ಬರಿ ಆಟ .ಹಬ್ಬದ ದಿನ ಮತ್ತು ಅದರ ಮಾರನೆ ದಿನ ಸುತ್ತ ಮುತ್ತಲಿನ ಎಲ್ಲ ಶಾಲಾ ಕಾಲೆಜುಗಳಿಗೆ ರಜೆ .ಮೊದಲೇ ಹೇಳಿದ ಹಾಗೆ ದೇವಸ್ತಾನ , ಸಣ್ಣ ಕಾಡಿನ ಮಧ್ಯೆ ಇತ್ತು . ಜಾತ್ರೆ ಎಂದ ಮೇಲೆ ಎಷ್ಟು ಜನ ಸೇರುತ್ತಾರೆ . ಎಷ್ಟು ಭಕ್ತಾದಿಗಳು ಬರುತ್ತಾರೆ . ಇವರೆಲ್ಲ ಬನದ  ದಾರಿ ನಡೆಯುವುದು ಸುಲಭವಾಗಲು "ಬನ ಶುಚಿಗೊಳಿಸುವ " ಕಾರ್ಯಕ್ರಮ ನಡೆಯುತ್ತಿತ್ತು. ಜಾತ್ರೆಯ ನಂತರ ಒಂದು ವರ್ಷಗಳ ಕಾಲ ದೇವಸ್ಥಾನದ ಬಳಿ ಯಾರು ಹೋಗುತ್ತಿರಲ್ಲಿಲ್ಲವದ್ದರಿಂದ ಅಲ್ಲಿ ಬೆಳೆಯುತ್ತಿದ್ದ ಗಿಡ ಮರ ಬಳ್ಳಿಗಳು ದೇವಸ್ತಾನ ಮತ್ತು ಹೋಗುವ ದಾರಿಯನ್ನು ಆಕ್ರಮಿಸಿಕೊಳ್ಳುತ್ತಿದ್ದವು .ಈ ಬೇಡದ ಗಿಡ ಬಳ್ಳಿ ಗಳ್ಳನ್ನು ಕಡಿದು ದಾರಿ ಸ್ವಚ್ಛ ಮಾಡುವುದೇ "ಬನ ಶುಚಿ" ಕೆಲಸ . ಈ ಕೆಲಸ ಜಾತ್ರೆ ಗೆ ಎರಡು ದಿನ ಮುಂಚೆ ಪ್ರತಿ ವರ್ಷ ನಡೆಯುತ್ತಿತ್ತು .ಈ ಶುಚಿಗೊಳಿಸುವ ಕೆಲಸದ ಜವಾಬ್ದಾರಿಶಾಲಾ ಮಕ್ಕಳದ್ದು . ಚಿಕ್ಕ್ಕ  ಚಿಕ್ಕ ಗಿಡ , ಮರ, ಪೊದೆ  ಬಳ್ಳಿಗಳನ್ನು ಕಡಿದು  ಮಣ್ಣು ಹಾಕಿ ನೆಲವನ್ನು ಸಮ ಮಾಡುವ ಕೆಲಸ  ಪ್ರಾಯಾಸದಾಗಿದ್ದರು ನಮಗೆ ತುಂಬಾ ಮೋಜು ಕೊಡುತ್ತಿತ್ತು . ಶಾಲೆಯ ಪಾಠಗಳಿನ್ದ ಬಿಡುಗಡೆ ಸಿಗುತಿತ್ತು  ಎಂಬ ಕಾರಣಕ್ಕೋ ಅಥವಾ ವರುಷ ಪೂರ್ತಿ ಭಯ ಪಡುತಿದ್ದ ಕಾಡಿಗೆ ಇಂದು  ಹೋಗುವಾ ಸಾಹಸ ಮಾದುತಿದ್ದೇವೆ ಎಂಬ ಕಾರಣಕ್ಕೋ ಗೊತ್ತಿಲ್ಲ .ನಮಗೆ ಕೆಲಸಗಳು ಸಹ  ನಮ್ಮ ವಯಸಿನ್ನ  ಹಾಗೆ ವಿಂಗಡಣೆ  ಆಗುತಿತ್ತು . ೭ ನೆ ತರಗತಿಯಾ ಮೆಲೆಇನ ದರ್ಜೆಯ ಗಂಡು ಮಕ್ಕಳಿಗೆ  , ದೊಡ್ಡ ಮರ ಗಿಡಗಳನ್ನು ಕಡಿಯುವ ಅವುಗಳನ್ನು ಒಟ್ಟು ಮಾಡುವ ಕೆಲಸ. ಸಣ್ಣ ಪ್ರಾಯದ ಪ್ರಾಥಮಿಕ ಶಾಲೆಯ  ಮಕ್ಕಳು , ಚಿಕ್ಕ್ಕ ಚಿಕ್ಕ ಗಿಡಗಳನ್ನು ಕಡಿದು  ನೆಲದ ಮೇಲೆ ಕುಳಿತು ಹುಲ್ಲು, ಕಳೆಗಳನ್ನು ಕಿತ್ತು ಮಣ್ಣು ಹದ ಮಾಡುತಿದ್ದರು . ಹೆಚ್ಚಿನ್ನ ಮಕ್ಕಳು ರೈತರ ಕುಟುಂಬದವರಾಗಿದ್ದರಿಂದ , ಎಲ್ಲರಿಗು ಕೈ ತೋಟ  , ಹೊಲ ಗದ್ದೆಗಲ್ಲಿ ಕೆಲಸ ಮಾಡಿ ಅಭ್ಯಾಸವಿದ್ದ ಕಾರಣ,ಒಂದೇ ದಿನದಲ್ಲಿ  ಮಕ್ಕಳೆಲ್ಲ  ಬನ  ಶುಚಿಗೊಳಿಸುವ ಕೆಲಸ ಮುಗಿಸುತ್ತಿದ್ದೆವು . ದಿನ ಮುಗಿಯುವುದರೊಳಗೆ . ಕಾಡಿನ ಪ್ರಾರಂಭದಿಂದ , ದೇವಸ್ಥಾನದ  ಬಾಗಿಲ ವರೆಗೂ ಸುಮಾರು  ೫ ಅಡಿ ಅಗಲದ ಕಾಲು ದಾರಿ  ಸಿದ್ದವಾಗುತಿತ್ತು . ಈ ದಾರಿಯು ಇನ್ನೇನು ದೇವಸ್ಥಾನವನ್ನು  ಮುಟ್ಟುವ ಮೊದಲು ಇನ್ನು ಸ್ವಲ್ಪ ಅಗಲವಾಗಿ , ಸುಮಾರು ೩೦ ಅಡಿ ವ್ಯಾಸದ  ವೃತ್ತಾಕಾರದ ಸ್ವರೂಪ ಪಡೆದು ಮತ್ತೆ ಸಣ್ಣ ದಾಗಿ ದೇವಸ್ತಾನ ಬಾಗಿಲು ಮುಟ್ಟುತಿತ್ತು . ನಾವೇ ಕಡಿದ , ಮರದ ದಿಮ್ಮಿಗಳ್ಳನ್ನು , ರೆಂಬೆ ಕೊಂಬೆ ಗಳೆನ್ನೆಲ್ಲ ಒಟ್ಟು ಗೂಡಿಸಿ ಸರಿಯಾದ ರೀತಿಯಲ್ಲಿ ಅವುಗಳನ್ನು , ಒಂದರ ಮೇಲೆ ಒಂದು ಜೋಡಿಸಿ , ವೃತ್ತಾಕಾರದ  ಹಸನು ಗೊಳಿಸಿದ ಜಾಗದಲ್ಲಿ ಕೆಂಡ ತುಳಿಯುವ (ಹಾಯುವ) ಕಾರ್ಯಕ್ಕೆ  ಸಿದ್ಧ ಮಾಡುತ್ತಿದೆವ್ವು ಈ ವೃತ್ತದ ಪರಿದಿಯ ಸುತ್ತ ಒಂದರಿಂದ ಒಂದಕ್ಕೆ ಸುಮಾರು ೩ ಅಡಿ ಅಂತರವಿರುವಂತೆ  ಗಳುಗಳನ್ನು ನೆಟ್ಟು ಸುತ್ತ ಹಗ್ಗ ಕಟ್ಟುತ್ತಿದ್ದೆವು .ಕುಸ್ತಿಯ  ಅಖಾಡ ದಂತೆ . ಕೆಂಡ ತುಳಿಯುವ ದೃಶ್ಯವನ್ನು ಜನರು ಈ ಪರಿದಿಯ ಹೊರಗೆ ಕುಳಿತು ವೀಕ್ಷಿಸಬೇಕು ಕಾಲುದಾರಿಯ ಎರಡು ಕಡೆ ಬಿದಿರನ ಬೊಂಬುಗಳನ್ನು ನೆಟ್ಟು ಹಗದಿಂದ ಬಿಗಿದು ಬೇಲಿಯ ರೀತಿ ಮಾಡುತ್ತಿದೆವು . ಹೀಗೆ ದೇವಸ್ತಾನದ ಆವರಣವನೆಲ್ಲ ಸ್ವಚ್ಛ ಗೊಳಿಸಿದ ನಮಗೆ ಏನೋ ಸಾದಿಸಿದ ಹಿಗ್ಗು . ಸಂಜೆಯ ವೇಳೆಗೆ ಊರಿನ ಹಿರಿಯರಿಂದ ಎಲ್ಲ ಮಕ್ಕಳಿಗೂ  ೫೦ ಪೈಸೆ ಯಾ ಎರಡು ಪೆಪ್ಪೆರ್ಮೆಂಟ್  ಸಿಗುತಿತ್ತು .

ಹಬ್ಬದ ದಿನ , ಈಡಿ ಹಳ್ಳಿಯನ್ನು ಮಾವಿನ ಸೊಪ್ಪು , ಬಣ್ಣದ ಕಾಗದ ಗಳಿಂದ  ಸಿನ್ಗರಿಸ್ತುತ್ತಿದ್ದರು . ಎಲ್ಲ ದೊಡ್ಡ , ಸಣ್ಣ ರಸ್ತೆಗಳು , ಸಣ್ಣ ಕೇರಿಗಳು,ಓಣಿಗಳ ಎಕ್ಕೆಲಗಳಲ್ಲಿ  ಸೀರಿಯಲ್ ದೀಪಗಳನ್ನು ಹಿಡಿದು ನಿಂತ ಕಂಬಗಳು ಸಾಲಾಗಿ ತಲೆ ಎತ್ತುತ್ತಿದ್ದವು  . ಊರಿನ ಸಂತೆ ನಡೆಯುತಿದ್ದ ಜಾಗವೇ ಜಾತ್ರೆ ಕಟ್ಟುವ  ಜಾಗ . ಜಾತ್ರೆ ಗೆ ಹೋಗುವುದೆಂದರೆ ನಮಗೆ ಕುಶಿಯೋ ಕುಶಿ . ಜಾತ್ರೆಯಲ್ಲಿ ಮಕ್ಕಳ ಆಟಿಕೆಗಳ , ಪಾತ್ರೆಗಳ, ಕರಿದ ತಿಂಡಿ ತಿನುಸುಗಳ, ಬಟ್ಟೆ ಹೀಗೆ ವಿವಿಧ ಅಂಗಡಿಗಳು  ಜೊತೆಗೆ ಮೋಜಿನ ಕೆಲವು ಆಟಗಳು ಇರುತಿದ್ದವು . ಅದೇ ಸಂತೆಯ ಮೈದಾನದ ಒಂದು ಭಾಗದಲ್ಲಿ , ಬಯಲಾಟದ ವೇಧಿಕೆ ಸಿದ್ಧವಗುತಿತ್ತು  . ಇಲ್ಲಿ ಹಬ್ಬವಾದ ನಂತರ ಒಂದು ವಾರಗಳ ಕಾಲ, ಯಕ್ಷಗಾನ , ನಾಟಕ , ಹರಿಕತೆ, ಆರ್ಕೆಸ್ಟ್ರ ಮುಂತಾದ ಕರ್ಯಕ್ರಮಗಳು  ನಡೆಯುತಿತ್ತು . ಆಗಲೇ ಟೀವಿ ,ಸಿನಿಮಾ ಹುಚ್ಚ್ಚು ಶುರುವಾಗಿದ್ದ ಕಾಲವದರಿಂದ , ಹರಿಕತೆ ನಾಟಕಗಳಿಗೆ ಸೇರುತಿದ್ದ ಜನ ಕಡಿಮೆಯೇ . 

ಎಲ್ಲ ಊರಿನಂತೆ  , ಹೆಬ್ಬಾಲೆಯಲ್ಲೂ  , ಬಸ್ಸು ಬಂದು ಇಳಿಯುತಿದ್ದ ಜಾಗದಲ್ಲಿ , ಕೆಲವು ಅಂಗಡಿ ಮುಂಗಟ್ಟುಗಳು , ಹೋಟೆಲ್ಗಳು ಇರುತಿದ್ದವು . ಊರಿನ ಮನೆಗಳು ಸಿಗಬೇಕೆಂದರೆ ಸ್ವಲ್ಪ ದೂರ ಊರ ಒಳಗೆ ನಡೆದು ಹೋಗ್ಬೇಕು .ಬಸ್ಸು ನಿಲ್ದಾಣದ , ಬಲಕ್ಕೆ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರ ನಡೆದು ಹೋದರೆ ಮೊದಲು ಸಿಗುತಿದ್ದದ್ದು  ಗ್ರಾಮ ಪಂಚಯಿತಿ ಕಚೇರಿ  ನಂತರ ವಾಸದ ಮನೆಗಳು ಸಿಗುತಿದ್ದವು , ಇನ್ನು ನಿಲ್ದಾಣದ ಎಡಕ್ಕೆ , ಸರ್ಕಾರೀ ಶಾಲೆ ,ಅದರ ಪಕ್ಕದಲ್ಲೇ ಸ್ವಲ್ಪ ದೂರ ಪಶು ವೈದ್ಯಾಲಯ , ಮತ್ತೆ ಕೆಲವನ್ನು ಮನೆಗಳು .ನಿಲ್ದಾಣದಿಂದ ಹೊರಟ ಬಸ್ಸು ಮುಂದೆ ಹೋಗುವ ದಾರಿಯಲ್ಲೇ ಸುಮಾರು ಅರ್ಧ ಕಿಲೋಮೀಟರು ದೂರದಲ್ಲೇ  ನಮ್ ಮನೆ .  ಅದು ಬರಿ ಶಿಕ್ಷಕರು ನೆಲೆಸಲು  , ಸರ್ಕಾರ ನಿರ್ಮಿಸಿದ್ದ  ವಸತಿ  ಗೃಹಗಳು ಇದ್ದ ಜಾಗ .ನಮ್ಮ ಮನೆಯ ಅಕ್ಕ ಪಕ್ಕ ಇದ್ದವರೆಲ್ಲ, ಆ ಊರಿನವರಾಗಿರದೆ ಬೇರೆ ಕಡೆ ಇಂದ ವರ್ಗಾವಣೆ ಆಗಿ ಬಂದವರೇ ಜಾಸ್ತಿ . ಆದರಿಂದ ಅಲ್ಲಿ ಸ್ವಲ್ಪ ಹಬ್ಬದ ವಾತಾವರಣ ಕಡಿಮೆ .ಶಿಕ್ಷಕರ ಬಡಾವಣೆಯಲ್ಲಿದ್ದ ನಮಗೆಲ್ಲ , ಹಬ್ಬದ ನಿಜವಾದ ವೈಭವ , ಆಚರಣೆ  ನೋಡಬೇಕಾದ್ರೆ ಊರ ಒಳಗೆ ಹೋಗಬೇಕಿತ್ತು .ಬೇರೆ ಎಲ್ಲ ಜಾತ್ರೆಗಳನ್ತೆ  ಬನಶನಕ್ರಿ  ಜಾತ್ರೆ ಹಗಲಿನ ವೇಳೆ ನಡೆಯುತಿರಲಿಲ್ಲ  ಜಾತ್ರೆ ತೇರು ನಡೆಯುತಿದಿದ್ದು ರಾತ್ರಿ ವೇಳೆ . ಊರಿನವರ ಎಲ್ಲ ಮೆನೆಗಳು ನೆಂಟರು,ಬಂಧು -ಬಾಂದವರಿಂದ ತುಂಬಿ ಹೋಗಿರುತಿತ್ತು . ಎಲ್ಲ ಮನೆಗಳುಲ್ಲು ಒಂದೇ ಸಾಮಾನ್ಯ ಊಟ ತಿಂಡಿ ತಿನಿಸುಗಳು , ವಡೆ, ಕಜ್ಜಾಯ ಪಾಯಸ. ಹೆಂಗಸಿರಿಗೆ ಅಡುಗೆ ಮನೆ ಬಿಡಲು ಪುರುಸೊತ್ತೇ ಇಲ್ಲ .ಮಕ್ಕಳಿಗೆ ತಮ್ಮ ದೂರದ ಊರಿನ ಅಪರೂಪಕ್ಕೆ ಬರುವ ನೆಂಟರಿಷ್ಟರ ಮಕ್ಕಳೊಂದಿಗೆ ಆಟವಾಡುವುದು , ಅವರಿವರ ಮನೆಗೆ ಹೋಗಿ  ಕಜ್ಜಾಯ ವಡೆ ತಿನ್ನುವುದು ,ಅಲಂಕೃತ ಗೊಂಡ ಬೀದಿಗಳಲ್ಲಿ ತಿರುಗುವುದು , ಜಾತ್ರಯಲ್ಲಿ ಅಡ್ಡಡುವುದು ,ಗಿರಗಿತ್ತಲೇ ,ಉಯ್ಯಾಲೆ ಮುಂತದ ಆಟಗಳಿಗೆ ೨ ರೂಪಾಯಿ , ೫ ರೂಪಾಯಿ ಕೊಟ್ಟು ಆಡುವುದು ಇದೆ ಕೆಲಸ . ಹಗಲೆಲ್ಲ ಕೇವಲ ಮನೆಯಲ್ಲೇ ಇದ್ದ ಹಬ್ಬದ ವಾತಾವರಣ ಸಂಜೆಯ ವೇಳೆಗೆ ರಸ್ತೆಗೆ ಧುಮುಕುತ್ತದ್ದೆ . ಮಿಕ್ಕ ದಿನಗಳ್ಳಲ್ಲಿ ಹಗಲೇ ಅಪರೂಪಕ್ಕೆ ಆಗೊಮ್ಮೆ ಈಗೊಮ್ಮೆ ಓಡಾಡುವ  ಬಸ್ಸು, ಜೀಪು , ಸಣ್ಣ ವ್ಯಾನ್ ಗಳು ಅ ಎರಡು ದಿನ ರಾತ್ರಿ ಹಗಲು ಲೆಕ್ಕಿಸದೆ ಪಕ್ಕದ ಹಳ್ಳಿಗಳಿಗೆ ಹೋಗುವ ಅಲ್ಲಿಂದ ಬರುವ ಜನರನ್ನು  ಸಾಗಿಸುತ್ತದೆ   

ಸುಮಾರು ರಾತ್ರಿ ೧೧ ಗಂಟೆಯ ವೇಳೆಗೆ ಊರಿನ ಮಧ್ಯದಲ್ಲಿ ಇರುವು  ಭೈರವ ದೇವಸ್ತಾನದಿಂದ ಬನಶಂಕರಿಯ ಉತ್ಸವ ಮೂರ್ಯಿಯ ಮೆರವಣಿಗೆ ಚಾಲೆಯಗುತ್ತದೆ . ತೇರು ತಮ್ಮ ಬೀದಿಗೆ ಬರುವ ಮೊದಲು ಅಲ್ಲಿನ ನಿವಾಸಿಗಳು ,ರಸ್ತೆಗಳಿಗೆ  ನೀರು ಹಾಕಿ ರಂಗೋಲಿ ಇಟ್ಟು  , ಕೈಯಲ್ಲಿ ಹೂವು ,ಹಣ್ಣು,ತೆಂಗಿನಕಾಯಿ ತಟ್ಟೆ ಹಿಡಿದು ದೇವರನ್ನು ಸ್ವಾಗತಿಸಲು ಸಿದ್ದವಾಗುತ್ತಾರೆ  . ಉತ್ಸವ್ದ  ಮುಂದೆ  ಮಂಗಳ ವಾದ್ಯಗಳ ಜೊತೆ, ಪಟಾಕಿ ಸದ್ದು ಸೇರಿ ಎಲ್ಲರಲ್ಲೂ ಉತ್ಸಾಹವನ್ನು ಮೂಡಿಸುತಿದ್ದವು. ಜಾತ್ರೆಯ ಇನ್ನೊಂದು ವಿಶೀಷ "ಕೆಂಡ ತುಳಿಯುವುದು" . ಕೆಂಡ ತುಳಿಯುವುದು ದೇವರಿಗೆ ಸಲ್ಲಿಸುತ್ತಿದ್ದ ಹರಕೆ. ಹೀಗೆ ಹರಸಿಕೊಂಡವರಲ್ಲಿ ಗಂಡಸರು, ಹೆಂಗಸರು ಮತ್ತು ಮಕ್ಕಳು ಸಹ ಇರುತ್ತಿದ್ದರು . ಇವರೆಲ್ಲ ದಿನವೆಲ್ಲ ಉಪವಾಸವಿದ್ದು , ತೇರು ಹೊರಡುವು ವೇಳೆಗೆ ಭೈರವ ದೇವಸ್ತಾನದ ಹತ್ತಿರ ಬಂದು ಸೇರುತ್ತಿದ್ದರು. ಹರಕೆ ಹೊತ್ತವರು ಭೈರವ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ , ಹಣ್ಣು ಹೂವು ಮತ್ತಿತರ ಪೂಜಾ ಸಾಮಗ್ರಿಗಳು ಇರುತ್ತಿದ್ದ ಬುಟ್ತಿಯನ್ನು ತಲೆಯ ಮೇಲೆ ಹೊತ್ತು ಬರಿಗಾಲಲ್ಲಿ ಬಿಳಿಯ ಒದ್ದೆ ಬಟ್ಟೆಯ ಮೇಲೆ ನಡೆಯುತ್ತಾ ತೇರನ್ನು ಹಿಮ್ಬಲಿಸುತ್ತಿದ್ದರು. ಹೀಗೆ ಹೊರಟ ಮೆರವಣಿಗೆ ಊರಿನ ಎಲ್ಲ ಪ್ರಮುಖ ಬೀದಿಗಳಲ್ಲಿ ಚಲಿಸಿ  ಕೊನೆಗೆ ಬನಶಂಕರಿ ದೇವಸ್ತಾನಕ್ಕೆ ಬಂದು ತಲುಪುತ್ತದ್ದೆ  ಉತ್ಸವ ಬನಶಂಕರಿ ದೇವಸ್ತಾನ ತಲುಪುವ ವೇಳೆಗೆ ಸುಮಾರು ರಾತ್ರಿ ೨ -೩  ಗಂಟೆ ಆಗಿರುತಿತ್ತು .ಅಷ್ಟರಲ್ಲಿ ಒಂದು ವರ್ಷದಿಂದ ,ಮುಚಿರುತ್ತಿದ್ದ  ದೇವಸ್ಥಾನದ  ಬಾಗಿಲು ತೆಗೆದು , ಒಳಗಿನ ದೇವಿಗೆ , ಪೂಜೆ ಅಭಿಷೇಕ ಅಲಂಕರಗಲ್ಲೆಲ್ಲ ನಡೆಯುತಿರುತ್ತದೆ .ಇಲ್ಲಿ ಆಚರಿಸುತ್ತಿದ್ದ ಇನ್ನೊಂದು ಕೂತುಹಲ ಪದ್ದತ್ತಿ ಎಂದರೆ . ಪೂಜಾರಿಯನ್ನು ಹೊರತು ಪಡಿಸಿ ಜಾತ್ರೆ ರಾತ್ರಿ  ಕೇವಲ ಹೆಂಗಸರಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶ. ಗರ್ಭಗುಡಿ ಎಂಬ ಪ್ರತ್ಯೇಕತೆ ಇಲ್ಲದ್ದ , ನಮ್ಮ ದೇಹವನ್ನು ಸ್ವಲ್ಪ ಬ್ಬಗ್ಗಿಸೆಯೇ ಒಳಗೆ ಹೋಗಬೇಕಾದ ಒಂದು ಸಣ್ಣ ಗುಡಿಯಗಿದ್ದ , ಅದರೊಳಗೆ ಜಾತ್ರೆಯ ರಾತ್ರಿ ಹೋಗಿ ದೇವಿಯ ದರ್ಶನ ಮಾಡಿಕೊಂಡು ಪೂಜೆ ಮಾಡಿಸುವುದೇ ಹರಸಾಹಸ,ನೂಕು ನುಗ್ಗಲ್ಲು

ದೇವರ ಉತ್ಸವ ಬನಶಂಕರಿ ದೇವಸ್ತಾನ ತಲುಪುವ ವರೆಗೂ , ಯಾರಿಗೂ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಆದರೆ ವರ್ಷಕ್ಕೆ ಒಂದೇ ಬಾರಿ ತೆರೆಯುತೀದ ದೇವಸ್ಥಾನದ ಮುಂದೆ ಜನ ಸಾಲು ಗಟ್ಟಿ ೪-೫ ಗಂಟೆಗಳ ಕಾಲ ಕಾಯೂತಿದ್ದರು . ಊರಿನ ಬೀದಿಗಳಲ್ಲಿ ತೇರು ನಡೆಯುತ್ತಿರುವ ವೇಳೆ , ಬನಶಂಕರಿ ದೇವಸ್ಥಾನದ ಮುಂಬಾಗದಲ್ಲಿ ಕೆಂಡ ಸಿದ್ಧಪಡಿಸುವ ಕಾರ್ಯ ಶುರುವಾಗುತ್ತಿತ್ತು .ಈ  ಕೆಂಡ ತುಳಿಯುವ ಕಾರ್ಯ ಕರ್ಮ ನೋಡಲು ಹಳ್ಳಿಯ ಜನ , ಚಾಪೆ , ದಿಮ್ಪ್ಬು , ಜಮಖಾನ ಮುಂತಾದ , ಸಾಮಗ್ರಿಗಳೊಂದಿಗೆ ಬೆಂಕಿ ಹಾಕುವ ಸುತ್ತ ಜನ ಜಮ್ಮಯಿಸುತ್ತಾರೆ . ರಾತ್ರಿ ಸುಮಾರು ೧೦ ಗಂಟೆಗೆ ಬೆಕಿ ಹಾಕಲು ಶುರು ಮಾಡಿದರೆ ಬೆಳಿಗಿನ ಜಾವ ೪ ಗಂಟೆಯ ವೇಳೆಗೆ ಎಲ್ಲ ಉರಿದು ಕೆಂಡ ಸಿದ್ದವಗುತ್ತದ್ದೆ .  ಮೊದಲೇ ಅಣಿ ಮಾಡಿ ಸುಮಾರು ೧೦ ಅಡಿ ಅಗಲ ಎತ್ತರದವರೆಗೂ ಜೋಡಿಸಿದ್ದ ಮರದ ದಿಮ್ಮಿಗಳಿಗೆ ಬೆಂಕಿ ,ಕೊಟ್ಟು ಅದನ್ನು ಕೆಂಡ ಮಾಡುವ ಕೆಲಸ ಸುಲಭದಲ್ಲ .ಕೆಂಡ ಮಾಡುವ ಎ ಧೀರ್ಗ ಕಾಲದ ಕೆಲಸಕ್ಕೆಂದೇ ಊರಿಂದ ೩-೪ ಜನ ಗಟ್ಟಿಯಾಗಿರುವ ಗಂಡಸರು ನಿಲ್ಲುತ್ತಾರೆ.ಬಿಸಿ  ನೀರಿನ ಹಂಡೆಗೆ  ಬೆಂಕಿ ಮಾಡುವಷ್ಟು ಅನುಭವ ಇದ್ದಾರೆ ಸಾಲದು , ಚುಮು ಚುಮು ಚಳಿಯಲ್ಲಿ ಬೆಂಕಿ ಆರದಂತೆ ನ, ಮರದ ದಿಮ್ಮಿಗಳು ಪೂರ್ತಿಯಾಗಿಉರಿಯುವಂತೆ  ನೋಡಿಕೊಳ್ಳಬೇಕು  ಒಂದರ ಮೇಲೊಂದು ಜೋಡಿಸಿಟ್ಟ ಮರದ ದಿಮ್ಮಿಗಳು ಬೆಂಕಿ ಹೆಚ್ಚದನತೆ , ಕೆಳಗೆ ಉರುಳುತ್ತವೆ . ಅವುಗಳನ್ನು ಮತ್ತೆ ಎಳೆದು ತಂದು ಒಟ್ಟು ಮಾಡ್ಬೇಕು .ಹತ್ತಿರ ಸುಳಿದರೆ ಎಲ್ಲಿ ನಮ್ಮನೆ ಬೆಂಕಿ ಆವರಿಸುವುದೋ ಎನ್ನುವಷ್ಟು  ಧಗೆ,ಶಾಖ . ಕೆಂಡ ಹಾಯುವುದನ್ನು ನೋಡಲು ಬರುವ ಜನ ಚಳಿಯಿಂದ  ರಕ್ಷಣೆಗೆ ಬೆಚ್ಚ್ಚಗೆ ಬಟ್ಟೆ ತೊಟ್ಟು ಬಂದರೆ , ಬೆಂಕಿ ಮಾಡುವರು ಬೆಂಕಿಯ ಮುಂದೆ ಬೆಂದು ಅವರ ಮಯಿಂದ ಬೆವರು ಇಳಿಯುತಿರುತ್ತದೆ - ಡಿಸೆಂಬರ್ ಮಾಸದ  ಕೊಡಗಿನ ರಾತ್ರಿ ಚಳಿಯಲ್ಲೂ  ಬೆವರಿಳಿಸುವ ಭಯಂಕರ ಬೆಂಕಿ. ಬೆಂಕಿಯಾ ಜ್ವಾಲೆ ಹೆಚ್ಚದಂತೆ ಅ ಚಳಿಯಲ್ಲೂ ಸುತ್ತಲಿನ  ಮಣ್ಣಿನ ನೆಲ ಕಾಲು ಇಡಲಾಗದಷ್ಟು ಬಿಸಿಯಾಗುತ್ತದೆ  ಅದಕಾಗಿಯೇ ಆಗಿಂದಾಗೆ ಸುತ್ತಣ ನೆಲೆದ ಮೇಲೆ ಬಿನ್ದಿಗೆಗಟ್ಟಲೆ ನೀರು ತಂದು ಸುರಿಯುತ್ತಾರೆ . ಒಂದೊಂದೇ ಮರದ ದಿಮ್ಮಿಗಳು ,ಸಣ್ಣ ರೆಂಬೆ ,ಕೊಂಬೆಗಳನ್ನೂ ಕಬಳಿಸುತ್ತಾ ಬೆಂಕಿ , ಪ್ರಜ್ವಲಿಸುತ್ತದೆ. ಸರಿಸುಮಾರು ೪ ಗಂಟೆ ಬೆಳಗಿನ ಜಾವಕ್ಕೆ ೧೦ ಅಡಿ ಉದ್ದ ,೩ ಅಡಿ ಎತ್ತರದ ಕೆಂಡ ಹಾಸಿಗೆ ಸಿದ್ದವಗುತ್ತದ್ದೆ .

ಎಲ್ಲ ಮುಖ್ಯ ಬೀದಿಗಳಲ್ಲಿ ,ಚಲಿಸಿದ  ತೇರು ದೇವಸ್ತಾನಕ್ಕೆ ಬರುವ ವೇಳೆಗೆ ಆಗಲೇ ಗಂಟೆ ೨ ಆಗಿರುತ್ತದೆ . ನಂತರ , ಉತ್ಸವ ಮೂರ್ತಿಗೆ ಪೂಜೆ ಆಗಿ,ಆರತಿ ಎಲ್ಲ ಮುಗಿಯುವ ವೇಳೆಗೆ ೪ ಗಂಟೆ ಆಗುತಿತ್ತು . ಉತ್ಸವ ಮೂರ್ತ್ಯಿಯ ಪೂಜೆ ಆದ ಮೇಲೆ ಎಲ್ಲ ಎಲ್ಲರು ಕಾತುರದಿಂದ ಕಾಯುವ ಕೆಂಡ ಹಾಯುವ ಕಾರ್ಯಕ್ರಮ .ನಾನು ಗಮನಿಸಿದ ಇನ್ನೊಂದ ವಿಶೇಷ ಪದ್ದತ್ತಿ  ಮೊದಲು ಅಲ್ಲಿನ ಪೂಜಾರಿ ಕೆಂಡ ಹಾಯಬೇಕು !!! ನಂತರ ಹರಸಿಕೊಂಡ ಭಕ್ತರು - ಮೊದಲು ಗಂಡಸರು ಮತ್ತು ಗಂಡು ಮಕ್ಕಳು ನಂತರ ಹೆಂಗಸರು ಮತ್ತು ಹೆಣ್ಣು ಮಕ್ಕಳ ಸರದಿ .ಕೆಲವರು ಕೆಂಡದ ಮೇಲೆ ಸಮಾಧಾನವಾಗಿ ಭಕ್ತಿಇಂದ ನಡೆದರೆ, ಇನ್ನು ಕೆಲವರು ಮುಗಿದರೆ ಸಾಕು ಎಂದು ಓಟ .ಹೀಗೆ  ಓದುವವರನ್ನು ನೋಡಿ  ಜನ ಕೇಕೇ ಹಾಕಿ ನಗುತ್ತಾರೆ . ಇನ್ನು ಕೆಲವರು  , ಹರಕೆ ಹೊತಿದ್ದರು , ಅದಕ್ಕಾಗಿ ಬೆಳ್ಳಗ್ಗೆ ಇಂದ ಉಪವಾಸ ಇದ್ದರು , ಕೆಂಡ ನೋಡಿ ಭಯ ಪಟ್ಟು ಸಾಧ್ಯವಿಲ್ಲವೆಂದು ಹಿಂದೆ ಸರಿಯುತಾರೆ ಯಾರಿಗೂ ಬಲವಂತವಿಲ್ಲ .ಹೀಗೆ ಕೆಂಡ ಹಾಯುವ ಕೆಲವರಿಗೆ ಯಾವುದೇ ರೀತಿಯ ನೋವಾಗಲೀ ಗಾಯವಾಗಲಿ ಆಗುವುದಿಲ್ಲ . ಇನ್ನು ಕೆಲವರಿಗೆ  ಸಣ್ಣ ಪುಟ್ಟ ಸುಟ್ಟ ಗಾಯಗಳು ,ಬೊಬ್ಬೆಗಳು ಆಗುತ್ತವೆ - ಅಂತವರು ವ್ರತವನ್ನು ನಿಷ್ಠೆ ಇಂದ ಪಾಲಿಸಿಲ್ಲ ಎಂಬುದು ಇಲ್ಲಿಯವರ ನಂಬಿಕೆ . ನಿಜವಾದ ಇದರ ಹಿಂದಿರುವ ವೈಜ್ಞಾನಿಕ ರಹಸ್ಯ ನಂಗಂತೂ ತಿಳಿದಿಲ್ಲ. 

ಒಟ್ಟಿನಲ್ಲಿ , ಎಲ್ಲ ಹರಕೆಗಳ ಪೂಜೆ ಮುಗಿದ ಮೇಲೆ  ಸಾಲಲ್ಲಿ ಕಾಯುತ್ತ ನಿಂತಿದ್ದ ಭಕ್ತಾದಿಗಳಿಗೆ ದೇವಸ್ತಾನದ ಒಳಗೆ ಪ್ರವೇಶ ಸುಮಾರು ಬೆಳಿಗ್ಗೆ ೬ ಗಂಟೆಯ ವೇಳೆಗೆ ಎಲ್ಲ ಪೂಜೆಗಳು ಮುಗಿದು , ಜನ ಸ್ವಲ್ಪ ಕಡಿಮೆಯಗುತಾರೆ . ಹಿಂದಿನ ರಾತ್ರಿ ತೆರದ ದೇವಸ್ತಾನ ಮರುದಿನ ಪೂರ್ತಿ ತೆರೆದೇ ಇರುತ್ತದ್ದೆ . ಎರಡನೇ ದಿನ ಪೂರ್ತಿ ಪೂಜೆ ಪುನಸ್ಕಾರಗಳು.ಸಂಜೆಯ ವೇಳೆಗೆ ಮತ್ತೊಮ್ಮೆ ಪೂಜೆ ಸಲ್ಲಿಸಿ ಬಾಗಿಲು ಹಾಕಿದರೆ ಮುಗಿಯಿತು ಇನ್ನು ಒಂದು ವರ್ಷ ಕಾಯಬೇಕು.

ನನ್ನ ಮಾತು ಕಥೆ ಮುಗಿಯುವ ವೇಳೆಗೆ ಕುಶಲ್ನಗರಕ್ಕೆ ಸ್ವಾಗತ ಎನ್ನುವ ಬೋರ್ಡ್ ನನ್ನ ಕಣ್ಣಿಗೆ ಬಿತು . ಅರೆ!! ಸಮಯ ಹೋಗಿದ್ದೆ ತಿಳಿಯಲಿಲ್ಲ ಎಂದು ತಕ್ಷಣ ನನ್ನ  ಮೊಬೈಲ್ ತೆಗೆದುಕೊಂಡು ಇನ್ನು ೫ ನಿಮಿಷದಲ್ಲಿ ನಾವು ಮನೆಯಲ್ಲಿ ಇರುತ್ತೇವೆ  ಎಂದು ಅಮ್ಮನಿಗೆ ಹೇಳಿದೆ . ಮನೆಗೆ ಹೋದ ಮೇಲೆ ಮೊದಲು ಇಬ್ಬರು  ಬಿಸಿ ಬಿಸಿ ಕಾಫೀ ಹೀರಿದೇವು . ನಂತರ ನಾನು ಸ್ನಾನ ಮುಗಿಸಿ ಅಮ್ಮ ಕೊಟ್ಟ ಬಿಸಿ ಬಿಸಿ ಮೆಂತ್ಯ ದೋಸೆ ತಿನ್ತುತ್ತ ಅಡುಗೆ ಮನೆ ಕಟ್ಟೆ ಮೇಲೆ ಕುಳಿತೆ .ಅಷ್ಟರಲ್ಲಿ ಅಪ್ಪನ ಕಾರನ್ನು ಗ್ಯಾರೇಜು ಇಂದ  ಹೊರಗೆ ತೆಗೆದು , ನಮ್ಮ ಕಾರನ್ನು  ಒರೆಸಿ ಅದನ್ನು ಗ್ಯಾರೇಜು ಅಲ್ಲಿ ನಿಲ್ಲಿಸಿ ಕಿರಣ್ ಸ್ನಾನ ಮಾಡಲು ಹೋದರು.

ಮೊದಲೇ ಪ್ಲಾನ್ ಮಾಡಿದಂತೆ , ನಾನು ,ಅಪ್ಪ, ಅಮ್ಮ ,ಕಿರಣ್ , ನಾಲ್ವರು ಮಧ್ಯನ್ನದ ಊಟ ಮುಗಿಸಿ ,ಅಪ್ಪ ನ ಕೆಂಪು ನ್ಯಾನೋ ಕಾರ್ ಹತ್ತಿ ಹೆಬ್ಬಾಲೆಗೆ ಹೊರೆಟೆವು. ಕುಶಾಲನಗರ ದಿಂದ ೧೫ ಕಿ.ಮೀ ಗಳ ದಾರಿ .ಹಳ್ಳಿಯ ದೇವಸ್ತಾನವಾದ್ದರಿಂದ , ಅಲ್ಲಿ ಪ್ರತ್ತ್ಯೇಕ ಪಾರ್ಕಿಂಗ್ ವ್ಯವಸ್ತೆ ಇರುವುದಿಲ ಪಟ್ಟಣದಂತೆ .ಆದ್ದರಿಂದ ನಾವು ಕಾರ್ ಅನ್ನು ದೇವಸ್ತನದಿಂದ ಸುಮಾರು ಅರ್ಧ ಕಿ. ಮೀ  ದೂರ ಪರಿಚಯದವರ ಮನೆಯಲ್ಲಿ ನಿಲ್ಲಿಸಿ ಹೋದೆವು. ನಡೆದುಕೊಂಡು ದೇವಸ್ತಾನ ತಲುಪಿದ ಮೇಲೆ ನಂಗೆ ಕಂಡ ಮೊದಲ ಆಶ್ಚರ್ಯ ಅಲ್ಲಿ ನಾನು ನೋಡಿದ್ದ ಸಣ್ಣ ಗುಡಿ ಇರಲಿಲ್ಲ. ಬದಲಾಗಿ ದೊಡ್ಡದು ಎಂದು ಹೇಳಬಹುದಾದ ದೇವಸ್ತಾನ. ಬನಶಂಕರಿಯ ಸಣ್ಣ ಗುಡಿ ಎಲ್ಲ ರೀತಿಯ ಬದಲಾವಣೆ ಪಡೆದಿತ್ತು.ಗರ್ಭಗುಡಿ ಇಲ್ಲದ ದೇವಸ್ತಾನಕ್ಕೆ ಈಗ ಗರ್ಭಗುಡಿ ನಿರ್ಮಾಣವಾಗಿದೆ .!!  ದೇವಸ್ತಾನದ ಸುತ್ತ ಮೊದಲಿನಷ್ಟೂ ದಟ್ಟ್ಟಕಾಡು ಇರಲಿಲ್ಲ. ಮೊದಲು ಕೇವಲ ಬಂಶಕರಿ ಇದ್ದ ಜಾಗದಲ್ಲಿ ಈಗ ಪುಟ್ಟ ಗಣಪತಿ ಮತ್ತು ನವಗ್ರಹ ದೇವಸ್ತನಗಳು ತಲೆ ಎತ್ತಿವೆ !! ದೇವಸ್ತಾನದ ಗೋಪುರಗಳನ್ನು ಸರಿಯಾಗಿ ಗಮನಿಸಿದರೆ  ನುರಿತ ಶಿಲ್ಪಿಗಳು ಕೆಲಸವಲ್ಲ ಎಂದು ಸಲೀಸಾಗಿ ಗೊತ್ತಾಗುತ್ತದೆ. ಭಾಹ್ಯವಾಗಿ ಏನೇ ಬದಲಾವಣೆಗಲಿದ್ದರು , ದೇವರು ಅದೇ ಎಂದು ನಾನು ಹೊಸದಾಗಿ ನಿರ್ಮಾಣ ಗೊಂಡಿದ್ದ ಗರ್ಭಗುಡಿಯ ಒಳಗೆ ಬಗ್ಗಿ ನೋಡಿದೆ . ಇನ್ನೊಂದು ಆಶ್ಚರ್ಯ - ಮೊದಲು ಅಲ್ಲಿ ಇದ್ದದ್ದು ಮೂರು ಲಿಂಗಾಕಾರದ ಕಲ್ಲುಗಳು ಅದೇ ದೇವರು, ಅದಕ್ಕೆ ಹಬ್ಬದ ದಿನ ಸೀರೆ ಉಡಿಸಿ ಸಿನ್ಗರಿಸುತ್ತಿದ್ದರು . ಈಗ ಅಲ್ಲಿ ೪ ಕೈಗಳ ದೇವಿಯ ಮೂರ್ತಿ ಇದೆ . ಆ ಮೂಲ ದೇವರು ಎಲ್ಲಿ ಎಂದು ನಾನು ಅಲ್ಲಿಯ ಪುರೋಹಿತರನ್ನು ಕೇಳಿದಕ್ಕೆ ,  ಅದು ಅಲ್ಲೇ ವಿಗ್ರಹದ ಹಿಂದೇ ಇದೆ . ಈಗ ಪೂಜೆ ಎಲ್ಲ ಈ  ಪ್ರತಿಷ್ಟಪನೆ ಗೊಂಡಿರುವ ದೇವಿಯ ವಿಗ್ರಹಕ್ಕೆ ಎಂದರು !! ನಂಗೆ ಒಂದು ಅರ್ತವಾಗದೆ ಸುಮ್ಮನಾದೆ. ಇನ್ನು ಒಂದು ನಂಗೆ ಅಚ್ಚರಿ ಮೂಡಿಸಿದ ಸಂಗತಿ - ಮೊದಲು ವರ್ಷದಲ್ಲಿ ಒಂದೇ ಬಾರಿ ಬಾಗಿಲು ತೆರೆಯುತಿದ್ದ ಪದ್ಧತಿ ಈಗ ಇಲ್ಲವಾಗಿದೆ . ಬೇರೆ ಎಲ್ಲ ದೇವಸ್ಥನಗಳಂತೆ ಪ್ರತಿ ದಿನ ಇಲ್ಲಿ ಈಗ ಪೂಜೆ ನಡೆಯುತ್ತದೆ .

ದೇವರ ಪೂಜೆ ಮುಗಿಸಿ , ಜಾತ್ರೆಯಲ್ಲಿ ಒಂದು ಬಾರಿ ಅಡ್ಡಾಡಿ ಮತ್ತೆ ಕಾರ್ ನಿಲ್ಲಿಸಿದ್ದ ಜಾಗಕ್ಕೆ ಬಂದೆವು . ವಾಪಸು ಮನೆಗೆ ಹಿಂದಿರುಗುವಾಗ ಕಿರಣ್ ಕೆಂಡ ಹಾಯುವ ದೃಶ್ಯ ನೋಡಬೇಕು ಎಂಬ ಆಸೆಯನ್ನು ಹೇಳಿದರು.ಹತ್ತು ಗಂಟೆಗೆಎಲ್ಲ ಜನ ಸೇರುತ್ತಾರೆ, ಮುಂದಿನ ಸಾಲಲ್ಲಿ ಕೂತರೆ ಮಾತ್ರ , ಕೆಂಡ ತುಳಿಯುವ ದೃಶ್ಯ ಕಾಣುತ್ತದೆ ಎಂದು ನಾನು ಕಿರಣ್ ರಾತ್ರಿಯ ಊಟ ಬೇಗ ಮುಗಿಸಿ ಇಬ್ಬರೇ ಕಾರ್ ತೆಗೆದುಕೊಂಡು ಮತ್ತೆ ಹೆಬ್ಬಾಲೆಗೆ ಹೋದೆವು . ಸುಮಾರು ೧೦.೩೦ ರ ವೇಳೆಗೆ ದೇವಸ್ಥಾನ ತಲುಪಿದೆವು . ಅಲ್ಲಿ ಮೊದಲಿನಂತೆ ಅಷ್ಟು ಜನ ಇರಲಿಲ್ಲ . ೨ ಗಂಟೆಯ ವೇಳೆಗೆ ಉತ್ಸವ ಮೂರ್ತಿ ಬಂಡ ಮೇಲೆ ಜನ ಸೇರಲು ಶುರುವಾದರು. ಎಲ್ಲ ಪೂಜೆಗಳು ಮುಗಿದ ಮೇಲೆ  ಎಂದಿನಂತೆ ಕೆಂಡ ತುಳಿಯುವ ಕಾರ್ಯಕ್ರಮ . ಮೊದಲ ಬಾರಿಗೆ ಇದನ್ನು ನೋಡುತ್ತಿದ್ದ ಕಿರಣ್ ಗೆ ಕುತೂಹಲ, ಇದಕ್ಕೆ ಮೊದಲು ಅನೇಕ ಬಾರಿ ಇನ್ನು ನೂಕುನುಗ್ಗಲ್ಲಲ್ಲಿ ಇದನ್ನು ನೋಡಿ ಕುಶಿ ಅನುಭವಿಸಿದ್ದ  ನಾನು ಎ ಬಾರಿ ಫೋಟೋ ಮತ್ತು ವೀಡಿಯೊ ತೆಗೆಯುವುದರಲ್ಲಿ ಮಗ್ನಳಾಗಿದ್ದೆ .

ಕೊನೆಯ ಹೆಂಗಸು ಕೆಂಡ ಹಾಯುವುದನ್ನು ನೋಡಿ , ನಾನು ಕಿರಣ್ ಮನೆಗೆ ಹೊರಡೋಣವೆಂದು ಕಾರಿನ ಕಡೆಗೆ ನಡೆದುಕೊಂಡು ಹೋಗುವಾಗ ಬೆಳಿಗ್ಗೆಇಂದ ಸುಮ್ಮನಿದ್ದ ಕಿರಣ್ , ನೀನು ಹೇಳಿದ ಸಣ್ಣ ಗುಡಿ , ಸಣ್ಣ ಕಾಡು(ಬನ) , ಕಾಲಿಡಲು ಜಾಗವಿಲ್ಲದಸ್ತು  ಜನ ಎಲ್ಲ ಸುಳ್ಳು ಕೇವಲ ಕೆಂಡ ತುಳಿಯುವುದೊನ್ದೆ  ಸತ್ಯ ಎಂದು ಗೇಲಿ ಮಾಡಿ ನಕ್ಕರು. ಸುಮಾರು ೧೨ ವರ್ಷಗಳ ಹಿಂದೆ ನಾನು ನೋಡಿದ್ದ  ಆಚರ, ವಿಚಾರ,ಪದತ್ತಿ ,ದೇವಸ್ತಾನ , ಊರ ಹಬ್ಬ ,ಅಮ್ಮನ ಹಬ್ಬ , ಬಂಶಕರಿ ಜಾತ್ರೆ ಈಗ ಸಂಪೂರ್ಣವಾಗಿ ಬದಲಾಗಿರುವುದು ನೋಡಿ -    ಬದಲಾವಣೆಯೊಂದೇ ಶಾಶ್ವತ ಎಂದುಕೊಂಡು ಕಾರು ಹತ್ತಿದೆ . ಆದರೆ ಈ ಬದಲಾವಣೆ ದೇವರಿಗೂ(ದೇವರ ಕಾರ್ಯಕ್ಕೂ)ಬೇಕೆ ?

ಇತ್ತೀಚಿಗೆ ತೆಗೆದ ದೇವಸ್ಥಾನದ ಕೆಲವು ಚಿತ್ರಗಳು








2 ಕಾಮೆಂಟ್‌ಗಳು: